ಪೀಣ್ಯ ದಾಸರಹಳ್ಳಿ: ಬೆಂಗಳೂರಿನ ಹೆಬ್ಬಾಳದಲ್ಲಿರುವ ಜಿ. ಕೆ.ವಿ.ಕೆ. ಕ್ಯಾಂಪಸ ನಲ್ಲಿ ಐ. ಸಿ. ಎ. ಅರ್ – ಐ. ಐ.ಹೆಚ್. ಆರ್.ವತಿಯಿಂದ ಡಿಸೆಂಬರ್ 13 ರಿಂದ 16 ರವರೆಗೆ ನಡೆದ ದಕ್ಷಿಣವಲಯ ಕ್ರೀಡಾ ಕೂಟದಲ್ಲಿ ದೆಹಲಿ, ಗೋವಾ, ಕರ್ನಾಟಕ, ಆಂದ್ರಪ್ರದೇಶ, ತಮಿಳುನಾಡು ರಾಜ್ಯಗಳ 23 ಐ. ಸಿ .ಎ .ಆರ್ ಸಂಸ್ಥೆಗಳ 700 ಆಟಗಾರರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.
ಕಬ್ಬಡಿ, ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್, ಟೇಬಲ್ ಟೆನ್ನಿಸ್, ಕೆರಮ್, ರನ್ನಿಂಗ್ ರೇಸ್, ಥ್ರೋ ಬಾಲ್, ಚೆಸ್ ಮುಂತಾದ ಆಟಗಳು ನೆಡೆದವು.ಡಾ. ಸೆಂಥಿಲ್ ಕುಮಾರ್, ಡಾ. ಅನಿಲ್ ನಾಯರ್, ಡಾ. ಸ್ಮಿತಾ, ಶ್ರೀ ಎನ್. ಮುನಿರಾಜು ಶ್ರೀ ರಾಮಚಂದ್ರ, ಶ್ರೀ ವಿಜಯ ಕುಮಾರ್ ಅಥ್ಲೆಟಿಕ್ ಗಳಾದ ಬಿ. ಮಲ್ಲೇಶ್, ರಾಜಣ್ಣ, ಸಾಯಿ ಮೋನಿಕಾ ಲಕ್ಷ್ಮಿ, ವೆಂಕಟ ಲಕ್ಷ್ಮಮ್ಮ ರವರುಗಳ ನಾಯಕತ್ವದಲ್ಲಿ ಐ. ಸಿ. ಎ. ಆರ್ – ಐ. ಐ.ಹೆಚ್.ಆರ್ 137 ಅಂಕ ಗಳೊಂದಿಗೆ ಪ್ರಥಮ ಸ್ಥಾನ ,75 ಅಂಕ ಗಳೊಂದಿಗೆ ಸಿ. ಟಿ. ಸಿ. ಆರ್. ಐ., ಕೊಚ್ಚಿನ್ ದ್ವಿತೀಯ ಸ್ಥಾನ ಪಡೆದವು.
ಕ್ರೀಡಾ ಕೂಟದ ಸಮಾರೋಪ ಸಮಾರಂಭದಲ್ಲಿ ,ಆಯೋಜಕರಾದ ಡಾ. ಆರ್.ಹೆಚ್ ಲಕ್ಷ್ಮಣ್ ಮತ್ತು ಡಾ. ಶಿವಶಂಕರ್. ಅಥ್ಲೆಟ್ಗಳಾದ ಡಾಕ್ಟರ್ ಮದು ಮತ್ತು ಡಾಕ್ಟರ್ ಮಂಜುನಾಥ ಗೌಡ ಯಲಹಂಕ ಬಿ. ಎಸ್. ಎಫ್ ನ ಐ. ಜಿ (Iಉ) ಶಾ, ಜಿ. ಕೆ. ವಿ. ಕೆ. ಕುಲಪತಿ ಡಾ. ಪಾಟೀಲ್ ಮತ್ತು ಐ.ಐ.ಹೆಚ್. ಆರ್.ನಿರ್ದೇಶಕ ರಾದ ಡಾ. ಸಂಜಯ್ ಕುಮಾರ್ ಸಿಂಗ್ ರವರು ಆಟದ ಮಹತ್ವವನು ತಿಳಿಸಿದರು.