ಬೆಂಗಳೂರು: ಎರಡನೇ ಪತ್ನಿಯನ್ನು ಕೊಂದು ಮೂರನೇ ಮದುವೆಗೆ ಹೊರಟ್ಟಿದ್ದ 39 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ರಿಜಿಸ್ಟ್ರಾರ್ ಮದುವೆಯಾಗಲು ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ದಂಪತಿಯನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ? ಬಿಹಾರದ ಮುಜಾಫರ್ಪುರ ಜಿಲ್ಲೆಯ ಸರಿಯಾ ಪಟ್ಟಣದ ಪೇಂಟರ್ ಆಗಿರುವ ಮೊಹಮ್ಮದ್ ನಸೀಮ್, ಎರಡನೇ ಪತ್ನಿ ರುಮೇಶ್ ಖಾತೂನ್ ಜೊತೆ ಸರ್ಜಾಪುರದಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ನಸೀಂ ತನ್ನ ಆರು ಮಕ್ಕಳ ಪತ್ನಿಯನ್ನು ಕೊಂದು ಅದನ್ನು ಆತ್ಮಹತ್ಯೆಯಂತೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇತ್ತೀಚೆಗೆ, ಆತನೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ರುಮೇಶ್ ನಿರಾಕರಿಸಿದ ನಂತರ ಆಕೆಯ ಶೀಲವನ್ನು ಶಂಕಿಸುತ್ತಿದ್ದ ನಸೀಂ, ಆಕೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸುತ್ತಿದ್ದ. ಈ ವಿಚಾರದಲ್ಲಿ ದಂಪತಿ ನಡುವೆ ಜಗಳವಾಗುತಿತ್ತು. ನವೆಂಬರ್ ಎರಡನೇ ವಾರದಲ್ಲಿ ಆಕೆಯ ಕೊಲೆಯಾಗಿತ್ತು. ಆಕೆಯ ದೇಹ, ಕೈ ಮತ್ತು ಕಾಲುಗಳನ್ನು ಕೇಬಲ್ ಗಳಿಂದ ಕಟ್ಟಿ ಮನೆಯಿಂದ ಸ್ವಲ್ಪ ದೂರದಲ್ಲಿರುವ ಚರಂಡಿವೊಂದರಲ್ಲಿ ಅರೆಬೆತ್ತಲೆ ದೇಹವನ್ನು ಎಸೆದಿದ್ದ.
ಒಂದು ದಿನದ ನಂತರ ಶವ ಪತ್ತೆಯಾಗಿತ್ತು. ನಂತರ ತನ್ನ ಎಂಟು ಮಕ್ಕಳನ್ನು ಬಿಹಾರದಲ್ಲಿರುವ ರುಮೇಶ್ ಅವರ ಕುಟುಂಬದ ಮನೆಗೆ ಕರೆದೊಯ್ದು, ಆಕೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಓಡಿಹೋಗಿರುವುದಾಗಿ ತಿಳಿಸಿದ್ದ. ಅಲ್ಲದೇ ಆ ಮಕ್ಕಳ ಶಿಕ್ಷಣ ಸೇರಿದಂತೆ ಎಲ್ಲಾ ಜವಾಬ್ದಾರಿಯನ್ನು ಅವರೇ ಹೊರಬೇಕು, ಪೊಲೀಸರಿಗೆ ದೂರು ನೀಡದಂತೆ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ.