ಪ್ರೀತಿಯನ್ನು ಪಡೆದುಕೊಳ್ಳುವ ಶಕ್ತಿ ಇಲ್ಲದೇ ಇದ್ರೆ ಪ್ರೀತಿ ಮಾಡಬಾರದು ಎಂಬ ಎಳೆಯ ಸಿನಿಮಾ ಲವ್ ಯು ಮುದ್ದು. ಕೆಮಿಸ್ಟ್ರಿ ಆಫ್ ಕರಿಯಪ್ಪ ನಿರ್ದೇಶಕ ಕುಮಾರ್ ಅವರ ಹೊಸ ಪ್ರಯತ್ನದ ಈ ಚಿತ್ರಬಿಡುಗಡೆಗೆ ಸಜ್ಜಾಗಿದೆ. ನವೆಂಬರ್ ೭ರಂದು ತೆರೆಗೆ ಬರ್ತಿದೆ. ಪ್ರಚಾರ ಕಾರ್ಯದ ಜೊತೆಗೆ ಟ್ರೇಲರ್
ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಿರ್ಮಾಪಕ ಹಾಗೂ ಛಾಯಾಗ್ರಹಕ ಜೆ ಜಿ ಕೃಷ್ಣ, ನಟಿ ಸಂಜನಾ ಆನಂದ್ ವಿಶೇಷ ಅತಿಥಿಯಾಗಿ ಆಗಮಿಸಿ
ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು. ಟ್ರೇಲರ್ ಬಿಡುಗಡೆ ಬಳಿಕ ಜೆಜಿ ಕೃಷ್ಣ ಮಾತನಾಡಿ, ಟ್ರೇಲರ್ ನೋಡಿದಾಗ ಹೀರೋ, ಹೀರೋಯಿನ್ ಚೆನ್ನಾಗಿ
ನಟಿಸಿದ್ದಾರೆ. ಡೈರೆಕ್ಟರ್ ಹಾಗೂ ಕ್ಯಾಮೆರಾ ಮೆನ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಿನಿಮಾ ಅದ್ಭುತವಾಗಿ ಇರಲಿದೆ ಎಂಬ ನಂಬಿಕೆ ಇದೆ.
ನಿಮ್ಮ ಚಿತ್ರದ ಪ್ರತಿ ಫ್ರೇಮ್ ಸುಂದರವಾಗಿ ಇದೆ. ನಿರ್ಮಾಪಕರು ಉಳಿದರೆ ನೂರು ಫ್ಯಾಮಿಲಿಗೆ ಊಟ ಹಾಕುತ್ತಾರೆ. ಆ ನಿರ್ಮಾಪಕರು ಗೆಲ್ಲಬೇಕು ಎಂದರು.
ನಟಿ ಸಂಜನಾ ಆನಂದ್ ಮಾತನಾಡಿ, ಲವ್ ಯು ಮುದ್ದು ಇಡೀ ತಂಡಕ್ಕೆ ಒಳ್ಳೆಯದಾಗಲಿ. ಚಿತ್ರರಂಗಕ್ಕೆ ನನ್ನನ್ನು ಪರಿಚಯಿಸಿದ್ದು ಕುಮಾರ್. ಅವರ ಬರವಣಿಗೆ
ನನಗೆ ತುಂಬಾ ಇಷ್ಟವಾಗುತ್ತದೆ. ಲವ್ ಯು ಮುದ್ದು ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಎಷ್ಟು ಸಕ್ಸಸ್ ಕೊಟ್ಟಿತ್ತೋ ಅದರ ನೂರಷ್ಟು ಸಕ್ಸಸ್ ಈ ಚಿತ್ರ ಕೊಡಲಿ ಎಂದರು. ನಿರ್ದೇಶಕ ಕುಮಾರ್ ಮಾತನಾಡಿ, ಇದು ನನ್ನ ಐದನೇ ಸಿನಿಮಾ. ಈಜಾನರ್ ಬಿಟ್ಟು ಇದು ಬೇರೆ ವಿಷಯ. ಮಹಾರಾಷ್ಟ್ರ ದಲ್ಲಿ ನಡೆದ ಘಟನೆ ಇಟ್ಕೊಂಡು ಸಿನಿಮಾ ಹೇಳಲಾಗಿದೆ. ಇದು ಮನಸ್ಸಿಗೆ ಮುಟ್ಟುವ ಕಥೆ. ನಿರ್ಮಾಪಕರು ನನ್ನ ಮೊದಲ ಸಿನಿಮಾದಿಂದ ಸಪೋರ್ಟ್
ಮಾಡಿಕೊಂಡು ಬಂದಿದ್ದಾರೆ. ಇದೀಗ ಲವ್ ಯು ಮುದ್ದು ಚಿತ್ರಕ್ಕೆ ಹಣ ಹಾಕಿದ್ದಾರೆ. ಒಳ್ಳೆ ತಾರಾ ಬಳಗ ಚಿತ್ರದಲ್ಲಿದೆ ಎಂದರು.
ಲವ್ ಯು ಮುದ್ದು ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಪ್ರೀತಿಯೇ ಸಕಲವು, ಸರ್ವಸ್ವ ಎಂದು ನಂಬಿದ್ದ ಜೋಡಿಯ ಬಾಳಲ್ಲಿ ನಡೆದ ತಿರುವನ್ನು ಕಾಡುವಂತೆ
ನಿರ್ದೇಶಕ ಕುಮಾರ್ ಸೊಗಸಾಗಿ ಎಣೆದಿದ್ದಾರೆ. ಎಲ್ಲಾ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿವೆ. ಸಿದ್ದು ಮೂಲಿಮನಿ ಈ ಸಿನಿಮಾಕ್ಕೆ ನಾಯಕ.
ಯುವನಟಿ ರೇಷ್ಮಾ ನಾಯಕಿ. ಸಿನಿಮಾದಲ್ಲಿ ರಾಜೇಶ್ ನಟರಂಗ, ತಬಲಾ ನಾಣಿ, ಗಿರೀಶ್ ಶಿವಣ್ಣ, ಶ್ರೀವತ್ಸ ಮತ್ತು ಸ್ವಾತಿ ನಟಿಸಿದ್ದಾರೆ.


 
		 
		 
		
 
		
 
    