ಬೆಂಗಳೂರು: ನ್ಯಾಯ ಪಡೆಯುವ ಅವಕಾಶ ಹೆಚ್ಚಿಸುವ ಮತ್ತು ಕಾನೂನು ವ್ಯವಸ್ಥೆಯ ಕೊನೆಯ ಮೈಲಿಗಲ್ಲಿನ ಅಂತರವನ್ನು ನಿವಾರಿಸುವ ನಿಟ್ಟಿನಲ್ಲಿ `ನ್ಯಾಯ’ (ಸಂಸ್ಥೆ) ಅದರ ಪ್ರಮುಖ ಭಾಗವಾದ ಸಂವಿಧಾನ್ ಫೆಲೋಶಿಪ್ನ ೩ನೇ ಆವೃತ್ತಿ ಆರಂಭಿಸಿದೆ. ಇದಕ್ಕಾಗಿ ೧೮ ವಕೀಲರ ತಂಡವನ್ನು ನಿಯೋಜಿಸಿದೆ.
ಮೂರನೇ ಆವೃತ್ತಿಯಲ್ಲಿ ಬೆಂಗಳೂರು, ಬೆಳಗಾವಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಹಾಸನ, ಉತ್ತರ ಕನ್ನಡ (ಕಾರವಾರ), ಕೊಪ್ಪಳ, ರಾಯಚೂರು, ಕಲ್ಬುರ್ಗಿಯಲ್ಲಿ ನುರಿತ ವಕೀಲರು ಕಾನೂನು ನೆರವು ನೀಡಲಿದ್ದಾರೆ.
ಕಾನೂನು ಮಾಹಿತಿಯ ಕೊರತೆ, ಸೀಮಿತ ಸಂಪನ್ಮೂಲಗಳು ಮತ್ತು ಅಂಚಿನಲ್ಲಿರುವ ಸಮುದಾಯಗಳ ಮೇಲೆ ಅಸಮಾನವಾಗಿ ಪರಿಣಾಮ ಬೀರುವ ವ್ಯವಸ್ಥಿತ ಅಸಮಾನತೆಗಳಂತಹ ಅಡೆತಡೆಗಳಿಂದಾಗಿ ನ್ಯಾಯ ಪಡೆಯಲು ಅನೇಕರಿಗೆ ಇನ್ನೂ ಕಷ್ಟವಾಗಿದೆ. ಸಂವಿಧಾನ್ ಫೆಲೋಶಿಪ್ ಮೂಲಕ, ಮಹಿಳೆಯರು, ಮಕ್ಕಳು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಇತರ ತಳಮಟ್ಟದ ಸಮುದಾಯಗಳಿಗೆ ನ್ಯಾಯವನ್ನು ವಿಸ್ತರಿಸಲು ಕೆಲಸ ಮಾಡುವ ಕಾನೂನು ವೃತ್ತಿಪರರನ್ನು ಬೆಂಬಲಿಸುವ ಮೂಲಕ ಈ ಅಂತರವನ್ನು ಮುಚ್ಚುವ ತನ್ನ ಧ್ಯೇಯವನ್ನು `ನ್ಯಾಯ’ ಮುಂದುವರಿಸಿದೆ.
