ಬೆಂಗಳೂರು: ವಿಧಾನಸಭಾ ಚುನಾವಣಾ ಸಂಬಂಧ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದೆ.
ಎರಡನೇ ಪಟ್ಟಿಯಲ್ಲಿ 42ಮಂದಿ ಹೆಸರನ್ನು ಬಿಡುಗಡೆಗೊಳಿಸಲಾಗಿದ್ದು, ಮೂರನೇ ಹಂತದಲ್ಲಿ ಮತ್ತೊಂದು ಪಟ್ಟಿಯನ್ನು ಪ್ರಕಟಿಸಲಿದೆ.
ಈಗಾಗಲೇ 124 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದ ಕಾಮಗ್ರೆಸ್ ಇದೀಗ 42 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವುದರೊಂದಿಗೆ ಒಟ್ಟು 166 ಮಂದಿ ಅಭ್ಯರ್ಥಿಗಳನ್ನು ಪ್ರಕಟಿಸಿದಂತಾಗಿದೆ.
ಎರಡನೇ ಪಟ್ಟಿಯಲ್ಲಿ ಪ್ರಕಟವಾಗಿರುವ ಅಭ್ಯರ್ಥಿಗಳ ಹೆಸರು ಇಂತಿದೆ:
- ನಿಪ್ಪಾಣಿ – ಕಾಕಾ ಸಾಹೇಬ್ ಪಾಟೀಲ್
- ಬೀಳಗಿ – ಜಿ.ಟಿ ಪಾಟೀಲ್
- ಕಲಘಟಗಿ – ಸಂತೋಷ ಲಾಡ್
- ಧಾರವಾಡ – ವಿನಯ್ ಕುಲಕರ್ಣಿ
- ಕಡೂರ್ – ಆನಂದ್
- ಗುಬ್ಬಿ – ಎಸ್.ಆರ್. ಶ್ರೀನಿವಾಸ್
- ಗುರುಮಠಕಲ್ – ಬಾಬುರಾವ್ ಚಿಂಚನಸೂರ್
- ಗೋಕಾಕ್ – ಮಹಾಂತೇಶ್ ಕಡಾಡಿ
- ಕಿತ್ತೂರು – ಬಾಬಾ ಸಾಹೇಬ್ ಪಾಟೀಲ್
- ಮುಧೋಳ್ – ಆರ್.ಬಿ. ತಿಮ್ಮಾಪುರ
- ಸೌದತ್ತಿ ಯಲ್ಲಮ್ಮ – ವಿಶ್ವಾಸ್ ವಸಂತ್ ವೈದ್ಯ
- ಬಾದಾಮಿ – ಭೀಮಸೇನ್ ಬಿ. ಚಿಮ್ಮನಕಟ್ಟಿ
- ಬಾಗಲಕೋಟೆ – ಹುಲ್ಲಪ್ಪ ವೈ. ಮೇಟಿ
- ಸಿರ್ಸಿ – ಭೀಮಣ್ಣ ನಾಯ್ಕ್
- ಯಲ್ಲಾಪುರ – ವಿ.ಎಸ್.ಪಾಟೀಲ್
- ಕುಡ್ಲಿಗಿ ಎಸ್ಟಿ – ಡಾ.ಶ್ರೀನಿವಾಸ್ ಎಂ.ಟಿ
- ಮೊಳಕಾಲ್ಮೂರು (ಎಸ್ಟಿ) -ಎನ್.ವೈ. ಗೋಪಾಲಕೃಷ್ಣ
- ಚಿತ್ರದುರ್ಗ – ಕೆ.ಸಿ.ವೀರೇಂದ್ರ (ಪಪ್ಪಿ)
- ಹೊಳಲ್ಕೆರೆ ಎಸ್ಸಿ – ಆಂಜನೇಯ ಎಚ್
- ಚೆನ್ನಗಿರಿ – ಬಸವರಾಜು ವಿ. ಶಿವಗಂಗ
- ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್
- ಉಡುಪಿ – ಪ್ರಸಾದ್ರಾಜ್ ಕಾಂಚನ್
- ತುಮಕೂರು ನಗರ – ಇಕ್ಬಾಲ್ ಅಹ್ಮದ್
- ಯಲಹಂಕ – ಕೇಶವ ರಾಜಣ್ಣ ಬಿ.
- ಮಹಾಲಕ್ಷ್ಮಿ ಲೇ ಔಟ್ – ಕೇಶವಮೂರ್ತಿ
- ಪದ್ಮನಾಭ ನಗರ – ವಿ.ರಘುನಾಥ ನಾಯ್ಡು
- ಮೇಲುಕೋಟೆ – ದರ್ಶನ್ ಪುಟ್ಟಣ್ಣಯ್ಯ
- ಮಂಡ್ಯ – ಪಿ.ರವಿಕುಮಾರ್
- ಕೃಷ್ಣರಾಜಪೇಟೆ – ಬಿ.ಎಲ್.ದೇವರಾಜ್
- ಬೇಲೂರು – ಬಿ.ಶಿವರಾಮ್
- ಮಡಿಕೇರಿ – ಡಾ.ಮಂತರ್ ಗೌಡ
- ಕೊಳ್ಳೇಗಾಲ ಎಸ್ಸಿ ಮೀಸಲು -ಎ.ಆರ್.ಕೃಷ್ಣಮೂರ್ತಿ
- ಚಾಮುಂಡೇಶ್ವರಿ – ಸಿದ್ದೇಗೌಡ
- ವಿಜಯಪುರ – ಅಬ್ದುಲ್ ಹಮೀದ್ ಖಾಜಾಸಾಹೇಬ್
- ನಾಗಠಾಣ – ವಿಠ್ಠಲ್ ಕಟಕದೊಂಡ
- ಅಫಜಲಪುರ – ಎಂ.ವೈ ಪಾಟೀಲ್
- ಯಾದಗಿರಿ – ಚನ್ನಾರೆಡ್ಡಿ ಪಾಟೀಲ್
- ಕಲಬುರಗಿ – ಅಲ್ಲಮ್ಮ ಪ್ರಭು ಪಾಟೀಲ್
- ಗಂಗಾವತಿ – ಇಕ್ಬಾಲ್ ಅನ್ಸಾರಿ
- ನರಗುಂದ – ಬಿ.ಆರ್.ಯಾವಗಲ್
- ಬಸವಕಲ್ಯಾಣ – ವಿಜಯ ಧರ್ಮಸಿಂಗ್
- ಯಶವಂತಪುರ – ಎಸ್. ಬಾಲರಾಜ್ಗೌಡ
Leave a Review