Tag: ಡಾ.

ರಾಷ್ಟಿçಯ ಪತ್ರಿಕಾ ದಿನಾಚರಣೆ ಅಂಗವಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬದಲಾಗುತ್ತಿರುವ ಪತ್ರಿಕಾಮಾಧ್ಯಮದ ಸ್ವರೂಪ ಕುರಿತು ವಿಚಾರ ಸಂಕಿರಣಕ್ಕೆ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೋಯ್ಲಿ ಚಾಲನೆ ನೀಡಿದರು. ಅಜೀಂ ಪ್ರೇಮ್‌ಜೀ, ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎ. ನಾರಾಯಣ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾಖಾನಂ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರ್ಕಾರ ಕಾರ್ಯದರ್ಶಿ ಬಿಬಿ ಕಾವೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆ, ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಅವರು ಉಪಸ್ಥಿತರಿದ್ದರು. ಇಂದುಸಂಜೆ ಪತ್ರಿಕೆ ವ್ಯವಸ್ಥಾಪಕ ಸಂಪಾದಕರಾದ ಡಾ. ಜಿ.ವೈ. ಪದ್ಮನಾಗರಾಜು ಮತ್ತಿತರರು ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮದ ಶುಭಾರಂಭ ಮಾಡಿದರು.

ಬೆಂಗಳೂರು ಕೋರಮಂಗಲದಲ್ಲಿರುವ ಹೆಸರಾಂತ ಸಫೈರ್ ಸ್ಕಿನ್ ಅಂಡ್ ಅಸ್ಥೆಟಿಕ್ ಕ್ಲಿನಿಕ್‌ನ ಆವರಣದಲ್ಲಿ, ಚರ್ಮರೋಗ ತಪಾಸಣೆ ಹೃದ್ರೋಗ ತಪಾಸಣೆಯ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದ್ದರು, ಖ್ಯಾತ ಚರ್ಮರೋಗತಜ್ಞೆ ಡಾ.ಶೀಲಾನಟರಾಜ್, ಬೆಂಗಳೂರು ಜಯದೇವ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ವಿದೇಶಗಳಿಂದ ೪ ಎಫ್‌ಆರ್‌ಸಿಎಸ್ ಪದವಿ ಪಡೆದಿರುವ ಪ್ರೊ ಡಾ.ಹೆಚ್.ಎಸ್. ನಟರಾಜ ಶೆಟ್ಟಿರವರು ಉಚಿತ ಆರೋಗ್ಯ ಶಿಬಿರದಲ್ಲಿ ೫೦೦ಕ್ಕೂ ಹೆಚ್ಚಿನ ರೋಗಿಗಳಿಗೆ ಇಸಿಜಿ, ಎಕೋ, ಇತ್ಯಾದಿ ತಪಾಸಣೆ ಮಾಡಿ ೨ಲಕ್ಷಕ್ಕೂ ರೂಪಾಯಿ ಮೌಲ್ಯದ ಔಷಧಿಗಳನ್ನು ರೋಗಿಗಳಿಗೆ ಉಚಿತವಾಗಿ ವಿತರಿಸಿದರು. ಶಿಬಿರದಲ್ಲಿ ಡಾ.ಮೋಹಿತ್‌ಗೌಡ, ಡಾ.ರಾಕೇಶ್‌ರೆಡ್ಡಿ, ಡಾ.ದೀಪಕ್ ಅಟ್ವಿ, ಡಾ. ಕಾವ್ಯರೇಗಂಟಿ, ಡಾ.ವೈಷ್ಣವಿ, ಡಾ.ರಾಜಶ್ರೀ ಹಾಗೂ ಲ್ಯಾಬ್ ಟೆಕ್‌ನಿಷಿಯನ್ ನಂದಿತಾ ಇತರರಿದ್ದರು. ಚಿತ್ರ:ಜಿ.ಎಲ್.ಸಂಪAಗಿರಾಮುಲು

";