ಸಂವಿಧಾನ್ ಫೆಲೋಶಿಪ್ ಬಗ್ಗೆ – ಸಂವಿಧಾನ್ ಫೆಲೋಶಿಪ್ `ನ್ಯಾಯ’ ದ ಪ್ರಮುಖ ಉಪಕ್ರಮವಾಗಿದ್ದು, ಸಾರ್ವಜನಿಕ ಹಿತಾಸಕ್ತಿಯುಳ್ಳ ಮತ್ತು ಉತ್ಸಾಹಿ ವಕೀಲರನ್ನು ಸಮುದಾಯ ಆಧಾರಿತ ಕೆಲಸವನ್ನು ಮಾಡಲು ಬೆಂಬಲಿಸುವ ಮೂಲಕ ನ್ಯಾಯ ಪಡೆಯಲು ಕೊನೆಯ ಮೈಲಿ ಅಂತರವನ್ನು ಮುಚ್ಚಲು ವಿನ್ಯಾಸಗೊಳಿಸಲಾಗಿದೆ. ಸಮುದಾಯಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವುದು, ರಚನಾತ್ಮಕ ಮಾರ್ಗದರ್ಶನ ಮತ್ತು ಕಠಿಣ ವಿಷಯಾಧಾರಿತ ತರಬೇತಿಯ ಮೂಲಕ, ಫೆಲೋಶಿಪ್ ಫೆಲೋಗಳಿಗೆ (ವಕೀಲರಿಗೆ) ಕಾನೂನು, ನೀತಿ ಮತ್ತು ಸಮುದಾಯದ ಅಗತ್ಯಗಳ ಬಗ್ಗೆ ಮಹಿಳೆಯರು, ಮಕ್ಕಳು ಮತ್ತು ಇತರೆ ಸೌಲಭ್ಯ ವಂಚಿತ ಸಮುದಾಯಗಳನ್ನು ಮುನ್ನಡೆಸುವತ್ತ ವಿಶೇಷ ಗಮನ ಹರಿಸಿ ಕೆಲಸ ಮಾಡಲು ಬೆಂಬಲ ನೀಡುತ್ತದೆ.
ಕರ್ನಾಟಕದಲ್ಲಿ ಕಳೆದ ಎರಡು ಸಮೂಹಗಳಲ್ಲಿ, ಸಂವಿಧಾನ್ ಫೆಲೋಶಿಪ್ ೨೭೦ ಕ್ಕೂ ಹೆಚ್ಚು ವೈಯಕ್ತಿಕ ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ನ್ಯಾಯ ಪಡೆಯುವ ಅವಕಾಶವನ್ನು ಗಮನಾರ್ಹವಾಗಿ ಬಲಪಡಿಸಿದೆ. ರಾಜ್ಯಾದ್ಯಂತ ೯,೦೦೦ ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳನ್ನು ತಲುಪಿದೆ. ಫೆಲೋಗಳು ೧೩೨ ಕುಂದುಕೊರತೆ ಪರಿಹಾರ ಪ್ರಕರಣಗಳನ್ನು ಸಹ ಬೆಂಬಲಿಸಿದ್ದಾರೆ, ಸಮುದಾಯದ ಸದಸ್ಯರು ನಿರ್ಣಾಯಕ ಕಲ್ಯಾಣ ಯೋಜನೆಗಳು ಮತ್ತು ಹಕ್ಕುಗಳನ್ನು ಪಡೆಯಲು ನೆರವಾಗಿದ್ದಾರೆ.
ಪ್ರೊ ಬೊನೊ ಮಾತನಾಡಿ, ಮೊಕದ್ದಮೆಗಾಗಿ (ಉಚಿತ ಕಾನೂನು ನೆರವು) ೬೦ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಸೌಲಭ್ಯ ವಂಚಿತ ಸಮುದಾಯಗಳಿಗೆ ಕಾನೂನು ಬೆಂಬಲವನ್ನು ಮತ್ತಷ್ಟು ಬಲಪಡಿಸಲಾಗಿದೆ. ೫೦೦ ಕ್ಕೂ ಹೆಚ್ಚು ಕಾನೂನು ಕಾನೂನು ಸಂಬAಧಿತ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ ಎಂದರು.
ಸರ್ವರಿಗೂ ನ್ಯಾಯ: ೧೮ ವಕೀಲರ `ನ್ಯಾಯ’ ತಂಡದಿಂದ ಸಂವಿಧಾನ ಫೆಲೋಶಿಪ್ನ ಮೂರನೇ ಆವೃತ್ತಿ ಆರಂಭ



