ಮೈಸೂರು: ಒಣಗಿದ ದಾಸವಾಳ ಹೂ ನುಂಗಿದ್ದ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹೆಜ್ಜುರು ಗ್ರಾಮದಲ್ಲಿ ನಡೆದಿದೆ.ಮನೆಯ ಹೊಸ್ತಿಲಿನಲ್ಲಿ ಪೂಜೆಗೆ ಎಂದು ಹೂವು ಇಟ್ಟಿದ್ದರು. ಈ ವೇಳೆ ಆರೂವರೆ ತಿಂಗಳ ಚಿನ್ಮಯಗೌಡ ಚಿನ್ಮಯ್ ಗೌಡ ಒಣಗಿದ ದಾಸವಾಳ ಹೂವನ್ನು ನುಂಗಿ ಅಸ್ವಸ್ಥಗೊಂಡಿದ್ದ.



