LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Education News

ಆದಿ ಚೈತನ್ಯ ಜಾಂಬವಂತ ತತ್ವ ಮತ್ತು ಜಲ ವಿಜ್ಞಾನ: ಸನಾತನ ಧರ್ಮದ ಪುರಾಣೋಕ್ತ ಶ್ರೇಷ್ಠತೆ

ಜಲಮೂಲದ ಆದಿ ಚೈತನ್ಯ ಜಾಂಬವಂತ: ಸನಾತನ ಪುರಾಣಗಳ ವೈಜ್ಞಾನಿಕ ಸತ್ಯ. ಸನಾತನ ಹಿಂದೂ ಧರ್ಮವು ಕೇವಲ ನಂಬಿಕೆಗಳ ಪೂಜಾವಿಧಿಯಲ್ಲ; ಅದು ಸೃಷ್ಟಿಯ ವಿಕಾಸವನ್ನು ಅತಿ ಆಳವಾಗಿ ಧೀಮಂತ ಸಂಕೇತಗಳ ಮೂಲಕ ನಿರೂಪಿಸಿದ ಪರಮ ವಿಜ್ಞಾನ. ಬ್ರಹ್ಮಾಂಡದ ಸೃಷ್ಟಿ ಪ್ರಕ್ರಿಯೆಯಲ್ಲಿ ಭೂಮಿ, ಸೂರ್ಯ, ಚಂದ್ರ ಹಾಗೂ ಸಮಸ್ತ ಜೀವರಾಶಿಗಳು ಉದಯಿಸುವ ಮುನ್ನ, ಈ ಇಡೀ ಜಗತ್ತು ಕೇವಲ ಮಾರುತ ಹಾಗೂ ಜಲಾವೃತವಾಗಿತ್ತು. ಇಂತಹ ಮಹಾ ಜಲಗೋಳದಲ್ಲಿ ಪ್ರಕಟಗೊಂಡ ಪ್ರಥಮ ಜಾಗೃತ ಶಕ್ತಿಯೇ “ಆದಿ ಜಾಂಬವಂತ”.ಈ ದಿವ್ಯ ತತ್ವದ ಶ್ರೇಷ್ಠತೆಯನ್ನು ನಮ್ಮ ಮಹಾಪುರಾಣಗಳು ಮತ್ತು ವೈದಿಕ ವಾಙ್ಮಯಗಳು ಹೇಗೆ ಉಲ್ಲೇಖಿಸುತ್ತವೆ ಎಂಬುದನ್ನು ಇಂದಿನ ಪೀಳಿಗೆಗೆ ಅರಿಯುವುದು ಅತ್ಯಂತ ಅವಶ್ಯಕವಾಗಿದೆ.
1. ಪುರಾಣಗಳ ಉಲ್ಲೇಖ: ಸೃಷ್ಟಿಯ ಪ್ರಥಮ ಜೀವ ಚೈತನ್ಯ ನಮ್ಮ ಅಷ್ಟಾದಶ ಪುರಾಣಗಳಲ್ಲಿ ಜಾಂಬವಂತರನ್ನು ಕೇವಲ ತ್ರೇತಾಯುಗದ ರಾಮಾಯಣದ ಕರಡಿ ರೂಪದ ಪಾತ್ರವಾಗಿ ಮಾತ್ರ ನೋಡಲಾಗಿಲ್ಲ. ಅದಕ್ಕಿಂತ ಮಿಗಿಲಾಗಿ, ಅವರನ್ನು `ಪ್ರಜಾಪತಿ’ ಮತ್ತು ಸೃಷ್ಟಿಯ ಆರಂಭಿಕ ಸಾಕ್ಷಿ ಎಂದು ವರ್ಣಿಸಲಾಗಿದೆ.
