ತಿ. ನರಸೀಪುರ: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸಂಬAಧಿಸಿದAತೆ ಪುರಸಭೆ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಪುರಸಭೆ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಅಭಿವೃದ್ಧಿಗಾಗಿ ಹಲವಾರು ಸಲಹೆಗಳು ಹಾಗೂ ಒತ್ತಾಯಗಳನ್ನು ಮಂಡಿಸಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭೆ ಮುಖ್ಯಾಧಿಕಾರಿ ಸಿ. ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ 2026-27ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ರಸ್ತೆ, ಸ್ವಚ್ಛತೆ, ಸಂಚಾರ ವ್ಯವಸ್ಥೆ, ಉದ್ಯಾನವನಗಳ ನಿರ್ವಹಣೆ ಸೇರಿದಂತೆ ಅನೇಕ ಮೂಲಭೂತ ಸಮಸ್ಯೆಗಳ ಕುರಿತು ಗಟ್ಟಿಯಾಗಿ ಧ್ವನಿಯೆತ್ತಿದರು.ಸಭೆಯ ಆರಂಭದಲ್ಲಿ ತಾ.ಪಂ ಮಾಜಿ ಉಪಾಧ್ಯಕ್ಷ ಬಿ. ಮರಯ್ಯ ಮಾತನಾಡಿ, ಕಳೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಟ್ಟಣದ ಗಡಿಯಲ್ಲಿ ಸ್ವಾಗತ ಕಮಾನು ನಿರ್ಮಾಣ ಹಾಗೂ ಪ್ರಮುಖ ರಸ್ತೆಗಳಿಗೆ ಮಹನೀಯರ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ಪುರಸಭೆ ವ್ಯಾಪ್ತಿಯಲ್ಲಿರುವ ಉದ್ಯಾನವನಗಳು ನಿರ್ಲಕ್ಷ÷್ಯದಿಂದ ದುಸ್ಥಿತಿಗೆ ತಲುಪಿರುವುದನ್ನು ತೀವ್ರವಾಗಿ ಖಂಡಿಸಿದರು.
ಕರೋಹಟ್ಟಿ ಕೆ.ಎನ್. ಪ್ರಭುಸ್ವಾಮಿ ಮಾತನಾಡಿ, ಪುರಸಭೆಯ 24 ವಾರ್ಡ್ಗಳಲ್ಲಿ 17 ವಾರ್ಡ್ಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರಕ್ಕೆ ಸೇರಿದ್ದು, ಉಳಿದ ವಾರ್ಡ್ಗಳು ಉಸ್ತುವಾರಿ ಸಚಿವ ಹೆಚ್.ಸಿ. ಮಹದೇವಪ್ಪ ಅವರ ಕ್ಷೇತ್ರಕ್ಕೆ ಸೇರಿವೆ. ಇಂತಹ ಅವಕಾಶಗಳಿದ್ದರೂ ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡುಬರುತ್ತಿರುವುದು ವಿಷಾದನೀಯ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಎಸ್ಎಫ್ಸಿ ಯೋಜನೆಯಡಿ 10.50 ಕೋಟಿ ರೂ. ಅನುದಾನ ನೀಡಿದ್ದರೂ ಅದರ ಸ್ಪಷ್ಟ ಫಲಿತಾಂಶ ಕಾಣಿಸುತ್ತಿಲ್ಲ ಎಂದು ಪ್ರಭುಸ್ವಾಮಿ ಟೀಕಿಸಿದರು.
ಗೋಪಾಲಪುರದ ರವೀಂದ್ರ ಮಾತನಾಡಿ, ಪುರಸಭೆಯ ಪ್ರಮುಖ ಆದಾಯ ಮೂಲವಾದ ವಾಣಿಜ್ಯ ಮಳಿಗೆಗಳಿಂದ ಸುಮಾರು 2.50 ಕೋಟಿ ರೂ. ಬಾಡಿಗೆ ವಸೂಲಿ ಆಗದೇ ಬಾಕಿ ಉಳಿದಿದೆ. 10ರಿಂದ 15 ವರ್ಷಗಳಿಂದ ಮಳಿಗೆಗಳ ಮರುಹಂಚಿಕೆ ನಡೆಯದಿರುವುದರಿಂದ ಪುರಸಭೆಯ ಆದಾಯ ಕುಸಿತಗೊಂಡಿದೆ ಎಂದು ಹೇಳಿದರು.
