ಶಿಡ್ಲಘಟ್ಟ ಗ್ರಾಮಾಂತರ: ತಾಲ್ಲೂಕಿನ ಸಾದಲಿ ಗ್ರಾಮದ ಮುಖಂಡರು, ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ, ಶಾಸಕ ಬಿ.ಎನ್.ರವಿಕುಮಾರ್ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ತಾಲ್ಲೂಕಿನ ಮೇಲೂರು ಶಾಸಕ ಬಿ.ಎನ್.ರವಿ ಕುಮಾರ್ ಅವರ ಗೃಹ ಕಚೇರಿಯಲ್ಲಿ ಸಾದಲಿ ಗ್ರಾಮದ ಸವಿತಾ ಸಮಾಜದ ಇಪ್ಪತ್ತೂ ಕುಟುಂಬಗಳು ಸೇರಿದಂತೆ ಇನ್ನೂ ಅನೇಕ ಮುಖಂಡರು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ, ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಶಾಸಕ ಬಿ.ಎನ್.ರವಿ ಕುಮಾರ್ ಅವರು ಸೇರ್ಪಡೆಯಾದಂತಹ ಎಲ್ಲರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಮುಖಂಡ ನರಸಿಂಹ ಮೂರ್ತಿ ಅವರು, ಸಾದಲಿ ಭಾಗವು ಅಭಿವೃದ್ಧಿ ಹೊಂದದೆ ಇರುವುದು ದುರಾದೃಷ್ಟದ ಸಂಗತಿಯಾಗಿದೆ. ಈ ಹಿಂದೆ ಹಲವರು ಶಾಸಕರುಗಳು ಯಾವುದೇ ರೀತಿಯಾದಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಇರುವುದು ನಮ್ಮ ಭಾಗದ ಜನತೆಯ ದುರಾದೃಷ್ಟ. ಈಗಿನ ಶಾಸಕ ಬಿ.ಎನ್ ರವಿಕುಮಾರ್ ಅವರು ನಮ್ಮ ಸಾದಲಿ ಭಾಗಕ್ಕೆ ಹೆಚ್ಚಿನ ಆಧ್ಯತೆ ನೀಡಿ, ಗಡಿಮಿಂಚೇನಹಳ್ಳಿ ರಸ್ತೆ, ಸಾದಲಿ- ಪೆರೆಸಂದ್ರ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಸರ್ಕಾರದ ಅನುದಾನ ಸಿಗದೇ ಇದ್ದ ಪಕ್ಷದಲ್ಲಿ ವೈಯಕ್ತಿಕವಾಗಿ ಅಭಿವೃದ್ಧಿಪಡಿಸುವ ಭರವಸೆಯನ್ನು ನೀಡಿದ್ದು, ನಾವೆಲ್ಲ ಸ್ವಾಭಿಮಾನದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇವೆ ಎಂದು ತಿಳಿಸಿದರು.
ಸಾದಲಿ ಗ್ರಾಮದ ಬಿ.ಎಸ್.ಶಿವಪ್ಪ, ಬಿ.ಎಸ್.ಮಂಜುನಾಥ್, ಎಸ್.ಎನ್.ರಾಜು, ಎಸ್.ಎಂ ಮಂಜುನಾಥ್, ಕ್ರಾಸ್ ಮಂಜುನಾಥ್, ಚರಣ್ ಕುಮಾರ್, ನರಸಿಂಹಮೂರ್ತಿ, ಎಸ್.ಆರ್. ಮಂಜುನಾಥ್, ಟೈಲರ್ ವೆಂಕಟೇಶ್, ನಾಗಭೂಷಣ್, ಪ್ರಸಾದ್, ಬಿ.ಎಸ್. ಸುಬ್ರಮಣಿ, ಎಸ್.ಎನ್ ಶಂಕರಪ್ಪ, ಎಸ್.ವಿ.ನಾರಾಯಣಸ್ವಾಮಿ, ಎಸ್.ವಿ.ಕೃಷ್ಣಪ್ಪ, ಎಸ್.ವಿ.ಸುಬ್ರಮಣಿ, ಎಸ್.ವಿ ಚಂದ್ರಶೇಖರ್, ಬಿ.ಎಸ್.ನಾಗರಾಜ್, ಎಸ್.ಟಿ.ಸತೀಶ್ ಕುಮಾರ್, ಎಸ್.ಎಂ.ಸುರೇಶ್, ಎಸ್.ಎನ್ ನರಸಿಂಹಮೂರ್ತಿ, ಎಸ್.ಎನ್.ಚಿಕ್ಕನರಸಿಂಹಮೂರ್ತಿ, ನರಸಿಂಹರಾಜು, ಎಸ್.ಎಂ..ನಾಗರಾಜು, ಕೆ.ಎನ್.ಗೋಪಿನಾಥ್, ಪಾರಿವ್ ಅಹಮದ್ ಮುಂತಾದವರು ಹಾಜರಿದ್ದರು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ಜೆಡಿಎಸ್ ಮುಖಂಡ ತಾದೂರು ರಘು ಸೇರಿದಂತೆ ಮುಂತಾದವರು ಹಾಜರಿದ್ದರು.
೨೬.ಎಸ್.ಡಿ.ಎಲ್.ಪಿ.೦೨: ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಅವರ ಸ್ವಗೃಹದಲ್ಲಿ ಸಾದಲಿ ಗ್ರಾಮದ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.