ಶ್ರೀಮದ್ಭಾಗವತ ಮತ್ತು ವಿಷ್ಣು ಪುರಾಣ: ಭಾಗವತದ ಉಲ್ಲೇಖಗಳ ಪ್ರಕಾರ, ಭಗವಾನ್ ವಿಷ್ಣುವು ಮತ್ಸ್ಯ ಮತ್ತು ವರಾಹ ಅವತಾರಗಳನ್ನು ತಳೆಯುವ ಮುನ್ನ, ಸಮುದ್ರ ಮಂಥನದ ಕಾಲಕ್ಕೂ ಮೊದಲೇ ಅಸ್ತಿತ್ವದಲ್ಲಿದ್ದ ಹಿರಿಯ ಜೀವ ಚೈತನ್ಯ ಜಾಂಬವಂತರು. ಬ್ರಹ್ಮದೇವನು ಸೃಷ್ಟಿ ಕಾರ್ಯವನ್ನು ಆರಂಭಿಸುವಾಗ ಆತನ ಆಕಳಿಕೆಯಿಂದ ಅಥವಾ ಆತನ ಸಂಕಲ್ಪದಿಂದ ಮೂಡಿಬಂದ ಪ್ರಥಮ ತತ್ವವೇ ಜಾಂಬವAತ ತತ್ವ. ಇದನ್ನೇ “ಬ್ರಹ್ಮ, ವಿಷ್ಣು, ಮಹೇಶ್ವರರಿಗಿಂತ ಮೊದಲು ಹುಟ್ಟಿದವನೇ ಜಾಂಬವಂತ” ಎಂದು ಪುರಾಣಗಳು ಶ್ಲಾಘಿಸುತ್ತವೆ.
ಚಿರಂಜೀವಿ ತತ್ವ: ಸನಾತನ ಧರ್ಮದಲ್ಲಿ ಅಷ್ಟ ಚಿರಂಜೀವಿಗಳ ಕಲ್ಪನೆಯಿದೆ. ಕಾಲವನ್ನು ಗೆದ್ದು ನಿಲ್ಲುವ ಶಕ್ತಿ ಕೇವಲ ಪ್ರಕೃತಿಯ ಮೂಲ ಧಾತುವಿಗೆ ಮಾತ್ರ ಸಾಧ್ಯ. ಜಾಂಬವಂತರು ಕಾಲಾತೀತ ಚೈತನ್ಯವಾಗಿ ಸೃಷ್ಟಿಯ ಆರಂಭದಿಂದ ಇಂದಿನವರೆಗೂ ಸ್ಥಿತರಾಗಿದ್ದಾರೆ ಎಂದರೆ, ಅವರು ಪ್ರಕೃತಿಯ ಅವಿನಾಶಿ ಶಕ್ತಿಯಾದ ‘ಜಲ’ ಮತ್ತು `ಜೀವಕೋಶ’ದ ಸಂಕೇತವಾಗಿದ್ದಾರೆ.
2. ಸನಾತನ ಧರ್ಮದಲ್ಲಿ ಜಲ ಮತ್ತು ಜಾಂಬವAತ ತತ್ವದ ಶ್ರೇಷ್ಠತೆ ಸನಾತನ ಹಿಂದೂ ಧರ್ಮದಲ್ಲಿ ನೀರನ್ನು ಕೇವಲ ಒಂದು ವಸ್ತುವಾಗಿ ನೋಡದೆ “ಆಪೋ ದೇವತಾ” (ಜಲವೇ ದೇವರು) ಎಂದು ಪೂಜಿಸಲಾಗುತ್ತದೆ.
“ಜಲವೇ ಜೀವಂ, ಜಲವೇ ಮೂಲಂ | ಜಾಂಬವಂತನೇ ಮೊದಲ ಚೈತನ್ಯ”
ಮಾತಂಗ ಮಹರ್ಷಿ ಮತ್ತು ತಪೋ ಹಿನ್ನೆಲೆ: ಶ್ರೀ ಮಾತಂಗ ಮಹರ್ಷಿಗಳ ಪರಂಪರೆ ಮತ್ತು ಶಕ್ತಿ ಪೀಠಗಳು ಯಾವಾಗಲೂ ಪ್ರಕೃತಿಯ ಮೂಲ ಸತ್ವಗಳ ಆರಾಧನೆಗೆ ಹೆಸರಾಗಿವೆ. ಜಲಗೋಳದ ಮೇಲೆ ಆದಿ ಗುರುವಾಗಿ ಕುಳಿತಿರುವ ಜಾಂಬವAತರ ಚಿತ್ರವು ಬ್ರಹ್ಮಾಂಡದ ಸೌರಶಕ್ತಿ (ಸೂರ್ಯ) ಮತ್ತು ಚಾಂದ್ರಶಕ್ತಿಯ (ಚಂದ್ರ) ನಡುವಿನ ಸಮತೋಲನವನ್ನು ಕಾಯ್ದುಕೊಳ್ಳುವ ತಪೋಶಕ್ತಿಯನ್ನು ಬಿಂಬಿಸುತ್ತದೆ.
