ಕೆಜಿಎಫ್: ಜಿಲ್ಲೆಯಲ್ಲೇ ಅತಿ ದೊಡ್ಡ ಕೆರೆಯಾದ ರಾಮಸಾಗರ ಹಾಗೂ ಬೇತಮಂಗಲ ಪಾಲಾರ್ ಕೆರೆಗಳಲ್ಲಿ ನೀರಿನ ಲಭ್ಯತೆಯಿಂದ ಸ್ಥಳೀಯ ಕೊಳವೆ ಬಾವಿಗಳಲ್ಲಿ ಉತ್ತಮ ನೀರಿದ್ದು, ಕುಡಿಯುವ ನೀರಿನ ಅಭಾವವಿಲ್ಲದೆ ಜನ ಜಾನುವಾರುಗಳಿಗೆ ಸಹಕಾರಿಯಾಗಿದೆ ಎಂದು ಶಾಸಕಿ ಎಂ ರೂಪಕಲಾ ಹೇಳಿದರು.
ಪಟ್ಟಣದ ಸಮೀಪದ ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಲಂಪಲ್ಲಿ, ಜೆ.ಕೆ ಪುರ, ನಾಗಕುಪ್ಪ, ಶ್ರೀನಿವಾಸಸಂದ್ರ, ಮೇಲುಪಲ್ಲಿ ಗ್ರಾಮಗಳಲ್ಲಿ ತಲಾ 12 ಲಕ್ಷ ರೂ., ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಯುಗಾದಿ ಹಬ್ಬದೊಳಗೆ ಈ ಗ್ರಾಪಂನಲ್ಲಿ ಪ್ರವಾಸ ಕೈಗೊಂಡು ಸ್ಥಳೀಯ ಸಮಸ್ಯೆ ಮತ್ತು ಅಭಿವೃದ್ಧಿಯ ಬಗ್ಗೆ ಸಭೆ ನಡೆಸಲು ತಿರ್ಮಾಣಿಸಲಾಗಿತ್ತು, ಆದರೆ ಸದನವಿದ್ದ ಕಾರಣ ಸಾಧ್ಯವಾಗಿರಲಿಲ್ಲ ಆದರೆ ಇಂದು 5 ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಲೋಕಾರ್ಪಣೆಗೊಳಿಸಿದ್ದು, ಈ ಭಾಗದ ಜನರು ಉತ್ತಮ ನೀರು ಕುಡಿದು ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದರು.ಬೇಸಿಗೆ ಎದುರಿಸಲು ಸಿದ್ಧ: ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ ಬೇಸಿಗೆ ಮತ್ತಷ್ಟು ಬಿಗಡಾಯಿಸಿದೆ, ಆದ್ದರಿಂದ ಆಯಾ ವ್ಯಾಪ್ತಿಯ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದು, ಜಿಲ್ಲಾಡಳಿತದಿಂದಲೂ ಬೇಸಿಗೆ ಎದುರಿಸಲು ಅನುದಾನ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗ್ರಾಮದ ಅಂಗನವಾಡಿ, ಶಾಲಾ ಆವರಣ, ಮತ್ತು ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗುತ್ತದೆ. ಆದರೆ ಇಲ್ಲಿ ಜಾಗವಿಲ್ಲದ ಪರಿಣಾಮ ಸುಮಾ ನಾರಾಯಣಪ್ಪ ಅವರು ಉಚಿತವಾಗಿ ಸ್ಥಳ ದಾನವಾಗಿ ನೀಡಿದ್ದು, ಅವರನ್ನು ಸನ್ಮಾನಿಸಿ ದಾನಿಗಳ ಹೆಸರನ್ನು ನಾಮಫಲಕಗಳಲ್ಲಿ ಅಳವಡಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕೆಜಿಎಫ್ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗುತ್ತದೆ ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಲಾಗಿದೆ ಎಂದರು.ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮಾತನಾಡಿ, ಕೆಜಿಎಫ್ ಕ್ಷೇತ್ರದ ಶಾಸಕಿ ಎಂ ರೂಪಕಲಾ ಅವರು ಲಂಚ ರಹಿತ ಶಾಸಕರಾಗಿದ್ದಾರೆ. ಯಾವುದೇ ಅಧಿಕಾರಿಗಳಿಂದಾಗಲೀ ಗುತ್ತಿಗೆದಾರರಿಂದ ನಯಾ ಪೈಸೆ ಲಂಚ ಪಡೆಯದೇ ಕೇವಲ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಮೂಲಮಂತ್ರ ಎಂದು ಶ್ರಮಿಸುತ್ತಿದ್ದಾರೆ ಎಂದು ಶಾಸಕರ ಕಾರ್ಯವೈಖರಿ ಬಗ್ಗೆ ಶ್ಲಾಘಿಸಿದರು.