ಮಂಡ್ಯ: ಆರೋಗ್ಯದಲ್ಲಿ ಆದಏರುಪೇರಿನಿಂದ ವಿಶ್ರಾಂತಿಕಡೆಗೆ ಜಾರಿದ್ದಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ಅವರ ಸ್ವಕ್ಷೇತ್ರವಾದ ಮಂಡ್ಯಗೆ ಬರೋಬ್ಬರಿ ೧೦೦ ದಿನಗಳ ಬಳಿಕ ಇಂದು ಬರಲಿದ್ದಾರೆ. ಇಂದು ಮಂಡ್ಯದ ಪೇಟೆ ಬೀದಿಯಲ್ಲಿ ನಿರ್ಮಾಣವಾಗಿರುವ ಜಯಚಾಮರಾಜೇಂದ್ರಒಡೆಯರ್ ಮಾರುಕಟ್ಟೆಯ ಉದ್ಘಾಟನೆಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಆಗಮಿಸಲಿದ್ದಾರೆ. ಮೂರು ತಿಂಗಳ ಹಿಂದೆ ಹೆಚ್ಡಿಕೆ ಮಂಡ್ಯದಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಭೆಯನ್ನು ನಡೆಸಿದ್ದರು. ಆದಾದ ಬಳಿಕ ಅವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗಿದ್ದವು.
ಹೀಗಾಗಿ ಕುಮಾರಸ್ವಾಮಿಅವರು ವಿಶ್ರಾಂತಿಕಡೆಗೆಜಾರಿದ್ದರು. ಈ ವೇಳೆ ಹೆಚ್ಡಿಕೆಅವರ ದಿಢೀರ್ತೂಕ ಇಳಿಕೆ, ಸೊರಗಿದದೇಹಕಂಡುಕಾರ್ಯಕರ್ತರಲ್ಲಿಆತಂಕ ಮೂಡಿದ್ದವು.ಇದೀಗ ಆರೋಗ್ಯ ಸುಧಾರಿಸಿರುವ ಬೆನ್ನಲ್ಲೇಇಂದು ೧೦೦ ದಿನಗಳ ಬಳಿಕ ಕುಮಾರಸ್ವಾಮಿ ಮಂಡ್ಯಗೆಆಗಮಿಸುತ್ತಿದ್ದು, ಜೆಡಿಎಸ್ಕಾರ್ಯಕರ್ತರು, ಕುಮಾರಸ್ವಾಮಿ ಅಭಿಮಾನಿಗಳು ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆಇದೆ.