ದೊಡ್ಡಬಳ್ಳಾಪುರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಸಹಯೋಗದೊಂದಿಗೆ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು.ಈ ವೇಳೆ ಗೌರವಾನ್ವಿತ ನ್ಯಾಯದಿಶರು, ಸದಸ್ಯ ಕಾರ್ಯದರ್ಶಿಗಳು ಆದ ಶ್ರೀ ಬೋಲ್ ಪಂಡಿತ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ತಮ್ಮ ಜೀವನದಲ್ಲಿ ಕಾನೂನು ಅರಿವು ತಿಳುವಳಿಕೆ ಬಹಳ ಮುಖ್ಯ ಏಕೆಂದರೆ ವಿದ್ಯಾರ್ಥಿಗಳಿಗೆ ಅರಿವಿಲ್ಲದೆ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ ಆದರೆ ಅದು ಅಪರಾಧ ಎಂದು ನಮಗೆ ತಿಳಿದಿರುವುದಿಲ್ಲ,
ವಿದ್ಯಾರ್ಥಿಗಳು ಸಹಜವಾಗಿ 16 ನೇ ವಹಿಸಿನಿಂದ 22 ನೇ ವಯಸಿನ ವರೆಗೆ ಮೋಜಿಗಾಗಿ ದೂಮಪಾನ ಮದ್ಯಪಾನ ತಂಬಾಕು ಉತ್ಪನ್ನಗಳ ಸೇವನೆ ಮಾದಕವಸ್ತುಗಳ ಸೇವನೆ ಮಾಡುತ್ತಾರೆ ಇದನ್ನು ಒಮ್ಮೆ ನೀವು ಆದರ ರುಚಿ ಪಳಗಿದರೆ ಮತ್ತೆ ವಾಪಸ್ ಬರಲು ಸಾದ್ಯವೇ ಇಲ್ಲ ಇದರಿಂದ ನಿಮ್ಮ ಭವಿಷ್ಯ ಜೀವನ ಹಾಳಾಗುತ್ತದೆ ಜೊತೆಗೆ ಇದರಿಂದ ನಿವು ಅಪರಾಧಿಗಳಾಗಿ ಶಿಕ್ಷೆಗೆ ಗುರಿಯಾಗಬೆಕಾಗುತ್ತದೆ ಹಾಗೆಯೇ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ದೌರ್ಜನ್ಯ ನಡೆದರೆ ಪೋಕ್ಸೋ ಕಾಯಿದೆಗೆ ಗುರಿಯಾಗಬೇಕಾಗುತ್ತದೆ ಜೊತೆಗೆ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ತೊಂದರೆ ಕೊಟ್ಟರೆ ದೌರ್ಜನ್ಯ ಎಸಗಿದರೆ ಅವರು ಸಹ ಶಿಕ್ಷೆಗೆ ಗುರಿಯಾಗಬೆಕಾಗುತ್ತದೆ ಎಂದು ಹೇಳಿದರು ಹೀಗಾಗಿ ವಿದ್ಯಾರ್ಥಿಗಳಿಗೆ ಕಾನೂನು ತಿಳುವಳಿಕೆ ತುಂಬಾ ಅಗತ್ಯ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಮಧುಸೂದನ್ ರವರು ವಿದ್ಯಾರ್ಥಿಗಳು ತುಂಬಾ ಅನಾವಶ್ಯಕವಾಗಿ ಮೋಬೈಲ್ ಪೋನ್ ಬಳಸುತ್ತಾರೆ ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಮಂಕಾಗುತ್ತದೆ ಅದುದರಿಂದ ವಿದ್ಯಾರ್ಥಿಗಳು ಮೋಬೈಲ್ ಪೋನ್ ಬಳಕೆ ಕಡಿಮೆ ಮಾಡಬೇಕು ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ತಾಲ್ಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ. ಕೃಷ್ಣಮೂರ್ತಿ ಅವರು ನಮ್ಮ ಸಂವಿಧಾನ ಹಾಗೂ ನಮ್ಮ ಕಾನೂನು ನಮ್ಮ ಹೆಮ್ಮೆ ಅಂಬೇಡ್ಕರ್ ರವರು ನಮಗೆ ವಿಶ್ವದಲ್ಲೇ ಉತ್ತಮವಾದ ಸಂವಿಧಾನ ನೀಡಿದ್ದಾರೆ ಇದರಿಂದಾಗಿಯೇ ತಳಮಟ್ಟದ ಸಮುದಾಯದಗಳು ಸಮಾನವಾದ ಶೈಕ್ಷಣಿಕ ಹಾಗೂ ಸಾಮಾಜಿಕ ನ್ಯಾಯ ಪಡೆಯಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ ಹೆಚ್ ಜಿ ವಿಜಯಕುಮಾರ್ ರವರು ವಿದ್ಯಾರ್ಥಿಗಳು ತಮ್ಮ ಮುಂದಿನ ವೃತ್ತಿ ಜೀವನದಲ್ಲಿ ಸಂತೋಷ ಮೂಡಲು ಕಾನೂನು ತಿಳುವಳಿಕೆ ತುಂಬಾ ಅಗತ್ಯ ಈ ಕಾರ್ಯಕ್ರಮದ ಮುಖ್ಯ ಉದ್ದೇಶವು ಮಕ್ಕಳಲ್ಲಿ ಸಮಾನತೆ ಸಾಮಾನ್ಯ ತಿಳುವಳಿಕೆ ಮೂಡಿಸುವುದೆ ಆಗಿದೆ ಎಂದು ಹೇಳಿದರು .ಕಾರ್ಯಕ್ರಮದಲ್ಲಿ ಸುಜ್ಞಾನ ದೀಪಿಕಾ ಸಂಸ್ಥೆಯ ಮುಖ್ಯಸ್ಥರಾದ ಎಂ ಎಸ್ ಮಂಜುನಾಥ್ ಪ್ರಾಂಶುಪಾಲ ಎಂ ಸಿ ಮಂಜುನಾಥ್, ರಾಮಮೂರ್ತಿ, ಕೃಷ್ಣ ಪ್ರಸಾದ್, ಪತ್ರಕರ್ತ ಶ್ರೀಕಾಂತ್ ಉಪನ್ಯಾಸಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.