ಚಿಂತಾಮಣಿ: ತಾಲೂಕಿನ ಶ್ರೀ ಕ್ಷೇತ್ರ ಕೈವಾರದ ಬಸ್ ನಿಲ್ದಾಣ ಹತ್ತಿರ ಇರುವ ವಾಸವಿ ಕನ್ನಿಕಾ
ಪರಮೇಶ್ವರಿ ದೇವಸ್ಥಾನದಲ್ಲಿ ಅಮ್ಮನವರ ಅಗ್ನಿ ಪ್ರವೇಶ ಕಾರ್ಯಕ್ರಮ ನಡೆಯಿತು.
ವಾಸವಿ ಅಮ್ಮನವರ ಅಗ್ನಿ ಪ್ರವೇಶ ಕಾರ್ಯಕ್ರಮ ನಿಮಿತ್ಯ ಪ್ರಾತಃಕಾಲ ಘಂಟೆ
ನಾದ, ಸುಪ್ರಭಾತ ಹಾಗೂ ನಾದಸ್ವರ, ಮಂಗಳ ವಾದ್ಯದೊಂದಿಗೆ ಪೂಜೆ ಕಾರ್ಯ ಪ್ರಾರಂಭ
ಗೊಂಡವು. ಹೋಮ ಹವನಗಳನ್ನು ನೆರವೇರಿಸಿ ಪೂರ್ಣಹುತಿ ನೀಡಲಾಯಿತು. ಅಮ್ಮನವರಿಗೆ ಅಭಿಷೇಕ, ಅಷ್ಟವಧಾನ ಸೇವೆ, ಆತ್ಮರ್ಪಣ, ವಾಯನ ಸೇವೆ ನೆರವೇರಿಸಲಾಯಿತು. ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಲಾಯಿತು.
ವಾಸವಿ ಕಲ್ಯಾಣ ಮಂಟಪದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು. ಆರ್ಯ ವೈಸ್ಯ ಸಮಾಜದ ಎಲ್ಲಾ ಬಂಧುಗಳು ಮಂಗಳವಾರ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡಿ ಅಮ್ಮನ
ವರ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ತನು ಮನದಿಂದ ಸೇವೆ ಸಲ್ಲಿಸಿದರು.
ವಾಸವಿ ಮಹಿಳಾ ಸಂಘದ ತಾಯಂದಿರು ಸಮವಸ್ತದಲ್ಲಿ ಪಾಲ್ಗೊಂಡು ಭಕ್ತಿಗೀತೆಗ
ಳನ್ನು ಹಾಡುತ್ತ ಭಜನೆ ಮಾಡಿದರು. ಅಮ್ಮನವರಿಗೆ ವಿವಿಧ ಪುಷ್ಪಗಳ ಹಾರ, ಹಾಗೂ ಆಭರಣಗಳ ಅಲಂಕಾರ, ದೀಪಗಳ ಆರತಿ ಭಕ್ತರ ಕಣ್ಣ ಮನ ತನಿಸುವಂತಿತ್ತು.
ಕೈವಾರ ಸುತ್ತ ಮುತ್ತ ಗ್ರಾಮಗಳಿಂದ ಆರ್ಯ ವೈಶ್ಯ ಕುಲಭಾಂದವರು ಭಾಗವಹಿಸಿದ್ದರು. ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ರಾಜಕುಮಾರ ಅವರು ವೇದ ಮಂತ್ರ ಪಠಣ ಮಾಡಿದರು.
ಕೈವಾರದಲ್ಲಿ ಕನ್ನಿಕಾ ಪರಮೇಶ್ವರಿ ಪೂಜಾ ಕಾರ್ಯಕ್ರಮ



