ಚಂದಾಪುರ: ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥ ಸಂಚಲನ ಶಿಬಿರಕ್ಕೆ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿ ನಮ್ಮ ಬೆಂಗಳೂರು ನಗರ ಮತ್ತು ನಮ್ಮ ರಾಜ್ಯವನ್ನು ಪ್ರತಿನಿಧಿಸಿದ್ದು ರಾಜ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಏರಡನೆ ಸ್ಥಾನ ಪಡೆದುಕೊಂಡು ಅತ್ಯುತ್ತಮ ಪ್ರದರ್ಶನ ನೀಡಿ ಯಶಸ್ವಿಯಾಗಿ ರಾಜ್ಯಕ್ಕೆ ಹಿಂತಿರುಗಿ ಬಂದಿದ್ದು ಅವರನ್ನ ಕಾಲೇಜಿನ ಕೀರ್ತಿಯನ್ನು ಹೆಚ್ಚಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಡಾ.ಬಿನು ವಿದ್ಯಾರ್ಥಿಗಳನ್ನು ಅಭಿನಂದಿಸಿ ತಿಳಿಸಿದರು.
ಅವರು ಹೆಬ್ಬಗೋಡಿಯ ಎಸ್.ಎಪ್.ಎಸ್. ಕಾಲೇಜಿನ ಎನ್.ಸಿ.ಸಿ ಕೆಡೆಟ್ ಗಳಾದ ತರುಣ್ ಮತ್ತು ಅಜಯ್ ಎಂಬ ಇಬ್ಬರು ವಿದ್ಯಾರ್ಥಿಗಳು ದೆಹಲಿಯಲ್ಲಿ ಇತ್ತೀಚೆಗೆ ನಡೆದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಏರಡನೆ ಸ್ಥಾನ ಪಡೆದು ಪ್ರಶಸ್ತಿ ಹಾಗೂ ಪ್ರಶಂಸೆಯ ಪತ್ರವನ್ನು ಪಡೆದಿರುವುದನ್ನು ಅಭಿನಂದಿಸಿ ಮಾತನಾಡಿದರು.
ರಾಜ್ಯಕ್ಕೆ ಕೀರ್ತಿ ನಮ್ಮ ಕಾಜೇಜು ಸ್ಪೂರ್ತಿ:- ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ನಮ್ಮ ಕಾಲೇಜಿನ ಎನ್ ಸಿ ಸಿ ಅಧಿಕಾರಿಯಾದಂತಹ ಕ್ಯಾಪ್ಟನ್ ಸಂಪತ್ ಕುಮಾರ್ ಅವರ ಪರಿಶ್ರಮ ಹಾಗೂ ಅವರ ತರಬೇತಿಯನ್ನು ನಾವು ಸ್ಮರಿಸಬೇಕು ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಬಹಳ ಶ್ರಮವಹಿಸಿ ಈಸಾಧನೆಯನ್ನು ಗಳಿಸಿದ್ದಾರೆ.
ನಿಜಕ್ಕೂ ಹೆಮ್ಮೆ ಹಾಗೂ ಸಂತೋಷವಾಗಿದೆ ಎಂದರುಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ನಿರ್ದೆಶಕರ ವತಿಯಿಂದ ಪ್ರಶಂಸನಾ ಪತ್ರ ಮತ್ತು ಪ್ರಶಸ್ಥಿಯನ್ನು ಎಸ್.ಎಪ್.ಎಸ್. ಕಾಲೇಜಿನ ಎನ್.ಸಿ.ಸಿ ಕೆಡೆಟ್ ಗಳಾದ ತರುಣ್ ಮತ್ತು ಅಜಯ್ ಎಂಬ ಇಬ್ಬರು ವಿದ್ಯಾರ್ಥಿಗಳಾದ ಈ ಇಬ್ಬರು ಕೆಡೆ ಟ್ಸ್ ಗಳು ಪಡೆದುಕೊಂಡಿದ್ದಾರೆ ಎಂಬುದು ಕಾಲೇಜು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಂತಸ ನೀಡಿದೆ.
ವಿದ್ಯಾರ್ಥಿಗಳ ಪೋಷಕರಿಗೆ ಸನ್ಮಾನ:- ಇನ್ನು ಎನ್.ಸಿ.ಸಿ ಕೆಡೆಟ್ ಗಳಾದ ತರುಣ್ ಮತ್ತು ಅಜಯ್ ಇಬ್ಬರು ವಿದ್ಯಾರ್ಥಿಗಳು ಇಂದು ಎಸ್.ಎಪ್.ಎಸ್ ಕಾಲೇಜಿಗೆ ಆಗಮಿಸುತ್ತಿದ್ದಂತೆ ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ಆಡಳಿತ ಮಂಡಳಿಯವರು ಹಾಗೂ ಬೋದಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇಬ್ಬರು ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡುವ ಮೂಲಕ ಹಾಗೂ ಸನ್ಮಾನಿಸುವ ಮೂಲಕ ಗೌರವ ಪೂರ್ವಕವಾಗಿ ಅಭಿನಂದನೆ ಸಲ್ಲಿಸಲಾಯಿತು ಹಾಗೇ ಸಾಧನೆಗೈದ ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ ಅವರಿಗೂ ಸಿಹಿ ತಿನಿಸಿ ಅವರನ್ನು ಕಾಲೇಜು ಆಡಳಿತ ಮಂಡಳಿ ಸನ್ಮಾಸಿ ಗೌರವಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಡಾ.ಬಿನು, ಉಪ ಪ್ರಾಂಶುಪಾಲರಾದ ಫಾದರ್ ಜೀಜೋ, ಹಣಕಾಸು ವ್ಯವಸ್ಥಾಪಕರಾದ ಫಾದರ್ ರಾಬಿನ್, ಕಂಪ್ಯೂಟರ್ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಶೈಲಜ, ಕಾಲೇಜಿನ ಎನ್ ಸಿ ಸಿ ಅಧಿಕಾರಿಯಾದಂತಹ ಕ್ಯಾಪ್ಟನ್ ಸಂಪತ್ ಕುಮಾರ್, ಕಾಲೇಜಿನ ಆಡಳಿತ ಮಂಡಳಿ,ಪೋಷಕರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಬಾಗವಹಿಸಿದ್ದರು.