ಕೆಜಿಎಫ್: ಸರ್ಕಾರಿ ಸೇವೆ ಎಂದರೆ ಕೇವಲ ಕಚೇರಿಯ ಕೆಲಸವಲ್ಲ, ಅದೊಂದು ಸಮಾಜಮುಖಿ ಕಾಯಕ ಎಂದು ನಂಬಿ ನಡೆದಿರುವವರು ಭೂಮಾಪಕರಾದ ಮೌಲಾಖಾನ್. ಕಳೆದ ೩೦ ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಭೂಮಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ತಮ್ಮ ವೃತ್ತಿಜೀವನವನ್ನು ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ಮುಡುಪಾಗಿಟ್ಟಿದ್ದಾರೆ.
ಸವಾಲುಗಳ ನಡುವೆ ಸಾರ್ಥಕ ಸೇವೆ ಭೂಮಾಪನ ಕಾರ್ಯವೆಂದರೆ ಅದು ಸುಲಭದ ಮಾತಲ್ಲ. ಬಿಸಿಲು, ಮಳೆ ಎನ್ನದೆ ಹೊಲ-ಗದ್ದೆಗಳಲ್ಲಿ ಅಲೆಯಬೇಕು. ಅದರಲ್ಲೂ ವಿಶೇಷವಾಗಿ:
ಸಾರ್ವಜನಿಕ ಆಸ್ತಿಗಳ ರಕ್ಷಣೆ: ಸರ್ಕಾರದ ಸ್ಮಶಾನಗಳು, ರಾಜ ಕಾಲುವೆ, ಕಾಲು ದಾರಿ, ಬಂಡಿ ದಾರಿ ಹಾಗೂ ಗುಂಡು ತೋಪುಗಳ ಸರ್ವೆ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಸಾರ್ವಜನಿಕ ಆಸ್ತಿಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಜಲಮೂಲಗಳ ಸಂರಕ್ಷಣೆ: ಕೆರೆಗಳ ಒತ್ತುವರಿ ತೆರವು ಹಾಗೂ ಗಡಿ ಗುರುತಿಸುವಿಕೆಯಲ್ಲಿ ಮೌಲಾಖಾನ್ ಅವರ ಕಾರ್ಯವೈಖರಿ ಶ್ಲಾಘನೀಯ.
ನ್ಯಾಯಾಲಯದ ಪ್ರಕರಣಗಳು: ಸಂಕೀರ್ಣವಾದ ನ್ಯಾಯಾಲಯದ ಪ್ರಕರಣಗಳಿಗೆ ಸಂಬAಧಿಸಿದ ಸರ್ವೆ ಕಾರ್ಯಗಳನ್ನು ಅತ್ಯಂತ ನಿಖರವಾಗಿ ಮತ್ತು ಪಾರದರ್ಶಕವಾಗಿ ಮುಗಿಸಿಕೊಡುವ ಮೂಲಕ ಕಾನೂನು ಪ್ರಕ್ರಿಯೆಗೆ ವೇಗ ನೀಡಿದ್ದಾರೆ.
ಆರೋಗ್ಯವನ್ನೂ ಲೆಕ್ಕಿಸದ ಕರ್ತವ್ಯ ಪ್ರಜ್ಞೆ: ಹೃದಯ ಶಸ್ತçಚಿಕಿತ್ಸೆ ಹಾಗೂ ವಯೋ ಸಹಜ ಆರೋಗ್ಯ ಸಮಸ್ಯೆಗಳು ಎದುರಾದರೂ, ಮೌಲಾಖಾನ್ ಅವರು ಎಂದಿಗೂ ತಮ್ಮ ಕೆಲಸಕ್ಕೆ ಕುಂದು ಬರಲು ಬಿಟ್ಟಿಲ್ಲ. ಮೇಲಧಿಕಾರಿಗಳ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸುವ ಇವರು, ಕಾಲಮಿತಿಯೊಳಗೆ ಸರ್ವೆ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ಹೆಸರುವಾಸಿ. ಕೆಲಸವೇ ದೇವರು ಎಂಬ ತತ್ವಕ್ಕೆ ಇವರು ಜೀವಂತ ಉದಾಹರಣೆ.
ಜನಸಾಮಾನ್ಯರ ನಂಬಿಕೆಯ ಅಧಿಕಾರಿ: ಸರ್ವೆ ಇಲಾಖೆ ಎಂದರೆ ಜನಸಾಮಾನ್ಯರಲ್ಲಿ ಒಂದಿಷ್ಟು ಆತಂಕ ಇರುವುದು ಸಹಜ. ಆದರೆ ಮೌಲಾಖಾನ್ ಅವರು ತಮ್ಮ ಸರಳತೆ ಮತ್ತು ಪ್ರಾಮಾಣಿಕತೆಯಿಂದ ಜನರ ಮನ ಗೆದ್ದಿದ್ದಾರೆ. ರೈತರ ಹಾಗೂ ಸಾರ್ವಜನಿಕರ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಸ್ಥಳದಲ್ಲೇ ನ್ಯಾಯ ಒದಗಿಸುವ ಇವರ ಗುಣ ಇಲಾಖೆಗೆ ಹೆಮ್ಮೆ ತರುವಂತದ್ದಾಗಿದೆ. ವೃತ್ತಿಜೀವನದ ೩೦ ವರ್ಷಗಳಲ್ಲಿ ಮೌಲಾಖಾನ್ ಅವರು ಕೇವಲ ಭೂಮಿಯನ್ನು ಅಳೆದಿಲ್ಲ, ಬದಲಿಗೆ ತಮ್ಮ ಪ್ರಾಮಾಣಿಕ ಸೇವೆಯ ಮೂಲಕ ಸಾವಿರಾರು ಜನರ ಪ್ರೀತಿ ಮತ್ತು ನಂಬಿಕೆಯನ್ನು ಗಳಿಸಿದ್ದಾರೆ ಎಂದರೆ ತಪ್ಪಾಗಲಾರದು. ಮೌಲಾಖಾನ್ ಅವರ ಕರ್ತವ್ಯ ಸೇವೆಯನ್ನು ಗುರುತಿಸಿ ಕಂದಾಯ ಇಲಾಖೆ ಹಾಗೂ ಪ್ರತಿಷ್ಠಿತ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿ ಬೇಕೆಂದು ಸಾರ್ವಜನಿಕರು ಮಾತಾಗಿದೆ.
ಕರ್ತವ್ಯನಿಷ್ಠೆಯ ಪಥದಲ್ಲಿ ಮೂರು ದಶಕ ಕಂದಾಯ ಇಲಾಖೆಯ ಜನಸ್ನೇಹಿ ಭೂಮಾಪಕ ಮೌಲಾಖಾನ್



