ಕನ್ನಡ ಸಾಹಿತ್ಯ ಪರಿಷತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಇವರ ವತಿಯಿಂದ ವಿದ್ಯಾನಿಕೇತನ ಆಂಗ್ಲ ಶಾಲೆ ಟಿ ದಾಸರಹಳ್ಳಿ ಇಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ಅರಿವು ಮೂಡಿಸುವತ್ತ ಕನ್ನಡ ಸಾಹಿತ್ಯ ಮತ್ತು ಗೀತ ಗಾಯನ ಕುರಿತ ವಿಶೇಷ ಕಾರ್ಯಕ್ರಮ ಜರಗಿತು.
ಶ್ರೀಲಿಂಗರಾಜು ಎ ಕಾಳೇನಹಳ್ಳಿ ಮೇಷ್ಟು ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡುವ ಆಲೋಚನೆಯ ಜೊತೆಗೆ ಕನ್ನಡ ಸೇವಾ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ.
ವಿದ್ಯಾನಿಕೇತನ ಆಂಗ್ಲ ಶಾಲೆಯ ಕಾರ್ಯದರ್ಶಿಗಳಾದ ಶ್ರೀಎಂ.ಮುನಿರಾಜು ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಡಾ. ಗುಣವಂತ ಮಂಜು ಆಂಗ್ಲ ಶಾಲೆಗಳಲ್ಲಿ ಕನ್ನಡ ಡಿಂಡಿಮ ಬಾರಿಸಿದರೆ ಮಾತ್ರ ಬೆಂಗಳೂರು ಉಳಿಯುತ್ತದೆ ಜೊತೆಗೆ ಕರ್ನಾಟಕದ ಸಾಂಸ್ಕöÈತಿಕ ಜಗತ್ತು ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು. ಪ್ರಾಂಶುಪಾಲರಾದ ಶ್ರೀಮತಿ ಪ್ರೀತಿ ಎ.ಆರ್, ಮುಖ್ಯ ಶಿಕ್ಷಕಿ ಡಿ.ಜಿ. ಸುಧಾಮಣಿ, ಗಾಯಕ ಶ್ರೀ ಕೃಷ್ಣಮೂರ್ತಿ, ಹಾಗೂ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿದ್ಯಾನಿಕೇತನ ಆಂಗ್ಲ ಶಾಲೆಯಲ್ಲಿ ೮೧ನೇ ಸಾಹಿತ್ಯದ ಅರಿವು ಕಾರ್ಯಕ್ರಮ



