ಅಹ್ಮದಾಬಾದ್: ಐಸಿಸಿ ಟಿ೨೦ ವಿಶ್ವಕಪ್ ನಲ್ಲಿ ಭಾರತದ ಅಜೇಯ ಓಟಕ್ಕೆ ದಕ್ಷಿಣ ಆಫ್ರಿಕಾ ಬ್ರೇಕ್ ಹಾಕಿದೆ. ಈ ಮೂಲಕ ೨೦೨೪ರ ಆವೃತ್ತಿಯ ಫೈನಲ್ ನಲ್ಲಾದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಪಂದ್ಯದ ಆರಂಭದಲ್ಲಿ ಸಿಕ್ಕ ಯಶಸ್ಸನ್ನು ಗೆಲುವನ್ನಾಗಿ ಪರಿವರ್ತಿಸಲು ಸಾಧ್ಯವಾಗದ ಭಾರತ ತಂಡ ೭೬ ರನ್ ಗಳಷ್ಟು ದೊಡ್ಡ ಅಂತರದಿಂದ ಸೋಲುವ ಮೂಲಕ ಇದೀಗ ಸೆಮಿಫೈನಲ್ ಹಾದಿಯನ್ನು ಕಠಿಣ ಮಾಡಿಕೊಂಡಿದೆ.
ಸದ್ಯಕ್ಕೆ ಮುಂದಿನ ಪಂದ್ಯಗಳಲ್ಲಿ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ದೊಡ್ಡ ಗೆಲುವು ಮಾತ್ರ ಭಾರತವನ್ನು ಅಂಕಪಟ್ಟಿಯಲ್ಲಿ ಸುರಕ್ಷಿತವಾಗಿಡಬಹುದು. ಯಾಕೆಂದರೆ ದಕ್ಷಿಣ ಆಪ್ರಿಕಾ ವಿರುದ್ಧ ಭಾರತ ತಂಡ ದೊಡ್ಡ ಅಂತರದಿಂದ ಸೋತಿರುವುದರಿಂದ ರನ್ ರೇಟ್ ಸಹ -೩.೮೦೦ಕ್ಕೆ ಕುಸಿದಿದೆ. ಇದು ಅಂಕಪಟ್ಟಿಯಲ್ಲಿ ದೊಡ್ಡ ವ್ಯತ್ಯಾಸ ತರಬಲ್ಲುದು. ಮುಂದಿನ ಪಂದ್ಯವನ್ನು ಭಾರತ ಫೆಬ್ರವರಿ ೨೬ರಂದು ಚೆನ್ನೆöÊನಲ್ಲಿ ಜಿಂಬಾಬ್ವೆ ವಿರುದ್ಧ ಆಡಲಿದೆ. ಬಳಿಕ ಮಾರ್ಚ್ ೧ರಂದು ಈಡನ್ ಗಾರ್ಡನ್ ನಲ್ಲಿ ವೆಸ್ಟ್ ಇಂಡೀಸ್ ಅನ್ನು ಎದುರಿಸಲಿದೆ.
ಈ ಎರಡೂ ತಂಡಗಳು ಈ ಟೂರ್ನಿಯಲ್ಲಿ ನಿರೀಕ್ಷೆಗೂ ಮೀರಿ ಆಡುತ್ತಿದ್ದು ಅಚ್ಚರಿಯ ಫಲಿತಾಂಶಗಳನ್ನು ನೀಡಿರುವುದು ಗೊತ್ತೇ ಇದೆ. ಇನ್ನು ಯಾವುದಾದರೊಂದು ಪಂದ್ಯ ಮಳೆಗೆ ಆಹುತಿಯಾದಲ್ಲಿ ತಂಡ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಹೀಗಾಗಿ ಉಳಿದೆರಡು ಪಂದ್ಯಗಳನ್ನು ಭಾರತ ಉತ್ತಮ ರನ್ ರೇಟ್ ನೊಂದಿಗೆ ಗೆದ್ದಲ್ಲಿ ಸುರಕ್ಷಿತವಾಗಿ ಸೆಮಿಫೈನಲ್ ತಲುಪಬಲ್ಲುದು.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸೂಪರ್ ಸಿಕ್ಸ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ ೨೦ ಓವರ್ ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೧೮೭ ರನ್ ಗಳಿಸಿತು. ಇದಕ್ಕುತ್ತರವಾಗಿ ಭಾರತ ತಂಡ ೧೮.೫ ಓವರ್ ಗಳಲ್ಲಿ ೧೧೧ ರನ್ ಗಳಿಗೆ ಆಲೌಟ್ ಆಯಿತು. ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಉತ್ತಮ ಪ್ರಯತ್ನವನ್ನೇ ನಡೆಸಿದರೂ ಉಳಿದ ಬ್ಯಾಟರ್ ಗಳು ವಿಫಲರಾಗಿದ್ದರಿಂದ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಆಕರ್ಷಕ ಅರ್ಧಶತಕ ಬಾರಿಸಿದ ಡೇವಿಡ್ ಮಿಲ್ಲರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್
ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡ ಭಾರತದ ವೇಗಿಗಳಾದ ಅರ್ಶದೀಪ್ ಸಿಂಗ್ ಮತ್ತು ಜಸ್ಪಿçÃತ್ ಬುಮ್ರಾ ಅವರು ವಿಪರೀತ ಕಾಟ ನೀಡಿದರು. ಪರಿಣಾಮ ೨೦ ರನ್ ಆಗುವಷ್ಟರಲ್ಲಿಯೇ ದಕ್ಷಿಣ ಆಫ್ರಿಕಾ ತಂಡ ೩ ವಿಕೆಟ್ ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಡಿವಾಲ್ಡ್ ಬ್ರೇವಿಸ್ ಮತ್ತು ಡೇವಿಡ್ ಮಿಲ್ಲರ್ ಅವರು ೪ನೇ ವಿಕೆಟ್ ಗೆ ೯೭ ರನ್ ಗಳ ಜೊತೆಯಾಟವಾಡಿ ತಂಡವನ್ನು ಮೇಲೆತ್ತಿದರು.
ಹರಿಣಗಳ ಎದುರು ಪರದಾಡಿದ ಟೀಂ ಇಂಡಿಯಾ



