ಬೆಂಗಳೂರು: 18ನೇ ಲೋಕಸಭಾ ಚುನಾವಣೆಯ ಮತ ಎಣಿಕೆ ಜೂನ್ 4 ರಂದು ಇರುವ ಕಾರಣ ಕೇಂದ್ರ ವಲಯದ ಐಜಿಪಿ ರವಿಕಾಂತ್ ಗೌಡರ ನೇತೃತ್ವದಲ್ಲಿ ಆರು ಜಿಲ್ಲೆಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಹಿಡಿದು ಕೆಳಮಟ್ಟದ ಸಿಬ್ಬಂದಿ ಎಲ್ಲರೂ ನಿನ್ನೆ ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿರುತ್ತಾರೆ.
ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಕೆ ಜಿ ಎಫ್, ರಾಮನಗರ ಮತ್ತು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠ ಅಧಿಕಾರಿಗಳು, ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿಗಳು ಅಧಿಕಾರಿಗಳು ಮತ್ತು ಕೆಳಗೆ ದರ್ಜೆ ಸಿಬ್ಬಂದಿ ಸೇರಿರುತ್ತಾರೆ ಎಂದು ರವಿಕಂತೆಗೌಡ ಇಂದು ಸಂಜೆಗೆ ತಿಳಿಸಿದರು.ಅಂದಾಜು ಸುಮಾರು 150 ಪೊಲೀಸ್ ಠಾಣೆಗಳಿರುವ ಕೇಂದ್ರ ವಲಯ ಐಜಿಪಿ, ಆರು ಜಿಲ್ಲೆಗಳ ರೌಡಿಶೀಟರ್ ಮನೆಗಳ ಮನೆ ಮೇಲೆ ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 4:30 ತನಕ ದಾಳಿ ನಡೆಸಿರುತ್ತಾರೆ.
ಸುಮಾರು ಒಂದು ಸಾವಿರಕ್ಕೂ ಅಧಿಕ ರೌಡಿ ಶೀಟರ್ ಗಳ ಮನೆಯ ಮೇಲೆ ದಾಳಿ ನಡೆಸಿ ಕೆಲವರನ್ನು ಬಂಧಿಸಿ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ತಿಳಿಸಿದರು.ಕೆಲ ರೌಡಿಶೀಟರ್ಗಳು ಗಂಭೀರವಾದ ಪ್ರಕರಣಗಳಲ್ಲಿ ಜಾಮೀನ ಮೇಲೆ ಹೊರಗಡೆ ಬಂದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಸಹ ಬಂಧಿಸಿರುತ್ತಾರೆ ಎಂದು ತಿಳಿಸಿದರು.
ಕೆಲ ರೌಡಿಶೀಟರ್ಗಳ ಮನೆಗಳಿಂದ ಮಾರಕಸ್ತ್ರಗಳನ್ನು ಸಹ ವಶಪಡಿಸಿಕೊಂಡಿರುತ್ತಾರೆ.ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗಿಯಾಗಬಾರದೆಂದು ಎಚ್ಚರಿಕೆಯೂ ಸಹ ನೀಡಿರುತ್ತಾರೆ.