ಜೀವ ವಿಕಾಸದ ಪ್ರಥಮ ಹಂತ: ಡಾರ್ವಿನ್‌ನ ಜೀವ ವಿಕಾಸ ಸಿದ್ಧಾಂತವು “ಜೀವವು ನೀರಿನಲ್ಲಿ ಆರಂಭವಾಯಿತು” ಎಂದು 19ನೇ ಶತಮಾನದಲ್ಲಿ ಹೇಳಿದರೆ, ಸನಾತನ ಧರ್ಮವು ಯುಗಗಳ ಹಿಂದೆಯೇ ದಶಾವತಾರಗಳ ಆರಂಭವನ್ನು `ಮತ್ಸ್ಯ’ (ನೀರಿನ ಜೀವ) ಅವತಾರದಿಂದ ಆರಂಭಿಸಿತು. ಈ ಜಲಜೀವ ವಿಕಾಸಕ್ಕೆ ಪ್ರೇರಣೆಯಾಗಿ, ಜಲದ ಅಧಿಪತಿಯಾಗಿ ನಿಂತ ಮೊದಲ ಪ್ರಜ್ಞೆಯೇ ಆದಿ ಜಾಂಬವಂತರು.
3. ಪತ್ರಿಕಾ ಸಂದೇಶ: ಸನಾತನ ಸಂಸ್ಕಾರದ ಪುನರುತ್ಥಾನ ಇಂದಿನ ಆಧುನಿಕ ಜಗತ್ತು ಪರಿಸರ ಮಾಲಿನ್ಯ ಮತ್ತು ಜಲಕ್ಷಾಮದ ಭೀಕರತೆಯನ್ನು ಎದುರಿಸುತ್ತಿದೆ. ಸನಾತನ ಧರ್ಮದ ಮೂಲ ತತ್ವಗಳನ್ನು ಮರೆಯುತ್ತಿರುವುದೇ ಇದಕ್ಕೆ ಕಾರಣ. ಶ್ರೀ ಮಾತಂಗ ಸಂಸ್ಕಾರ ಪ್ರತಿಷ್ಠಾನದ ಮುಖ್ಯ ಉದ್ದೇಶವೇ ಇಂತಹ ಮರೆತುಹೋದ ವೈದಿಕ ವಿಜ್ಞಾನವನ್ನು ಮತ್ತು ಆದಿ ಪುರುಷರ ಶ್ರೇಷ್ಠತೆಯನ್ನು ಸಮಾಜಕ್ಕೆ ಮರಳಿ ಪರಿಚಯಿಸುವುದಾಗಿದೆ.
ನಾವು ಜಲವನ್ನು ಗೌರವಿಸಿದರೆ ಪ್ರಕೃತಿಯನ್ನು ಗೌರವಿಸಿದಂತೆ. ಆದಿ ಜಾಂಬವಂತ ಗುರುಗಳು ನಮಗೆ ಕಲಿಸುವ ಪಾಠವೂ ಇದೇ ಆಗಿದೆ. ಪ್ರಕೃತಿಯ ಮೂಲವನ್ನು ಅರಿತು, ಸಂಸ್ಕಾರಯುತ ಜೀವನವನ್ನು ನಡೆಸುವುದು. ಬನ್ನಿ, ನಮ್ಮ ಸನಾತನ ಧರ್ಮದ ಹೆಮ್ಮೆಯ ಇತಿಹಾಸವನ್ನು, ಪುರಾಣೋಕ್ತ ವಿಜ್ಞಾನವನ್ನು ಅರಿತು ವಿಶ್ವಕ್ಕೆ ದಾರಿದೀಪವಾಗೋಣ.
“ಪ್ರಕೃತಿಯೇ ಪರಮಾತ್ಮ, ಜಲವೇ ಜಗದೀಶ್ವರ”
ಲೇಖಕರು:
ಶ್ರೀ ಶ್ರೀ ಮನು ಸಿದ್ಧಾರ್ಥ ಗುರೂಜಿ,
ಶಕ್ತಿ ಉಪಾಸಕರು, ಶ್ರೀ ಮಾತಂಗ ಸಂಸ್ಕಾರ ಗುರುಪೀಠ ದೇವನಹಳ್ಳಿ

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST