ಬೆಳಗಾವಿ: ಇದೇನಿದ್ದರೂ ಡಿಕೆಶಿ ಮತ್ತು ರಮೇಶ ಜಾರಕಿಹೊಳಿ ನಡುವಿನ ವೈಯಕ್ತಿಕ ಯುದ್ಧ, ಮಿಸ್ಟರ್ ಶಿವಕುಮಾರ ನೀನು ರಾಜಕಾರಣಿ ಎನ್ನಲು ನಾಲಾಯಕ್ ಎಂದು ಶಾಸಕ ರಮೇಶ ಜಾರಕಿಹೊಳಿ ಹರಿಹಾಯ್ದಿದ್ದಾರೆ.
ಇಂದು ಬೆಳಗಾವಿ ಖಾಸಗಿ ಹೊಟೇಲ್ನನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಆತ ನನಗೆ ವೈಯಕ್ತಿಕ ಟಾರ್ಗೇಟ್ ಮಾಡಬಾರದಿತ್ತು. ರಾಜಕಾರಣದಲ್ಲಿ ಆತ ಇಂತಹ ಷಡ್ಯಂತ್ರ ಮಾಡಬಾರದಿತ್ತು. ನೂರಾರು ದಾಖಲೆಗಳು ನಮ್ಮ ಬಳಿ ಆತನ ವಿರುದ್ಧ ಇವೆ. ನಾನು ಸೂಕ್ತ ಪ್ರಾಧಿಕಾರದ ಮುಂದೆ ಡಿಕೆಶಿ ವಿರುದ್ಧ ದಾಖಲಾತಿಗಳನ್ನು ಬಿಡುಗಡೆ ಮಾಡಿಯೇ ಮಾಡುತ್ತೇನೆ ಎಂದು ರಮೇಶ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಡಿಕೆಶಿ ವಿರುದ್ಧ ಆಡಿಯೋ ಬಿಡುಗಡೆ ಮಾಡುವೆ ಎಂದು ಬಂದಿದ್ದ ರಮೇಶ ಜಾರಕಿಹೊಳಿ ಅಂತಹ ಯಾವುದೇ ಆಡಿಯೋ ಇಂದು ಬಿಡುಗಡೆ ಮಾಡದೇ ಮತ್ತೆ ಕುತೂಹಲ ಬಿಟ್ಟಿದ್ದಾರೆ. |
ಯುವತಿಯೊಬ್ಬಳನ್ನು ಮುಂದಿಟ್ಟುಕೊಂಡು ಡಿ. ಕೆ. ಶಿವಕುಮಾರ ಅವರು ನನ್ನ ತೇಜೋವಧೆ ಮಾಡಿದ್ದಾರೆ. ನಾನು ಮಾಡದ ಕೃತ್ಯವನ್ನು ಕಾನೂನಿನ ಕಾರಣಕ್ಕಾಗಿ ನಾನು ಒಪ್ಪಿಕೊಂಡಿದ್ದೆನಷ್ಟೇ. 1985ರಲ್ಲಿ ಹರಿದ ಚಪ್ಪಲಿ ಹಾಕಿಕೊಂಡು ತಿರುಗಾಡುತ್ತಿದ್ದ ಈ ಡಿಕೆಶಿ ಈಗ ಆಗರ್ಭ ಶ್ರೀಮಂತನಾಗಿದ್ದಾನೆ. ಶಿವಕುಮಾರ ಲೂಟಿ ಮಾಡಿ, ಹಗರಣ ಮಾಡಿ ಗಾಜಿನ ಮನೆಯಲ್ಲಿ ತಾನೇ ಈಗ ಜೀವನ ಸಾಗಿಸುತ್ತಿದ್ದಾನೆ.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ ಹಾಗೂ ಸಿಡಿ ಕೇಸ್ನಲ್ಲಿ ಸಿಕ್ಕಿಹಾಕಿಕೊಂಡು ಅಧಿಕಾರ ಕಳೆದುಕೊಂಡ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ನಡುವಿನ ಗುದ್ದಾಟ ತಾರಕಕ್ಕೇರಿದೆ. |
