ಬೊಮ್ಮನಹಳ್ಳಿ: ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಹಾಗೂ ಹುಟ್ಟು ಹೋರಾಟಗಾರರಾದ ಪ್ರವೀಣ್ ಶೆಟ್ಟಿ ಅವರ ಸುಪುತ್ರನ ನಾಯಕ ನಟ ಪ್ರಮೀರ್ ಶೆಟ್ಟಿ ಅಭಿನಯದ ಬಹುನಿರಿಕ್ಷಿತ ಕನ್ನಡ ಚಲನ ಚಿತ್ರವು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಅದರ ಅಅಂಗವಾಗಿ ಬೊಮ್ಮನಹಳ್ಳಿಯಲ್ಲಿ ಅಭಿಮಾನಿ ಬಳಗದಿಂದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪೆÇೀಸ್ಟರ್ ಬಿಡುಗಡೆ ಮಾಡುತ್ತಿದ್ದಿವಿ ಎಂಬುದಾಗಿ ತಿಳಿಸಿದರು.
ಅವರು ಬೊಮ್ಮನಹಳ್ಳಿ ಶ್ರೀಗಣಪತಿ ದೇವಸ್ಥಾನದಲ್ಲಿ ಪ್ರಮೀರ್ ಶೆಟಿ ನಾಯಕ ನಟನಾಗಿ ಅಭಿನಯಿಸಿರುವ ,ಚೊಚ್ಚಲ ಕನ್ನಡ ಚಲನ ಚಿತ್ರವು ಶತದಿನಗಳ ಯಶಸ್ಸು ಆಚರಿಸಲಿ ಎಂಬುದಾಗಿ ಪೂಜೆ ಸಲ್ಲಿಸಿ , ಚಿತ್ರದ ಪೆÇೀಷ್ಟರ್ ಬಿಡುಗಡೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿ ಮಾತನಾಡಿದರು.
ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಉಚಿತ ಟಿಕೆಟ್ ವಿತರಣೆ:- ಸೈರನ್ ಚಲನ ಚಿತ್ರವು ಉತ್ತವ ಸಾಮಾಜಿಕ ಸಂದೇಶದ ಚಿತ್ರವಾಗಿದ್ದು,ಉತ್ತಮ ಉತ್ತಮ ಪೈಟ್, ಉತ್ತಮ ಆಕ್ಷನ್, ಉತ್ತಮ ಹಾಡುಗಳನ್ನು ಒಳಗೊಂಡಿದ್ದು,
ಯುವಕರು,ಮಹಿಳೆಯರು,ಸೇರಿದಂತೆ,ಎಲ್ಲ ವರ್ಗದವರು ನೋಡಬಹುದಾಂತ ಒಂದು ಕನ್ನಡದ ಉತ್ತಮ ಚಲನ ಚಿತ್ರ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಚಿತ್ರದ ಮೂಲಕ ನಮ್ಮ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ಸುಪುತ್ರ ಅವರಿಗೆ ಹೆಚ್ಚಿನ ಕೀರ್ತಿ ಮತ್ತು ಅವಕಾಶಗಳು ದೊರಕಲಿ ಈ ಚಿತ್ರವು ಕನ್ನಡದ ಮನ ಮನೆಯ ಗೆದ್ದು ಶತ ದಿನಗಳನ್ನು ಆಚರಿಸಲಿ ಎಂಬುದಾಗಿ ಶುಭಕೋರಿ ಅಭಿಮಾನಿ ಬಳಗದಿಂದ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಉಚಿತವಾಗಿ ಟಿಕೆಟ್ ವಿತರಣೆ ಮಾಡುತ್ತಿದ್ದಿವಿ ಎಂಬುದಾಗಿ ಹರ್ಷವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರ್ ನಗರ ಕಾರ್ಯದರ್ಶಿ ಎಸ್. ರಾಜೇಶ್ ಕ್ಷೇತ್ರದ ಅಧ್ಯಕ್ಷರಾದ ಮಹೇಶ್ ರೆಡ್ಡಿ ಉಪಾಧ್ಯಕ್ಷರಾದಂತ ಬಸವರಾಜ ರೆಡ್ಡಿ, ಸಂತೋಷ್, ಐಟಿಗೊಟ್ದ ಅಧ್ಯಕ್ಷರಾದಂತ ವಸಂತ್, ಮಹಿಳಾ ಘಟಕದ ಉಪಾಧ್ಯಕ್ಷರದಂತ ಮಹೇಶ್ವರಿ ಇನ್ನು ಅನೇಕ ಕಾರ್ಯಕರ್ತರು ಕನ್ನಡ ಅಭಿಮಾನಿಗಳು ಹಾಜರಿದ್ದರು.
Leave a Review