ಚಿಂತಾಮಣಿ: ಶಿವರಾತ್ರಿ ಎಂದರೇ ಪರಮಾತ್ಮ ಶಿವ ಅಜ್ಞಾನವನ್ನು ದೂರಮಾಡಿ ಜ್ಞಾನದ ಬೆಳಕನ್ನು ನೀಡಲು ಬರುತ್ತಾರೆ. ಶಿವನ ರೂಪ ಜ್ಯೋತಿ ರೂಪ ಅಂದರೆ ಬಿಂದು ಸ್ವರೂಪ ಶಂಕರ ಆಕಾರ ರೂಪದಲ್ಲಿ ಅದರಿಂದ ಶಿವ ಕಲ್ಯಾಣಕಾರಿ ಶಂಕರ ವಿನಾಶಕರೀ ಎಂದು ಹೇಳುತ್ತಾರೆ.
ಶಿವ ಜ್ಞಾನವನ್ನು ಕೊಟ್ಟು ಮುಕ್ತಿಧಾಮಕ್ಕೆ ಕರೆದುಕೊಂಡು ಹೋಗುತ್ತಾನೆ. ಆತ್ಮನು ಜ್ಞಾನ ಯೋಗದಿಂದ ಸಂಪನ್ನ ಮಾಡಲು ಬರುವುದರಿಂದ ಶಿವರಾತ್ರಿ ಎಂದು ಹೇಳುತ್ತಾರೆ. ಆತ್ಮ ಸತ್ಯ, ದೇಹ ಸುಳ್ಳು , ಮನುಷ್ಯ ಮರಣ ಹೊಂದಿದಾಗ ಸತ್ಯ ಆತ್ಮದ ಜೊತೆ ಹೋಗುತ್ತದೆ. ಸುಳ್ಳು ದೇಹದ ಜೊತೆನಾಶ ಹೊಂದುತ್ತದೆ. ಭಗವಂತನಿಗೆ ನಾವು ಏನಾದ್ರೂ ಕೊಡುಗೆ ನೀಡಬೇಕಾದರೆ ಶಿವನ ಸ್ಮರಣೆಗೆ ಸಮಯವನ್ನು ನೀಡಿರಿ. ನರಕವಾಗಿರುವ ಭೂಮಿಯನ್ನು ಸ್ವರ್ಗ ಮಾಡಲು ಭಗವಂತನು ಅವತರಿಸಿದ ದಿನವನ್ನು ಶಿವರಾತ್ರಿ ಎಂದು ಕರೆಯುತ್ತಾರೆ. ಎಂದು ಕೈವಾರ ಶಾಖೆಯ ಸಂಚಾಲಕಿ ಬಿ ಕೆ ಸರೋಜಾ ಅಕ್ಕನವರು ಶಿವರಾತ್ರಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಚಿಂತಾಮಣಿ ತಾಲೂಕಿನ ಕೈವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಶ್ರದ್ದಾ ಭಕ್ತಿಯಿಂದ ಶಿವರಾತ್ರಿ ಆಚರಣೆ ಮಾಡಲಾಯಿತು. ಶಿಕ್ಷಕ ಶ್ರೀಧರ ಹಿರೇಮಠ್ ಮಾತನಾಡಿ ಶಿವರಾತ್ರಿ ಅಂದು ಶಿವನಿಗೆ ಪ್ರಿಯವಾದ ಹೃದಯದ ಆಕಾರ ಇರುವ ಬಿಲ್ವ ಪತ್ರಿಯನ್ನು ಶಿವನಿಗೆ ಅರ್ಪಿಸುವದರಿಂದ ಆತ್ಮ ಪರಮಾತ್ಮ ಒಂದಾಗುತ್ತಾರೆ. ಆಗ ಮನಸ್ಸು ಪ್ರಶಾಂತವಾಗಿ ಏಕಾಗ್ರತೆಯಿಂದ ಶಿವನ ಸ್ಮರಣೆ ಮಾಡಬಹುದು. ಬಿಲ್ವ ಪತ್ರಿಯಲ್ಲಿ ಆಮ್ಲಜನಕ ಹೆಚ್ಚಾಗಿರುವುದರಿಂದ ಉಸಿರಾಟ ಕ್ರಿಯೆ ಉತ್ತಮಗೊಳ್ಳುವುದು ಮತ್ತು ಶಿವರಾತ್ರಿ ಸಮಯದಲ್ಲಿ ಉಪವಾಸ ಮತ್ತು ಜಾಗರಣೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂಬ ವೈಜ್ಞಾನಿಕ ಕಾರಣ ಒಳಗೊಂಡಿದೆ ಎಂದು ಹೇಳಿದರು. ಕೃಷ್ಣಪ್ಪ ಅವರು ಮಾತನಾಡಿ ಸತ್ಯ ಶಿವರಾತ್ರಿ ಬಗ್ಗೆ ತಿಳಿಸಿ ಕೊಟ್ಟರು. ಮುಂಜಾನೆ ಶಿವಲಿಂಗವನ್ನು ಸ್ಥಾಪನೆ ಮಾಡಿ ವಿಶೇಷ ಪೂಜೆ ಮಾಡಲಾಯಿತು. ಶಿವನ ಸಾಕ್ಷಾತಕಾರ ಕ್ಕೆ ಧ್ವಜಾರೋಹಣ ಮಾಡಲಾಯಿತು.
ವಾಹನದ ಮೇಲೆ ಶಿವಲಿಂಗವನ್ನು ಸ್ಥಾಪಿಸಿ ಕೈವಾರ ಸುತ್ತ ಮುತ್ತ ಗ್ರಾಮಗಳಲ್ಲಿ ಸಂಚರಿಸಿ ಶಿವನ ವಾಣಿಯನ್ನು ತಿಳಿಸುತ್ತ ಮೆರವಣಿಗೆ ಮೂಲಕ ರಥ ಯಾತ್ರೆ ಮಾಡಲಾಯಿತು. ಸಂಜೆ ಶಿವರಾತ್ರಿ ಪ್ರವಚನ, ಮಕ್ಕಳಿಂದ ಭರತ ನಾಟ್ಯ, ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಮಾದೇವಿ, ಸುಜಾತಾ, ಶಾರದಕ್ಕ, ಕೃಷ್ಣಪ್ಪ, ಪುಷ್ಪಕ್ಕ, ಲೊಕೇಶಪ್ಪ, ಸುನೀತಾ, ಶ್ರೀನಿವಾಸ್, ಸೋಮು, ಅರುಣಾ ಉಪಸ್ಥಿತರಿದ್ದರು.
ಆತ್ಮ ಸತ್ಯ, ದೇಹ ಸುಳ್ಳು: ಕೈವಾರದಲ್ಲಿ ಶಿವರಾತ್ರಿ ಪ್ರವಚನ



