Tag: ಮಾಡಿದರು.

ಬೆಂಗಳೂರು ಆವಲಹಳ್ಳಿಯ ರಾಮಪುರದಲ್ಲಿರುವ ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಶಾಲಾ ವಾರ್ಷಿಕೋತ್ಸವ ಅದ್ದೂರಿಯಾಗಿ ಜರುಗಿತು, ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಬೆಂಗಳೂರು ಜಯನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಸೌಮ್ಯರೆಡ್ಡಿ ರವರು ಭಾಗವಹಿಸಿ, ಶಾಲಾ ವಾರ್ಷಿಕ ವರದಿ ಪುಸ್ತಕ ಬಿಡುಗಡೆ ಮಾಡಿದರು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಉತ್ತಮ ಶಾಲೆ ಎಂದು ಬಣ್ಣಿಸಿದರು, ವಿದ್ಯಾ ಸಂಸ್ಥೆಯ ಚೇರ್ಮನ್ ಪಿ. ಆಂಜಿನಪ್ಪ, ನಿರ್ದೇಶಕರಾದ ರಮಾದೇವಿ ಮತ್ತು ಲಾಸ್ಯ ಸೌಜನ್ಯ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಸೇರಿದಂತೆ ಸಾವಿರಾರು ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಚಿತ್ರ: ಜಿ.ಎಲ್.ಸಂಪಂಗಿ ರಾಮುಲು

ರಾಷ್ಟಿçಯ ಪತ್ರಿಕಾ ದಿನಾಚರಣೆ ಅಂಗವಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬದಲಾಗುತ್ತಿರುವ ಪತ್ರಿಕಾಮಾಧ್ಯಮದ ಸ್ವರೂಪ ಕುರಿತು ವಿಚಾರ ಸಂಕಿರಣಕ್ಕೆ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೋಯ್ಲಿ ಚಾಲನೆ ನೀಡಿದರು. ಅಜೀಂ ಪ್ರೇಮ್‌ಜೀ, ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎ. ನಾರಾಯಣ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾಖಾನಂ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರ್ಕಾರ ಕಾರ್ಯದರ್ಶಿ ಬಿಬಿ ಕಾವೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆ, ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಅವರು ಉಪಸ್ಥಿತರಿದ್ದರು. ಇಂದುಸಂಜೆ ಪತ್ರಿಕೆ ವ್ಯವಸ್ಥಾಪಕ ಸಂಪಾದಕರಾದ ಡಾ. ಜಿ.ವೈ. ಪದ್ಮನಾಗರಾಜು ಮತ್ತಿತರರು ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮದ ಶುಭಾರಂಭ ಮಾಡಿದರು.

ಪತ್ತೇದಾರಿ ಕಾದಂಬರಿ ಸಾರ್ವಭೌಮ ಎನ್. ನರಸಿಂಹಯ್ಯರ ಜನ್ಮಶತಮಾನ ವರ್ಷಾಚರಣೆ ಕಾರ್ಯಕ್ರಮ-೫ರ ಪ್ರಯುಕ್ತ “ಸಮ್ಮಿಲನ” ಕಲೆ ಸಾಹಿತ್ಯ ಸಾಂಸ್ಕöÈತಿಕ ವೇದಿಕೆಯಿಂದ ಅಯೋಜಿಸಿದ್ದ ದೀಪಾವಳಿ ಹಾಗೂ ರಾಜ್ಯೋತ್ಸವ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಿವೃತ್ತ ಡಿವೈಎಸ್ಪಿ ಹಾಗೂ ಸಾಹಿತಿಗಳೂ, ಅಂಕಣಕಾರರೂ ಬಹುಮುಖಿ ಹೋರಾ ಟಗಾರ ಜೆ.ಬಿ.ರಂಗಸ್ವಾಮಿ”ಜೇಬರ್” ರವರಿಗೆ,ಹಿರಿಯ ಕನ್ನಡಪರ ಹೋರಾಟಗಾರರೂ, ಸಾಹಿತಿ ಮಧು ಬಿಲ್ಲಿನಕೋಟೆ ಹಾಗೂ ಶೇಷಾದ್ರಿಪುರಂ ಸಂಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಚಂದ್ರಿಕಾ ಪುರಾಣಿಕ್ ರವರುಗಳಿಗೆ “ಪತ್ತೇದಾರಿ ಸಾಹಿತಿ ಎನ್ ನರಸಿಂಹಯ್ಯ ಸ್ಮಾರಕ ಪ್ರಶಸ್ತಿ”ಯನ್ನು “ಅಕ್ಷರ ಐಸಿರಿ” ಪತ್ರಿಕೆಯ ಗೌರವ ಸಂಪಾದಕ ರಾಂಕೆ.ಹನುಮAತಯ್ಯರವರು ಪ್ರದಾನ ಮಾಡಿದರು. ಈ ವೇಳೆ ರತ್ನಾರಾವ್, ನಾಗೇಶ್ ಡಿ.ಪಾಟಕ್, ಸುಭಾಷ್ ಎಂ. ಹರಾಳು, ಗೀತಾ ಡಿ. ಬಿ ಹಾಗೂ “ಸಮ್ಮಿಲನ”ದ ಸಂಸಾಪಕ ಕುವರ ಯಲ್ಲಪ್ಪ ಉಪಸ್ಥಿತರಿದ್ದಾರೆ.

";