ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ವತಿಯಿಂದ ನಡೆಸುತ್ತಿರುವ ಬರ ಅಧ್ಯಯನ ರಾಜಕೀಯದಿಂದ ಕೂಡಿದ್ದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮಾಡುತ್ತಿರುವ ಬರ ಅಧ್ಯಯನ ರಾಜಕಾರಣಕ್ಕಾಗಿ ಮಾಡಲಾಗುತ್ತಿದೆ ಎಂದಿರುವರ ಅವರು, ಅವರು ಬರ ಅಧ್ಯಯನ ಮಾಡಲಿ,ಇದಕ್ಕೆ ನಮ್ಮ ತಕರಾರು ಏನು ಇಲ್ಲ. ಈಗಾಗಲೇ ಕೇಂದ್ರದಿಂದ ಬರ ಅಧ್ಯಯನ ತಂಡ ಬಂದು ಬರ ಅಧ್ಯಯನ ಮಾಡಿ ಹೋಗಿದೆ.
ಆದರೆ ವರದಿ ಕೊಟ್ಟಿಲ್ಲ. ರಾಜ್ಯಸರ್ಕಾರದಿಂದಲೂ ಬರ ಅಧ್ಯಯನ ನಡೆಸಿ ಪರಿಹಾರಕ್ಕೆ ಕೋರಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. 13900 ಕೋಟಿ ಪರಿಹಾರ ಮಂಜೂರು ಮಾಡುವಂತೆ ಪತ್ರ ಬರೆಯಲಾಗಿದೆ. ಆದರೆ ಇದ್ಯಾವುದಕ್ಕೂ ಕೇಂದ್ರ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಿಲ್ಲ. ರಾಜ್ಯದಲ್ಲಿ ಒಟ್ಟು 33ಸಾವಿರದ 700 ಕೋಟಿ ರೂ.ನಷ್ಟು ನಷ್ಟ ಸಂಭವಿಸಿದೆ.
ರಾಜ್ಯದ 25 ಸಂಸದರರು ಹೋಗಿ ಕೇಂದ್ರ ಸರ್ಕಾರದ ಮುಂದೆ ಪರಿಹಾರಕ್ಕೆ ಮನವಿ ಮಾಡಲಿ ಇವರಿಗೆ ರಾಜ್ಯ ಹಾಗು ರಾಜ್ಯದ ರೈತರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಕೇಂದ್ರದ ಮುಂದೆ ಹೋಗಿ ಪರಿಹಾರಕ್ಕಾಗಿ ಒತ್ತಾಯಿಸಿ ಪರಿಹಾರ ಮಂಜೂರು ಮಾಡಸಿಲಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಬರ ಅಧ್ಯಯನ ವೈಜ್ಞಾನಿಕ ಮಾದರಿಯಲ್ಲಿ ನಡೆದಿಲ್ಲ ಎಂದು ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿ, ಬರ ಅಧ್ಯಯನ ಮಾಡಿರುವವರು ಕೇಂದ್ರ ತಂಡ ಅವರನ್ನು ಕೇಳಲಿ ನಮ್ಮ ರಾಜ್ಯದ ಮಂತ್ರಿಗಳು ಹೋಗಿ ಕೇಂದ್ರದ ಸಂಬಂಧಪಟ್ಟ ಮಂತ್ರಿಗಳ ಭೇಟಿಗೆ ಅನುಮತಿ ಕೇಳಿದರೂ ಅನುಮತಿ ನೀಡಿಲ್ಲ ಎಂದು ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ ದೂರಿದರು.