ಅಭಿವೃದ್ಧಿಯಲ್ಲಿ ರಾಜೀ ಇಲ್ಲ: ಇದುವರೆಗೂ ಯಾರೂ ಮಾಡದಂತ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದ್ದಾರೆ. ಕೆಜಿಎಫ್ ನಲ್ಲಿ ಕೈಗಾರಿಕಾ ಹಬ್ ಆರಂಭಿಸಿ ಕ್ಷೇತ್ರದಲ್ಲೇ ಲಕ್ಷಾ÷್ಯಂತರ ಮಂದಿ ಉದ್ಯೋಗ ಮಾಡಲು ಕೈಗಾರಿಕೆಗಳು ಆರಂಭಿಸಲಿದ್ದಾರೆ. ಇತ್ತೀಚಿಗೆ ಪೋಲೀಸ್ ತರಬೇತಿ ಕೇಂದ್ರ (ಬ್ಯಾಟಾಲಿಯನ್ ) ಅನ್ನು ಆರಂಭಿಸಿದ್ದು ವರ್ಷಕ್ಕೆ ಒಂದು ಸಾವಿರ ಮಂದಿಗೆ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಗೃಹ ಸಚಿವರು ಚಾಲನೆ ನೀಡಿದ್ದಾರೆ.ನಗರ ಹಾಗೂ ಗ್ರಾಮೀಣ ಪ್ರದೇಶದ ಪ್ರತಿಯೊಂದು ಹಳ್ಳಿಯಲ್ಲೂ ಗುಣಮಟ್ಟದ ಡಾಂಬರೀಕರಣ ರಸ್ತೆ ಕಾಮಗಾರಿಗೆ ನಡೆದಿದೆ. ರೂಪಕಲಾ ಅವರು ಸಚಿವರ ಮಗಳಾಗಿದ್ದರೂ ಯಾವುದೇ ಅಹಂ ಇಲ್ಲದೆ ಸಾಮಾನ್ಯ ಮಹಿಳೆಯಂದೆ ಅವಿರತವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.ಹೀಗೆ ನೂರಾರು ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕರು ಮಾಡುತ್ತಿದ್ದು, ಪುನಃ ಇತಂಹ ಶಾಸಕರನ್ನು ನಾವು ಪಡೆಯಬೇಕೆಂದು ನೆರೆದಿದ್ದ ನೂರಾರು ಮುಖಂಡರು ಮಹಿಳೆಯರಿಗೆ ಕಿವಿ ಮಾತು ಹೇಳಿದರು.ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸ್ಕೂಲ್ ವೆಂಕಟೇಶಪ್ಪ ಮಾತನಾಡಿ, ಅಭಿವೃದ್ಧಿಯ ಹರಿಕಾರರಾದ ರೂಪಕಲಾ ಅವರು ರಾಜ್ಯದಲ್ಲಿ ಸಚಿವರಾಗಿ ಕೆಜಿಎಫ್ ಕ್ಷೇತ್ರವಲ್ಲದೆ ಇಡೀ ರಾಜ್ಯಕ್ಕೆ ತಮ್ಮ ಕೊಡುಗೆ ವಿಸ್ತರಿಸಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಮ್ಮಸಂದ್ರ ನಾಗರಾಜ್, ಗ್ರಾಪಂ ಮಾಜಿ ಅಧ್ಯಕ್ಷೆ ಗೀತಾಕಲಾ ವೆಂಕಟೇಶ್, ಅಯ್ಯಪಲ್ಲಿ ಮಂಜುನಾಥ್, ಮಾಜಿ ಸದಸ್ಯರಾದ ಗಜೇಂದ್ರ ರೆಡ್ಡಿ, ವಸಂತ್ ರೆಡ್ಡಿ, ಮುಖಂಡರಾದ ದೇವರಾಜ್ ರೆಡ್ಡಿ, ಸುಮಾ ನಾರಾಯಣಪ್ಪ ,ದಿಲೀಪ್ , ರಾಮಪ್ಪ, ಭಾಸ್ಕರ್ ರೆಡ್ಡಿ, ಏತೂರು ಚಂದ್ರಶೇಖರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಾಬು, ಎನ್ಟಿಆರ್ ಶ್ರೀನಿವಾಸ್ ರೆಡ್ಡಿ, ರಾಮಕೃಷ್ಣ ರೆಡ್ಡಿ, ವಕೀಲ ಪದ್ಮನಾಭ ರೆಡ್ಡಿ, ಬ್ಯಾಟೇಗೌಡ, ಹಾಗೂ ಅನೇಕ ಮುಖಂಡರು, ಯುವಕರು, ಮಹಿಳೆಯರು ಗ್ರಾಮಸ್ಥರು ಉಪಸ್ಥಿತರಿದ್ದರು.
ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ: ಶಾಸಕಿ ರೂಪಕಲಾ ಶಶಿಧರ್



