ರಂಗಭೂಮಿ ಹಿನ್ನೆಲೆ ಇರುವ ರಂಗಸ್ವಾಮಿ ಕಪಿನಿಪಾಳ್ಯ ನಿರ್ದೇಶನದ, ಹಿತ ಆರ್ ಗೌಡ ನಿರ್ಮಾಣದ “ಸರ್ವಾಂತರ್ಯಾಮಿ” ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಜನಪ್ರಿಯವಾಗಿದೆ. ಈಗ ಯುಗಾದಿ ಹಬ್ಬದ ಸಂದರ್ಭದಲ್ಲಿ ಚಿತ್ರದ ಮತ್ತೊಂದು ಹಾಡು ಅನಾವರಣವಾಗಿದೆ. ಜೀವನದ ಕಹಿ ಸತ್ಯವನ್ನು ಈ ಹಾಡಿನ ಮೂಲಕ ಹೇಳಲಾಗಿದೆ. ನಿರ್ದೇಶಕ ರಂಗಸ್ವಾಮಿ ಕಪನಿಪಾಳ್ಯ ಅವರೆ ಈ ಹಾಡನ್ನು ಬರೆದಿದ್ದಾರೆ. ರವೀಂದ್ರ ಸೊರಗಾವಿ ಹಾಡಿರುವ, ರಮೇಶ್ ಕೃಷ್ಣ ಸಂಗೀತ ಸಂಯೋಜಿಸಿರುವ ಈ ಹಾಡು ವೇದಸ್ಯ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಲಭ್ಯವಿದೆ. ಅಭಿನವ ಕೆಂಪೇಗೌಡ ಡಾ||ಎಚ್ ಎಂ ಕೃಷ್ಣಮೂರ್ತಿ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಆಟೋ ನಾಗರಾಜ್, ತೇಜಸ್ವಿನಿ, ಮಾಯಾರಾ, ಅಮೂಲ್ಯ, ರಂಗಸ್ವಾಮಿ, ವಿಕ್ಟರಿ ವಾಸು, ಪೃಥ್ವಿ, ರಾಗ ಸುಬ್ರಹ್ಮಣ್ಯ, ನಿಖಿತ ಗೌಡ, ರಘು, ನಂದನ್ ಮುಂತಾದವರ ತಾರಾಬಳಗವಿರುವ ಈ ಚಿತ್ರಕ್ಕೆ ರಾಜು ಹೆಮ್ಮಿಗೆಪುರ ಛಾಯಾಗ್ರಹಣ ಹಾಗೂ ದೀಪು.ಸಿ.ಎಸ್ ಅವರ ಸಂಕಲನವಿದೆ. ಪೃಥ್ವಿರಾಜ್ ಸಂಭಾಷಣೆ ಬರೆದಿದ್ದಾರೆ. ನಿರ್ದೇಶಕ ಹಾಗೂ ಗೀತರಚನೆಕಾರ ರಾಮ್ ನಾರಾಯಣ್ ಸಹಕಾರ ನೀಡುತ್ತಿದ್ದಾರೆ.



