ಬೇತಮಂಗಲ: ಸರ್ಕಾರದ ಆದೇಶದಂತೆ ಮಾರ್ಚ್ ೩ ನೇ ತಾರೀಖು ಕೈವಾರ ತಾತಯ್ಯ ಯಂತೀದ್ರ ಯೋಗಿ ನಾರಾಯಣ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿAದ ಆಚರಿಸಲು ತೀರ್ಮಾನಿಸಿದ್ದೇವೆ, ಸಮಸ್ತ ಸಮುದಾಯದ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಬಲಿಜ ಸಂಘದ ತಾಲೂಕು ಅಧ್ಯಕ್ಷ ವಕೀಲ ಕೆ.ಸಿ ನಾಗರಾಜ್ ಹೇಳಿದರು.
ಪಟ್ಟಣದ ಜೆಡ್.ಎಸ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ನಂತರ ಮಾತನಾಡಿದ ಅವರು, ತಾಲೂಕಿನ ಬಲಿಜ ಸಮುದಾಯದ ಬಂಧುಗಳನ್ನು ನನ್ನ ಮೇಲೆ ಭರವಸೆ ಇಟ್ಟುಕೊಂಡು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ನಾನು ಯಾವುದೇ ಪಕ್ಷ ಭೇದವಿಲ್ಲದೆ ನಿಸ್ವಾರ್ಥವಾಗಿ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದರು.
ಮಾರ್ಚ್ ೩ ನೇ ತಾರೀಖು ಬೇತಮಂಗಲ ವಿಜಯೇಂದ್ರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪುಷ್ಪ ಪಲ್ಲಕ್ಕಿಗೆ ಚಾಲನೆ ನೀಡಲಾಗುವುದು. ಡೊಳ್ಳು ಕುಣಿತ ವೀರಗಾಸೆ ನೃತ್ಯ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಆಯೋಜಿಸಲಾಗಿದೆ. ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಸಂಜೆ ಆರ್ಕೆಸ್ಟಾç ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಅದು ಇಡೀ ರಾಜ್ಯಾದ್ಯಂತ ಕೈವಾರ ತಾತಯ್ಯ ಜಯಂತಿ ಆಚರಣೆ ಮಾಡುತ್ತಾರೆ. ತಾತಯ್ಯ ಅವರು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ ಅವರು ಇಡೀ ವಿಶ್ವದ ಸ್ವತ್ತಾಗಿದ್ದಾರೆ.
ಸುಮಾರು ೫೦೦ ವರ್ಷಗಳ ಇತಿಹಾಸವಿರುವ ತಾತಯ್ಯ ಅವರು ತತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿವೆ. ಸರ್ಕಾರ ಜಯಂತಿ ಆಚರಣೆ ಮಾಡುತ್ತಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು, ಸಮಸ್ತ ನಾಗರಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಎನ್.ಜಿ ಹುಲ್ಕೂರು ಹಾಗೂ ವೆಂಗಸAದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮುದಾಯದ ಬಂಧುಗಳಿAದ ಪುಷ್ಪ ಪಲ್ಲಕ್ಕಿ ಆಯೋಜಿಸಲಾಗಿದೆ.
ಸುಂದರ ಪಾಳ್ಯ ಹಾಗೂ ಸುತ್ತಮುತ್ತಲಿನ ಅನೇಕ ಗ್ರಾಮಸ್ಥರಿಂದ ವೀರಗಾಸೆ ಕುಣಿತ ಮತ್ತು ಆರ್ಕೆಸ್ಟಾç ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಗಣ್ಯರ ಬಾಗಿ: ಕೆಜಿಎಫ್ ಶಾಸಕಿ ಎಂ ರೂಪಕಲಾ, ಸಂಸದ ಮಲ್ಲೇಶ್ ಬಾಬು, ಮಾಜಿ ಶಾಸಕರುಗಳು ಹಾಗೂ ಸಂಸದರು ಅನೇಕ ಜನಪ್ರತಿನಿಧಿಗಳು, ಸಮುದಾಯದ ರಾಜ್ಯ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಲಿಜ ಸಂಘದ ಅಧ್ಯಕ್ಷ ವಕೀಲ ಕೆ.ಸಿ ನಾಗರಾಜ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಮತಾ ಗಣೇಶ್, ಸುನೀಲ್ ಕುಮಾರ್, ರಾಂಬಾಬು, ಮುನಿಯಪ್ಪ, ಸುವರ್ಣಹಳ್ಳಿ ಕೃಷ್ಣಮೂರ್ತಿ, ಒಬಿಸಿ ಉದಯ್, ಪೂಗಾನಹಳ್ಳಿ ಮಂಜುನಾಥ್, ಟಿಎಪಿಸಿಎಂಎಸ್ ನಿರ್ದೇಶಕ ಪುರುಷೋತ್ತಮ್, ಪಿಎಲ್ಡಿ ಬ್ಯಾಂಕ್ ಮಾಜಿ ನಿರ್ದೇಶಕ ಪ್ರಭಾಕರ್, ವಿಜಯ ಭಾಸ್ಕರ್ ನಾಯ್ಡು, ರಘು, ಪಲನಿ, ಡೇರಿ ಅಪ್ಪಿ, ಅಶೋಕ್, ಹೇಮಂತ್, ಸುವರ್ಣಹಳ್ಳಿ ಕಿರಣ್ , ಆನಂದ್,ಮAಜು ಪಂಡು, ಕಲ್ಯಾಣ್ ,ಶ್ರೀಧರ್, ಚರಣ್, ಕಿರಣ್ ಹಾಗೂ ಅನೇಕ ಮುಖಂಡರು ಯುವಕರು ಸಮುದಾಯದ ಬಂಧುಗಳು ಉಪಸ್ಥಿತರಿದ್ದರು.
ಮಾರ್ಚ್ ೩ಕ್ಕೆ ಕೈವಾರ ತಾತಯ್ಯ ಜಯಂತಿ ಆಚರಣೆ: ವಕೀಲ ಕೆ.ಸಿ ನಾಗರಾಜ್



