ಮೊಹಮ್ಮದ್ ಶಮಿ ಅವರ ಮಾರಕ ಬೌಲಿಂಗ್ ಮತ್ತು ಉಪನಾಯಕ ಶುಭಮನ್ ಗಿಲ್ ಅವರ ಜವಾಬ್ದಾರಿಯುತ ಶತಕದಿಂದಾಗಿ ಬಾಂಗ್ಲಾದೇಶವನ್ನು ಟೀ ಇಂಡಿಯಾ 6 ವಿಕೆಟ್ ಗಳಿಂದ ಮಣಿಸಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ.ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ ಸುಲಭ ಗುರಿಯನ್ನು ಟೀಂ ಇಂಡಿಯಾ ಕೇವಲ46.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿ ಜಯಘೋಷ ಮೊಳಗಿಸಿತು.
ಗೆಲ್ಲಲು 229 ರನ್ ಗಳ ಗುರಿ ಪಡೆದಿದ್ದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಶುಭಮನ್ ಗಿಲ್ ಅವರು ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ ಗೆ ಇವರಿಬ್ಬರು ಕೇವಲ 9.5 ಓ ವರ್ ಗಳಲ್ಲಿ 69 ರನ್ ಗಳ ಜೊತೆಯಾಟವಾಡಿದರು. ರೋಹಿತ್ ಶರ್ಮಾ ಕೇವಲ 36 ಓವರ್ ಗಳಲ್ಲಿ 41 ರನ್ ಗಳಿಸಿ ಔಟಾದರು. ನಂತರ ಕ್ರೀಸಿಗೆ ಅಗಮಿಸಿದ ವಿರಾಟ್ ಕೊಹ್ಲಿ ಅವರು 22 ರನ್ ಗಳಿಸಿದ್ದಾಗ ಸುಲಭದ ಕ್ಯಾಚ್ ನೀಡಿ ಔಟಾದರು. ಶ್ರೇಯಸ್ ಅಯ್ಯರ್ (15) ಮತ್ತು ಅಕ್ಷರ್ ಪಟೇಲ್ (8) ಅವರು ಕೂಡ ಹೆಚ್ಚು ರನ್ ಗಳಿಸಲಿಲ್ಲ. ಆದರೆ ಶುಭವನ್ ಗಿಲ್ ಮತ್ತು ಕೆಎಲ್ ರಾಹುಲ್ ಅವರು ತಂಡವನ್ನು ವಿಜಯದ ದಡ ಸೇರಿಸಿದರು.
ಶುಭಮನ್ ಗಿಲ್ ತಾಳ್ಮೆಯ ಆಟ 129 ಎಸೆತಗಳನ್ನು ಎದುರಿಸಿದ ಶುಭಮನ್ ಗಿಲ್ ಅವರು 9 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 101 ರನ್ ಗಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಕೆಎಲ್ ರಾಹುಲ್ ಅವರು 47 ಎಸೆತಗಳಿಂದ 41 ರನ್ ಗಳಿಸಿದರು. ಇವರಿಬ್ಬರು 5ನೇ ವಿಕೆಟ್ ಗೆ ಮುರಿಯದ 87 ರನ್ ಗಳಿಸಿದ್ದರು. ಬಾಂಗ್ಲಾದೇಶದಿಂದ ಒಂದು ಜೀವದಾನ ಪಡೆದ ಕೆಎಲ್ ರಾಹುಲ್ ಮತ್ತೆ ಜಾಗರೂಕತೆಯಿಂದ ಆಡಿದರು. ಹೀಗಾಗಿ ವಿಕೆಟ್ ಪಡೆಯುವ ಎದುರಾಳಿ ತಂಡದ ಯಾವ ಪ್ರಯತ್ನವೂ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಭಾರತ ತಂಡ ಗೆಲುವಿನ ನಗೆ ಬೀರಿತು.