ದಾವಣಗೆರೆ: ನೀತಿ ಸಂಹಿತೆ ಮುಗಿದ ತಕ್ಷಣ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಆಗಲಿದೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, 56 ಸಾವಿರ ಹುದ್ದೆಗಳ ಭರ್ತಿಗೆ ಒಳ ಮೀಸಲಾತಿ ಅನ್ವಯ ಆಗುತ್ತೆ. ಈಗ ಬೇಕಾಗಿರೋದು ರೋಸ್ಟರ್ ಪದ್ಧತಿ 101 ಉಪಜಾತಿಗಳಲ್ಲಿ ಎಬಿಸಿ ಮಾಡಿ ರೋ-ಸ್ಟರ್ ಜಾರಿಗೆ ತರಬೇಕು ಎಂದು ತಿಳಿಸಿದರು.ಇನ್ನು ಇರಾನ್, ಇಸ್ರೇಲ್ ಯುದ್ಧದ ಪರಿಣಾಮದಿಂದಾಗಿ ಇದೀಗ ದೇಶದಲ್ಲಿ ಹಾಗು ರಾಜ್ಯದಲ್ಲಿ ಸಿಲಿಂಡರ್ ಅಭಾವ ಇದೇ. ಹಾಗಾಗಿ ಜನರು ಗ್ಯಾಸ್ ತೆಗೆದುಕೊಳ್ಳಲು ಎಜೇನ್ಸಿ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಇದೀಗ ರಾಜ್ಯದಲ್ಲಿ `ಐPಉ’ ಅಭಾವ ಇಲ್ಲ, ಜನರು ಆತಂಕಕ್ಕೆ ಒಳಗಗಬಾರದು ಎಂದು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಗ್ರಾಹಕರು ಅನಗತ್ಯವಾಗಿ ಕ್ಯೂ ನಿಲ್ಲುತ್ತಿದ್ದಾರೆ. ನಮಗೆ ಬೇಕಾದಷ್ಟು ಐPಉ ಸಿಲಿಂಡರ್ ಗಳು ಲಭ್ಯವದೆ. ಈ ರೀತಿ ಗೊಂದಲಕ್ಕೆ ಕಾರಣ ಖಾಸಗಿಯವರ ಬಳಿ ಹೋಗುತ್ತಿದ್ದಾರೆ. ಹಾಗಾಗಿ ಕಂಪನಿಗಳ ಜೋತೆ ನಾನು ಮಾತಾಡಿದ್ದೇನೆ. ಸದ್ಯಕ್ಕೆ ಸಮಸ್ಯೆ ಇಲ್ಲ ಎಂದು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ನೀತಿ ಸಂಹಿತೆ ಮುಗಿದ ಬಳಿಕ ಒಳ ಮೀಸಲಾತಿ ಜಾರಿ



