ಬೆಂಗಳೂರು: ಭಾರತೀಯ ಚರ್ಮರೋಗ, ಲೈಂಗಿಕ ರೋಗ ಮತ್ತು ಕುಷ್ಠರೋಗ ತಜ್ಞರ ಸಂಘ (Iಂಆಗಿಐ) ಆಯೋಜಿಸಿರುವ ೫೪ನೇ ರಾಷ್ಟ್ರೀಯ ಸಮ್ಮೇಳನ -ಡರ್ಮಾಕಾನ್ ಬೆಂಗಳೂರು ೨೦೨೬ ಅನ್ನು ಬೆಂಗಳೂರು ಸಮೀಪದ ಕ್ಲಾರ್ಕ್್ಸ ಎಕ್ಸೋಟಿಕಾ ಕನ್ವೆನ್ಶನ್ & ರಿಸಾರ್ಟ್ನ ಓಷನ್ ಹಾಲ್ನಲ್ಲಿ ಭವ್ಯವಾಗಿ ಉದ್ಘಾಟಿಸಲಾಯಿತು. ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಚರ್ಮರೋಗ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಉಪಸ್ಥಿತರಿದ್ದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ಚರ್ಮರೋಗಗಳ ಹೆಚ್ಚುತ್ತಿರುವ ಪ್ರಮಾಣ, ಸಮಯೋಚಿತ ರೋಗನಿರ್ಣಯದ ಮಹತ್ವ ಹಾಗೂ ವೈಜ್ಞಾನಿಕ ಆಧಾರಿತ ಚರ್ಮಚಿಕಿತ್ಸೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿಹೇಳಿದರು. ಉಚಿತ ಚರ್ಮ ಆರೋಗ್ಯ ಶಿಬಿರಗಳು ಹಾಗೂ ಸಮುದಾಯಾಧಾರಿತ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಿಗೆ ನಿಖರ ಚಿಕಿತ್ಸೆಯನ್ನು ತಲುಪಿಸುತ್ತಿರುವ Iಂಆಗಿಐನ ಕಾರ್ಯವನ್ನು ಅವರು ಶ್ಲಾಘಿಸಿದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಪ್ರೊ. ಡಾ. ಭಗವಾನ್ ಬಿ. ಸಿ., ಮಾನ್ಯ ಕುಲಪತಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು, ನಿರಂತರ ವೈದ್ಯಕೀಯ ಶಿಕ್ಷಣ, ನೈತಿಕ ವೈದ್ಯಕೀಯ ಅಭ್ಯಾಸ ಮತ್ತು ಸಂಶೋಧನಾ ಆಧಾರಿತ ಚರ್ಮವಿಜ್ಞಾನದ ಮಹತ್ವವನ್ನು ವಿವರಿಸಿದರು. ಡರ್ಮಾಕಾನ್ ಸಮ್ಮೇಳನವು ಶೈಕ್ಷಣಿಕ ಶ್ರೇಷ್ಠತೆ ಮತ್ತು ನವೀನತೆಯನ್ನು ಉತ್ತೇಜಿಸುವ ಪ್ರಮುಖ ವೇದಿಕೆಯಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ರಾಜೀವ್ ಶರ್ಮಾ, ಅಧ್ಯಕ್ಷರು Iಂಆಗಿಐ, ರೋಗಿ ಕೇಂದ್ರಿತ ಚರ್ಮಚಿಕಿತ್ಸೆ ಮತ್ತು ಸಾರ್ವಜನಿಕ ಸೇವೆಯತ್ತ ಸಂಘಟನೆಯ ಬದ್ಧತೆಯನ್ನು ಪುನರುಚ್ಚರಿಸಿದರು. ಉಚಿತ ಚರ್ಮ ಆರೋಗ್ಯ ಶಿಬಿರಗಳು, ಆಂಟಿ-ಕ್ವಾ÷್ಯಕರಿ (ನಕಲಿ ವೈದ್ಯರ ವಿರುದ್ಧ) ಜಾಗೃತಿ ಕಾರ್ಯಕ್ರಮಗಳು, ಕುಷ್ಠರೋಗ ನಿರ್ಮೂಲನಾ ಚಟುವಟಿಕೆಗಳು ಹಾಗೂ ಸಾರ್ವಜನಿಕ ಶಿಕ್ಷಣ ಅಭಿಯಾನಗಳು ಸೇರಿದಂತೆ Iಂಆಗಿಐ ಕೈಗೊಂಡಿರುವ ಅನೇಕ ರಾಷ್ಟ್ರೀಯ ಮಟ್ಟದ ಉಪಕ್ರಮಗಳನ್ನು ಅವರು ವಿವರಿಸಿದರು.
