ಬೆಂಗಳೂರು: ಬೆಂಗಳೂರಲ್ಲಿ ಏಳುಕೋಟಿ ಹಣ ದರೋಡೆ ಪ್ರಕರಣಕ್ಕೆ ಸಂಬAಧಪಟ್ಟAತೆ ದರೋಡೆ ಹಿಂದಿನ ಅಸಲಿ ಕಥೆ ಬಯಲಾಗಿದೆ. ದರೋಡೆಯ ಮಾಸ್ಟರ್ಮೈಂಡ್ ಜೇವಿಯರ್ ಸೇರಿ ಗ್ಯಾಂಗ್ನಲ್ಲಿದ್ದ ಬಹುತೇಕರಿಗೆ ಮೈತುಂಬಾ ಸಾಲ ಇತ್ತು. ಇಸ್ಪೀಟು ಚಟಕ್ಕೆ ಬಿದ್ದು ಸಾಲ ಮಾಡಿಕೊಂಡಿದ್ದರು. ಎಸಿಎಂ ಕಂಪನಿ ಕೊಡುವ ೧೭,೦೦೦ ರೂ. ಸಂಬಳದಲ್ಲಿ ಸಾಯುವತನಕ ಸಾಲ ತೀರಿಸುವುದಕ್ಕೆ ಆಗುವುದಿಲ್ಲ ಎಂದು ದೊಡ್ಡ ದರೋಡೆಗೆ ಗ್ಯಾಂಗ್ ಕೈಹಾಕಿತ್ತು.ದರೋಡೆ ಮಾಡಿ ಬಂದ ಹಣದಲ್ಲಿ ಮಾಡಿರುವಂತಹ ಸಾಲ ತೀರಿಸಿ ಮಿಕ್ಕ ಹಣದಲ್ಲಿ ವಿಲಾಸಿ ಜೀವನ ನಡೆಸಬಹುದೆಂದು ಆರೋಪಿಗಳು ದೊಡ್ಡ ದರೋಡೆಗೆ ಮಾಡಿದ್ದರೆಂಬ ಮಾಹಿತಿ ಪೊಲೀಸರ ತನಿಖೆಯಿಂದ ಬಯಲಾಗಿದೆ. ಸದ್ಯ ದರೋಡೆಕೋರರನ್ನ ಬೆಂಗಳೂರು ಪೊಲೀಸರು ಬಂಧನ ಮಾಡಿದ್ದಾರೆ. ಸಿಎಂಎಸ್ ಸಂಸ್ಥೆ ಮಾಜಿ ನೌಕರ ಮಾಸ್ಟರ್ಮೈಂಡ್ ಜೇವಿಯರ್, ಗೋವಿಂದಪುರ ಪೊಲೀಸ್ ಠಾಣಾ ಕಾನ್ಸ್ಟೆಬಲ್ ಅಣ್ಣಪ್ಪನಾಯ್ಕ್, ಹಾಲಿ ಸಿಎಂಎಸ್ ಸಂಸ್ಥೆ ಸಿಬ್ಬಂದಿ ಗೋಪಿ, ರವಿ, ಜಿತೇಶ್ ಸೇರಿ ಒಟ್ಟು ಏಳು ದರೋಡೆಕೋರರನ್ನ ಬಂಧಿಸಲಾಗಿದೆ. ಬಂಧಿತ ದರೋಡೆಕೋರರಿಂದ ೬.೨೯ ಕೋಟಿ ಹಣ ರಿಕವರಿ ಮಾಡಲಾಗಿದೆ.



