ಐಪಿಎಲ್ 2026ರ ಸೀಸನ್ ಪ್ರಾರಂಭವಾದಾಗಿಂದ ಒನ್ ಸೈಡೆಡ್ ಪಂದ್ಯಗಳನ್ನು ನೋಡಿ ಬೋರ್ ಆಗಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ಸ್ ಕಿಂಗ್ಸ್ ನಡುವಿನ ಪಂದ್ಯ ಚುಟುಕು ಕ್ರಿಕೆಟ್ ನ ರೋಚಕತೆಯನ್ನು ಉಣಬಡಿಸಿತು. ಬೌಲರ್ ಗಳೇ ಮಿಂಚಿದ ಪಂದ್ಯದಲ್ಲಿ ಕೂಪರ್ ಕಾನಲಿ ಅವರ ಅಜೇಯ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಗುಜರಾತ್ ಜೈಂಟ್ಸ್ ತಂಡವನ್ನು 3 ವಿಕೆಟ್ ಗಳಿಂದ ಸೋಲಿಸಿ ಸೀಸನ್ ಶುಭಾರಂಭ ಮಾಡಿತು. ಕರ್ನಾಟಕದ ಮಧ್ಯಮ ವೇಗದ ಬೌಲರ್ ಗಳಾದ ವಿಜಯಕುಮಾರ್ ವೈಶಾಖ್ ಮತ್ತು ಪ್ರಸಿದ್ಧ ಕೃಷ್ಣ ಅವರು ಪಂದ್ಯದುದ್ದಕ್ಕೂ ಹೈಲೈಟ್ ಆದರು.
ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕಟ್ ಕ್ರೀಡಾಂಗಣದಲ್ಲಿ ಮಾರ್ಚ್ 31ರ ಮಂಗಳವಾರದAದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಚ್ ಕಳೆದುಕೊಂಡು 162 ರನ್ ಗಳಿಸಿತು. ಈ ಗುರಿ ಬೆಂಬತ್ತಿ ಹೊರಟ ಪಂಜಾಬ್ ಕಿಂಗ್ಸ್ ಇನ್ನೂ 5 ಎಸೆತಗಳು ಬಾಕಿ ಉಳಿದಿರುವಂತೆ 3 ವಿಕೆಟ್ ಗಳಿಂದ ಜಯ ಗಳಿಸಿತು.
ಒಂದೆಡೆ ವಿಕೆಟ್ ಗಳು ಉರುಳುತ್ತಿದ್ದರೂ ಬಂಡೆಗಲ್ಲಿನAತೆ ನಿಂತ ಕೂಪರ್ ಕಾನಲಿ ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. ಕೇವಲ 44 ಎಸೆತಗಳಲ್ಲಿ 72 ರನ್ ಗಳಿಸಿ ಅವರು ಅಜೇಯರಾಗುಳಿದರು. ಅವರ ಇನ್ನಿಂಗ್ಸ್ ನಲ್ಲಿ 5 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಗಳಿದ್ದವು. ಪ್ರಸಿದ್ಧ ಕೃಷ್ಣ ಅವರು 3 ವಿಕೆಟ್ ಗಳಿಸುವ ಮೂಲಕ ಪಂಜಾಬ್ ಪಾಳಯದಲ್ಲಿ ಆತಂಕ ಮೂಡಿಸಿದ್ದರು. ಆದರೆ ಕಾನಲಿ ಅವರ ಜಾಣ್ಮೆಯ ಬ್ಯಾಟಿಂಗ್ ಮುಂದು ಗುಜರಾತ್ ಬೌಲಿಂಗ್ ನಿರುತ್ತರವಾಯಿತು. ಅವರಿಗೆ ಅರ್ಹವಾಗಿ ಪಂದ್ಯಶ್ರೇಷ್ಢ ಪ್ರಶಸ್ತಿ ದೊರಕಿತು.
ವೈಶಾಖ್ ಬೆಂಕಿ ಬೌಲಿಂಗ್
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಗುಜರಾತ್ ಟೈಟಾನ್ಸ್ ತಂಡ ಪವರ್ ಪ್ಲೇನ 6 ಓವರ್ ಗಳಲ್ಲಿ 54 ರನ್ ಗಳಿಸಿ ದೊಡ್ಡ ಮೊತ್ತ ಗಳಿಸುವ ಸೂಚನೆ ನೀಡಿತ್ತು. ಆದರೆ ಆ ಬಳಿಕ ಪಂಜಾಬ್ ತಂಡದ ಬೌಲರ್ ಗಳ ಮೊನಚಾದ ದಾಳಿಗೆ ರನ್ ರೇಟ್ ಕುಸಿಯಿತು. ತಂಡದ ಯಾವ ಬ್ಯಾಟರ್ ಸಹ ಅರ್ಧಶತಕ ಗಳಿಸಲು ಸಾಧ್ಯವಾಗದ್ದೇ ಇದಕ್ಕೆ ಸಾಕ್ಷಿ. ಕರ್ನಾಟಕದ ಮಧ್ಯಮ ವೇಗಿ ವಿಜಯ್ ಕುಮಾರ್ ವೈಖಾಖ್, ದಕ್ಷಿಣ ಆಫ್ರಿಕಾದ ಮಾರ್ಚೋ ಯಾನ್ಸನ್ ಮತ್ತು ಸ್ಪಿನ್ನರ್ ಯುಜುವೇಂದ್ರ ಚಹಲ್ ಅವರು ಗುಜರಾತ್ ಬ್ಯಾಟರ್ ಗಳನ್ನು ಸರಾಗವಾಗಿ ಆಡಲು ಬಿಡಲೇ ಇಲ್ಲ. ಅದರಲ್ಲೂ ವೈಶಾಖ್ ಅವರು 34 ರನ್ ಗೆ 3 ವಿಕೆಟ್ ಕಿತ್ತು ಮಿಂಚಿದರು.
ನ್ಯೂ ಚಂಡೀಗಢದಲ್ಲಿ ಕನ್ನಡಿಗರ ಮೆರೆದಾಟ: ಕೂಪರ್ ಕಾನಲಿ ಹೋರಾಟ