ನನ್ನ ತೇಜೋವಧೆಗೆ ಕಾರಣವಾಗಿದ್ದ ಹುಡುಗಿ ಮತ್ತು ಇಬ್ಬರು ಯುವಕರಾದ ಶ್ರವಣ ಮತ್ತು ನರೇಶ್ ಸೇರಿದಂತೆ ಆರು ಜನರನ್ನು ಪೊಲೀಸರು ತಕ್ಷಣ ಬಂಧಿಸಬೇಕು ಎಂದು ರಮೇಶ ಆಗ್ರಹಿಸಿದರು. ಡಿಕೆಶಿ ಮತ್ತು ನಾನು ಒಳ್ಳೆಯ ಗೆಳೆಯರಾಗಿದ್ದೆವು. ಸ್ವತಃ ಡಿ.ಕೆ. ಶಿವಕುಮಾರ ಮತ್ತು ಅವರ ಪತ್ನಿ ಉಷಾ ಅವರೇ ನನಗೆ ಕಾಂಗ್ರೆಸ್ ಪಕ್ಷ ಬಿಡದಂತೆ ಆಗ್ರಹಿಸಿದ್ದರು ಎಂದು ಸಂದರ್ಭವೊಂದನ್ನು ಉಲ್ಲೇಖಿಸಿ ನೆನೆಪಿಸಿಕೊಂಡರು.
ಸಿಡಿ ಬಿಡುಗಡೆಯಲ್ಲಿ ಬಹಳಷ್ಟು ರಾಜಕಾರಣ ಆಗಿದೆ. ಡಿ.ಕೆ.ಶಿವಕುಮಾರ ಮತ್ತು ಲಕ್ಷ್ಮೀ ಹೆಬ್ಬಾಳಕರ ಕೋಟ್ಯಾನುಗಟ್ಟಲೇ ಬ್ಲ್ಯಾಕ್ ಹಣದ ವ್ಯವಹಾರ ಮಾಡಿ ವೈಟ್ ಆಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ಸಿಬಿಐ, ಇಡಿ, ಇನ್ಕಮ್ ಟ್ಯಾಕ್ಸ್ ಇಲಾಖೆಗಳು ಈ ಬಗ್ಗೆ ತನಿಖೆ ಮಾಡಬೇಕು ಎಂದು ರಮೇಶ ಆಗ್ರಹಿಸಿದರು. |
ಡಿ. ಕೆ. ಶಿವಕುಮಾರ ಷಡ್ಯಂತ್ರದಿಂದ ನನ್ನ ವೈಯಕ್ತಿಕ ಬದುಕು ಹಾಗೂ ಎರಡು ವರ್ಷ ನೆಮ್ಮದಿ ಹಾಳಾಗಿದೆ.
ಗ್ರಾಮೀಣ ಶಾಸಕಿಯಿಂದ ರಾಜಕಾರಣ ಹಾಳಾಗಿದೆ, ಆಕೆಯಿಂದ ನನ್ನ ಎಲ್ಲ ರಾಜಕೀಯ ಸಂಬಂಧಗಳು ಹಾಳಾಗಿವೆ.
ಸಿಡಿ ಷಡ್ಯಂತ್ರ ನಡೆಸುವ ಒಂದು ತಂಡವೇ ಆಕ್ಟಿವ್ ಆಗಿದ್ದು, ಈ ಹಾವಳಿಗೆ ಇಂದು ರಾಜಕಾರಣಿಗಳು ಮತ್ತು ಐಎಎಸ್ ಅಧಿಕಾರಿಗಳಿಗೂ ಕಂಟಕ ಎದುರಾಗಲಿದೆ ಎಂದು ರಮೇಶ ಆತಂಕಿತರಾದರು.
Leave a Review