ರಾಮನಗರ: ಕೆಆರ್ಡಿಎಲ್ ಅಧ್ಯಕ್ಷರಾಗಿ ನೂತನ ವಾಗಿ ನೇಮಕಗೊಂಡ ಶಾಸಕ ಎಚ್.ಸಿ.ಬಾಲಕೃಷ್ಣ ಅವರನ್ನು ಬಿಡದಿ ಪುರಸಭೆ ಸದಸ್ಯರಾದ ಸಿ.ಉಮೇಶ್ ಅವರು ಗುರುವಾರ ಹೂಗುಚ್ಚ ನೀಡಿ ಅಭಿನಂದಿಸಿದರು.
ಈ ವೇಳೆ ಅವರು ಪತ್ರಿಕೆಯೊಂದಿಗೆ ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಸದಸ್ಯರಾದ ಸಿ.ಉಮೇಶ್ ಮಾತನಾಡಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಗಡಿ ಶಾಸಕರಾದ ಎಚ್.ಸಿ.ಬಾಲಕೃಷ್ಣ ಅವರಿಗೆ ಕರ್ನಾಟಕ ರಾಜ್ಯ ರಸ್ತೆ ಅಬಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿದೆ.
5 ಅವಧಿಗೆ ಶಾಸಕರಾಗಿ ಅಧಿಕಾರ ನಡೆಸಿರುವ ಎಚ್ಸಿಬಿ ಅವರಿಗೆ ಅಭಿವೃದ್ದಿ ಕಾರ್ಯಗಳನ್ನು ಮಾಡುವ ಬದ್ದತೆ ಇರುವಂತಹ ಅವರನ್ನು ಗುರ್ತಿಸಿ ಜವಬ್ದಾರಿ ನೀಡಿದೆ. ಆಗಾಗಿ ಕಾಂಗ್ರೆಸ್ ಪಕ್ಷದ ವರಿಷ್ಟರುಗಳಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದರು.
ರಾಜ್ಯದಲ್ಲಿ ರಸ್ತೆ ಅಭಿವೃದ್ದಿ ಕಾರ್ಯಗಳು ಸುಗಮವಾಗಿ ನಡೆಯಲಿವೆ. ಎಚ್.ಸಿ.ಬಾಲಕೃಷ್ಣ ಅವರು ಪಾರದರ್ಶಕದಂತೆ ಓಡಾಡುವ ವ್ಯಕ್ತಿ, ಕೊಟ್ಟಿರುವ ಜವಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಲಿದ್ದಾರೆ.
ಒಟ್ಟಾರೆ ಅವರ ಮೇಲೆ ಇಟ್ಟಿರುವ ನಂಬಿಕೆಗೆ ಚ್ಯುತಿಭಾರದ ರೀತಿಯಲ್ಲಿ ರಸ್ತೆ ಅಭಿವೃದ್ದಿ ಕಾರ್ಯ ಸೇರಿದಂತೆ ಕೆಆರ್ಡಿಎಲ್ ನಲ್ಲಿನ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ ಎಂದ ಅವರು ಅವರಿಗೆ ನೀಡಿರುವ ಅಧ್ಯಕ್ಷ ಸ್ಥಾನದಿಂದ ಕ್ಷೇತ್ರದಲ್ಲಿ ಮತಗಟ್ಟೆ ಹಂತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಉತ್ಸಾಹ ಬಂದಿದೆ. ಒಟ್ಟಾರೆ ರಾಜ್ಯದ ರಸ್ತೆ ಅಭಿವೃದ್ದಿ ಹಾಗೂ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಕೆಆರ್ಡಿಎಲ್ ಅಧ್ಯಕ್ಷ ಸ್ಥಾನ ನೆರವಾಗಲಿದೆ ಎಂದು ಸಂತಸ ಹಂಚಿಕೊಂಡರು. ಈ ವೇಳೆ ಮುಖಂಡ ರಾಜಣ್ಣ ಇದ್ದರು.