ಚೆನ್ನೈ ಸೂಪರ್ ಕಿಂಗ್ಸ್ ಕಾಲದಲ್ಲಿ ದೀರ್ಘಕಾಲ ಆಡಿರುವ ರವೀಂದ್ರ ಜಡೇಜಾ ಅವರನ್ನು ಬೇರೊಂದು ತಂಡದಲ್ಲಿ ಕಲ್ಪಿಸಲೂ ಸಾಧ್ಯ ಇರಲಿಲ್ಲ. ಅದೇ ರೀತಿ ಸಂಜು ಸ್ಯಾಮ್ಸನ್ ಅವರು ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಮಾತ್ರವಲ್ಲದೆ ಐಕಾನೇ ಆಗಿದ್ದರು. ಬದಲಾದ ಸನ್ನಿವೇಶದಲ್ಲಿ ರವೀಂದ್ರ ಜಡೇಜಾ ಅವರು ರಾಜಸ್ಥಾನ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಸಂಜು ಚೆನ್ನೈ ತಂಡದಲ್ಲಿದ್ದಾರೆ. ಇವರಿಬ್ಬರೇ ಸೋಮವಾರ ಗುವಾಹಟಿಯಲ್ಲಿ ಇತ್ತಂಡಗಳ ನಡುವೆ ನಡೆಯಲಿರುವ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇಬ್ಬರೂ ತಮ್ಮ ಹಳೆಯ ತಂಡವನ್ನು ಎದುರಿಸುತ್ತಿರುವುದು ಕುತೂಹಲವನ್ನು ಹೆಚ್ಚಿಸಿದೆ.
ಇತ್ತೀಚೆಗೆ ಮುಗಿದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಮೂರು ಅರ್ಧಶತಕ ಬಾರಿಸಿ ಭರ್ಜರಿ ಫಾಮ್ರ್ನಲ್ಲಿರುವ ಸ್ಯಾಮ್ಸನ್, ಋತುರಾಜ್ ಗಾಯಕ್ವಾಡ್ ಜೊತೆ ಇನಿಂಗ್ಸ್ ಆರಂಭಿಸಲಿದ್ದಾರೆ. ಸಿಎಸ್ಕೆನಲ್ಲಿ 14.2 ಕೋಟಿ ರೂ. ಮೊತ್ತಕ್ಕೆ ಖರೀದಿಯಾದ ಕಾರ್ತಿಕ್ ಶರ್ಮಾ ಮತ್ತು ಆಲ್ರೌಂಡರ್ ಪ್ರಶಾಂತ್ ವೀರ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಡಿವಾಲ್ಡ್ ಬ್ರೆವಿಸ್ ಮತ್ತು ಶಿವಂ ದುಬೆ ಮಧ್ಯಮ ಕ್ರಮಾಂಕದ ಶಕ್ತಿಯಾಗಿ ತಂಡಕ್ಕೆ ಬಲ ತುಂಬಿದ್ದಾರೆ.
ಇನ್ನು ಕಾಲಿನ ಸ್ನಾಯು ಸೆಳೆತದಿಂದಾಗಿ ಎಂ.ಎಸ್.
ಧೋನಿ ಕನಿಷ್ಠ ಎರಡು ವಾರಗಳ ಕಾಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಅವರ ಸ್ಥಾನದಲ್ಲಿ ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಅವರೇ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ. ಹೀಗಾಗಿ ಧೋನಿ ಬದಲು ಯಾವ ಬ್ಯಾಟರ್ ಸ್ಥಾನ ಪಡೆಯಬಹುದು ಎಂಬ ಬಗ್ಗೆ ತಂಡ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.
ಹೇಗಿದೆ ಗುವಾಹಟಿ ಪಿಚ್?
ಬರಾಸ್ಪರಾ ಕ್ರಿಕೆಟ್ ಕ್ರೀಡಾಂಗಣ ಪಿಚ್ ಬ್ಯಾಟಿಂಗ್ ಗೆ ಅನುಕೂಲಕಾರಿಯಾಗಿದೆ. ಎರಡನೇ ಅವಧಿಯಲ್ಲಂತೂ ಇಬ್ಬನಿ ಇರುವುದರಿಂದ ಬೆಳಕಿನಲ್ಲಿ ಚೇಸಿಂಗ್ ಮಾಡುವುದು ಸುಲಭ. ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ದುಕೊಂಡರೆ ಹೆಚ್ಚು ಲಾಭ. ಹೀಗಾಗಿ ಬೌಲರ್ಗಳು ಶಿಸ್ತಿನ ಲೈನ್ ಮತ್ತು ಲೆಂತ್ ಅನ್ನು ಕಾಯ್ದುಕೊಂಡರೆ ಮಾತ್ರ ಬ್ಯಾಟರ್
ಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯ.
ಸಂಜು, ಜಡ್ಡು ಮೊದಲ ಬಾರಿ ಅದಲು ಬದಲಾಗಿ ಕಣದಲ್ಲಿ



