ಕನಕ ಅಧ್ಯಯನ ಪೀಠ,ಕರ್ನಾಟಕ ವಿಶ್ವ ವಿದ್ಯಾನಿಲಯ, ಧಾರವಾಡ, ಚೇತನಾ ಫೌಂಡೇಶನ್ ನೀಡುವ ರಾಜ್ಯ ಮಟ್ಟದ “ಬೇಂದ್ರೆ ನುಡಿ ಸಿರಿ ಪ್ರಶಸ್ತಿ”ಯನ್ನು ಕರ್ನಾಟಕ ವಿಶ್ವ ವಿದ್ಯಾನಿಲಯದ ಕನಕ ಭವನದಲ್ಲಿ ಖ್ಯಾತ ಪತ್ರಕರ್ತ ವೆಂಕಟೇಶ ಎಸ್ ಸಂಪ ಅವರಿಗೆ ಪ್ರದಾನ ಮಾಡಲಾಯಿತು.
ಮೂರು ದಿನಗಳ ದಾರವಾಡ ನುಡಿ ಸಡಗರ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪತ್ರಿಕೋದ್ಯಮದ ಸಾಧನೆಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ೧೭ ವರ್ಷಗಳಿಂದ ನಿರಂತರವಾಗಿ, ಧನಾತ್ಮಕ ಪತ್ರಿಕೆ, ಸಂಪದ ಸಾಲು ಪತ್ರಿಕೆ ನಡೆಸುತ್ತಿರುವ, ವೆಂಕಟೇಶ ಎಸ್ ಸಂಪ ಅವರ ಸಾವಿರಾರು ಲೇಖನ, ಕತೆ, ಕವನಗಳು ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಹಾಗು ಹಲವಾರು ಟಿ ವಿ ಮತ್ತು ರೇಡಿಯೋ ಕಾರ್ಯಕ್ರಮ ನೆಡೆಸಿಕೊಟ್ಟಿದ್ದು, ಹಲವು ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸಾವಯವ ಕೃಷಿ, ರಕ್ತದಾನ, ಪ್ರಕೃತಿ ರಕ್ಷಣೆಯ ಜಾಗೃತಿ ಕಾರ್ಯಕ್ರಮ ಸೇರಿದಂತೆ ಬಹುಮುಖ ಪ್ರತಿಭೆಯ ವೆಂಕಟೇಶ ಸಂಪ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದೇವೆ ಎಂದು ಸಂಚಾಲಕ ಚಂದ್ರಶೇಖರ್ ಮಾಡಲಗೇರಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಶಶಿಧರ ನರೇಂದ್ರ, ಯೋಗೇಶ್ ಮಾಸ್ಟರ್, ಕರ್ನಾಟಕ ವಿಶ್ವ ವಿದ್ಯಾನಿಲಯದ ಸಂಯೋಜಕರಾದ ಡಾ.ಹನುಮೇಗೌಡ ಸಿ, ಚೇತನಾ ಫೌಂಡೇಶನ್ ನ ಚಂದ್ರಶೇಖರ್,ಇತರರು ಹಾಜರಿದ್ದರು.