ಡಾ. ವಿನಯ್ ಸಿಂಗ್, ಅಧ್ಯಕ್ಷ-ನಿರ್ದೇಶಿತರು Iಂಆಗಿಐ, ಯುವ ಚರ್ಮರೋಗ ತಜ್ಞರ ಸಾಮರ್ಥ್ಯ ವೃದ್ಧಿ, ಕೌಶಲ್ಯಾಭಿವೃದ್ಧಿ ಮತ್ತು ಸಮಾವೇಶಿತ ಬೆಳವಣಿಗೆಯತ್ತ ಸಂಘಟನೆಯ ಭವಿಷ್ಯದ ದೃಷ್ಟಿಕೋನವನ್ನು ವಿವರಿಸಿದರು.
ಡಾ. ಭೂಮೇಶ್ ಕುಮಾರ್ ಕೆ., ಗೌರವ ಕಾರ್ಯದರ್ಶಿ ಜನರಲ್ Iಂಆಗಿಐ, ಡರ್ಮಾಕಾನ್ ೨೦೨೬ರ ವೈವಿಧ್ಯಮಯ ಶೈಕ್ಷಣಿಕ ಕಾರ್ಯಕ್ರಮಗಳ ಕುರಿತು ಮಾತನಾಡಿ, ಉನ್ನತ ಮಟ್ಟದ ವೈಜ್ಞಾನಿಕ ಅಧಿವೇಶನಗಳು, ಕಾರ್ಯಾಗಾರಗಳು, ಪ್ಯಾನೆಲ್ ಚರ್ಚೆಗಳು ಮತ್ತು ಹಸ್ತಪ್ರಯೋಗಾತ್ಮಕ ತರಬೇತಿ ಗಳನ್ನು ಒಳಗೊಂಡಿರುವುದಾಗಿ ತಿಳಿಸಿದರು.
ಸಂಘಟನಾ ಸಮಿತಿಯ ಡಾ. ಎಸ್. ಸಚ್ಚಿದಾನಂದ್ (ಸಂಘಟನಾ ಅಧ್ಯಕ್ಷರು), ಡಾ. ಆರ್. ರಘುನಾಥ ರೆಡ್ಡಿ (ಸಂಘಟನಾ ಕಾರ್ಯದರ್ಶಿ) ಮತ್ತು ಡಾ. ಬಿ.ಎಸ್. ಚಂದ್ರಶೇಖರ್ (ವೈಜ್ಞಾನಿಕ ಅಧ್ಯಕ್ಷರು), ಈ ವರ್ಷದ ಡರ್ಮಾಕಾನ್ನ ವಿಷಯ `ಚರ್ಮ ವಿಜ್ಞಾನಕ್ಕೆ ಶಕ್ತಿ ತುಂಬುವುದು: ಪರಿಣಾಮಗಳು, ನವೀನತೆ ಮತ್ತು ಸಮಾವೇಶ’ ಎಂಬುದಾಗಿದ್ದು, ನವೀನತೆ, ಸಂಶೋಧನೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
Iಂಆಗಿಐ ಕರ್ನಾಟಕ, ಬೆಂಗಳೂರು ಡರ್ಮಟಾಲಜಿಕಲ್ ಸೊಸೈಟಿ ಮತ್ತು ಡರ್ಮಾಕಾನ್ ೨೦೨೬ ಬೆಂಗಳೂರು ಸಂಘಟನಾ ಸಮಿತಿ ಆತಿಥ್ಯ ವಹಿಸಿರುವ ಈ ಸಮ್ಮೇಳನವು ಚರ್ಮಚಿಕಿತ್ಸೆಯ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಲಕ್ಷಾಂತರ ರೋಗಿಗಳಿಗೆ ಪರೋಕ್ಷವಾಗಿ ಲಾಭವನ್ನು ನೀಡಲಿದೆ ಎಂದು ತಿಳಿಸಿದರು.
೫೪ನೇ ರಾಷ್ಟ್ರೀಯ ಸಮ್ಮೇಳನ; ಡರ್ಮಾಕಾನ್ ಬೆಂಗಳೂರು-೨೦೨೬ ಉದ್ಘಾಟನೆ