ತ್ರಿವೇಣಿ ನಗರ ಕಾಲೋನಿಯ ಕೆಂಚಪ್ಪ ಮಹಾನಾಯಕ ಅವರು ವೃತ್ತದಲ್ಲಿ ಡಕ್ ಸ್ಲಾಬ್ ನಿರ್ಮಾಣ ಹಾಗೂ ದಲಿತರ ರುದ್ರಭೂಮಿಯಲ್ಲಿ ಕುಡಿಯುವ ನೀರಿನ ಆರ್ಒ ಘಟಕ ಸ್ಥಾಪನೆಗೆ ಮನವಿ ಸಲ್ಲಿಸಿದರು. ಮಾಜಿ ಸದಸ್ಯ ಗಣೇಶ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಅವರ ಪುತ್ತಳಿಗಳಿಗೆ ಚಾವಣಿ ನಿರ್ಮಿಸಲು ಸೂಚಿಸಿದರು.
ಪುರಸಭೆ ಮಾಜಿ ಸದಸ್ಯ ಆಲಗೂಡು ನಾಗರಾಜು ಮಾತನಾಡಿ, ಆಲಗೂಡು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಅಲ್ಲಿನ ಸ್ಮಶಾನ ದುಸ್ಥಿತಿಯಲ್ಲಿದೆ. ಮೃತರ ಅಂತ್ಯಕ್ರಿಯೆ ಗೌರವಯುತವಾಗಿ ನೆರವೇರಿಸಲು ಸಾಧ್ಯವಾಗುತ್ತಿಲ್ಲ. ಎರಡು-ಮೂರು ಅಡಿ ಆಳದಲ್ಲಿ ಗುಂಡಿ ತೆಗೆಯುತ್ತಿದ್ದಂತೆ ನೀರು ಬರುತ್ತಿರುವ ಪರಿಸ್ಥಿತಿ ಇದೆ. ಆದ್ದರಿಂದ ಪುರಸಭೆ ವತಿಯಿಂದ ಮಣ್ಣು ತುಂಬಿಕೆ ಮಾಡಿ ಸ್ಮಶಾನವನ್ನು ಅಭಿವೃದ್ಧಿಪಡಿಸಬೇಕು, ಜೊತೆಗೆ ನೀರಿನ ತೊಂಬೆ ವ್ಯವಸ್ಥೆ ಹಾಗೂ ಶೌಚಾಲಯವನ್ನು ಕಾರ್ಯಗತಗೊಳಿಸಬೇಕು ಎಂದು ಒತ್ತಾಯಿಸಿದರು.ಬಳಿಕ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಸಿ. ಶ್ರೀನಿವಾಸ್ ಅವರು, 2026-27ನೇ ಸಾಲಿನಲ್ಲಿ ಪುರಸಭೆಗೆ ಸ್ವಂತ ಸಂಪನ್ಮೂಲಗಳಿAದ 5.50 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಪುರಸಭೆಯಲ್ಲಿ ಉಳಿದಿರುವ 2.45 ಕೋಟಿ ರೂ. ಅನುದಾನದಿಂದ ಎರಡು ತಿಂಗಳೊಳಗೆ ಸ್ವಾಗತ ಕಮಾನು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಸೋಮಣ್ಣ,ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ತುಂಬಲ ಪ್ರಕಾಶ್, ಮಾಜಿ ಸದಸ್ಯರಾದ ಮಂಜುನಾಥ್, ಎನ್. ಲೋಕೇಶ್, ಗಣೇಶ್, ಮಿಥುನ್, ದಸಂಸ ಮುಖಂಡ ಆಲಗೂಡು ಚಂದ್ರಶೇಖರ್, ಸಿ. ಮಹದೇವ್, ಎಪಿಎಂಸಿ ಮಾಜಿ ಅಧ್ಯಕ್ಷ ಮಹೇಶ್, ಆಲಗೂಡು ನಾಗರಾಜು, ಪುರಿ ನಟೇಶ್, ರವೀಂದ್ರ, ಬನ್ನಳ್ಳಿ ಹುಂಡಿ ಸೋಮಣ್ಣ, ಆಲಗೂಡು ರಾಜು, ಕಚೇರಿ ವ್ಯವಸ್ಥಾಪಕ ಮಹೇಂದ್ರ, ಇಂಜಿನಿಯರ್ ಚಂದ್ರಶೇಖರ್, ಸಿದ್ದಪ್ಪ, ಆರೋಗ್ಯ ನಿರೀಕ್ಷಕಿ ಚಂಪಾಶ್ರೀ, ಹರೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಜೆಟ್ ಪೂರ್ವಭಾವಿ ಸಭೆ, ಪುರಸಭೆ ಅಭಿವೃದ್ಧಿಗೆ ಜನರ ಸಲಹೆ: ಒತ್ತಾಯ



