ಹುಬ್ಬಳ್ಳಿ: ಅರ್ಜುನ ಗೊಥೆ ೫೩, ಶೀವಂ ಕಾಟವೆ ೨೮ ಅವರ ಉತ್ತಮ ಬ್ಯಾಟಿಂಗ್ ಹಾಗೂ ಸುಚೇತನ್ ಹರಿಹರ ೨೨-೩, ನಿತಾಂತ್ ಪಾವಸ್ಕರ್ ೨೦-೩ ಇವರ ಉತ್ತಮ ಬೌಲಿಂಗ್ನಿAದ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡಮಿ ಎ ತಂಡ ಎಸ್ಡಿಎಂ ಕ್ರಿಕೆಟ್ ಅಕಾಡಮಿ ಎ ತಂಡದ ವಿರುದ್ಧ ೪೭ರನ್ಗಳಿಗಳಿಂದ ಜಯ ಗಳಿಸಿ ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಏSಅಂ) ಆಯೋಜಿಸಿದ್ದ ಅಂಡರ್ ೧೬ ಇಂಟರ್ ಕ್ಲಬ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಎಸ್ಡಿಎಂ ಕ್ರಿಕೆಟ್ ಅಕಾಡಮಿ ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡಮಿ ಎ ತಂಡ ೪೦.೪ಓವರ್ನಲ್ಲಿ ೧೪೯ಕ್ಕೆ ಆಲ್ಔಟ್ ಆಯಿತು. ತಂಡದ ಪರ ಅರ್ಜುನ ಗೊಥೆ
೫೩, ಶೀವಂ ಕಾಟವೆ ೨೮, ನಿತಾಂತ್ ಪಾವಸ್ಕರ್ ೧೬ ರನ್ಮಗಳಿಸಿದರು. ಲೀಲಾಕೃಷ್ಣ ೩೨-೩, ಅಣ್ಣಪ್ಪ ಹೊಸಮನಿಮ೨೮-೨, ನವಾಜ್ ಶಿಬಾರಗಟ್ಟಿ ೨೩-೨ವಿಕೆಟ್ ಪಡೆದರು. ನಂತರ ಬ್ಯಾಟಿಂಗ್ ಮಾಡಿದ ಎಸ್ಡಿಎಂ ಕ್ರಿಕೆಟ್ ಅಕಾಡಮಿ ೪೫.೪ಓವರ್ನಲ್ಲಿ ೧೦೨ರನ್ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು. ತಂಡದ ಪರ ಶಲೊಕ್ ಮಹಾಲೆ ೩೨ ರನ್ ಗಳಿಸಿದರು. ಸುಚೇತನ್ ಹರಿಹರ ೨೨-೩, ನಿತಾಂತ್ ಪಾವಸ್ಕರ್ ೨೦-೩, ಹರೀಶಗೌಡ ತೋಟದ ೧೫-೨ ವಿಕೆಟ್ ಪಡೆದುಕೊಂಡರು.
ಈ ಸಂಧರ್ಭದಲ್ಲಿ ಕ್ರೀಡಾಪಟುಗಳಾದ ಅನೂಪ್ ಅಣ್ಣಿಗೇರಿ, ಶರಣ್ ಆರಾಧ್ಯ, ಶಿವಮ್ ಕಾಟವೆ, ಅಕ್ಷ ಯ್ ಎಂ, ನಿತಾಂತ್ ಪಾವಸ್ಕರ್ ಅಲೋಕ್ ಜಪಣ್ಣವರ, ಬೆನಕಾ ಹೊಸಮನಿ, ಸುಚೇತನ ಹರಿಹರ. ಕುಳಿತವರು: ರೋನಕ್ ಪವಾರ್, ಪ್ರತೀಥ್ ಜಂಬoಗಿ (ಕ್ಯಾಪ್ಟನ್), ನಟರಾಜ ಯಾವಗಲ್ (ಕೋಚ್), ಪ್ರಮೋದ್ ಜಂಬಗಿ (ನಿರ್ದೇಶಕ), ಹರ್ಷಿತ್ಗೌಡ ಟೋಟದ, ಅರ್ಜುನಗೊಥೆ ಉಪಸ್ಥಿತರಿದ್ದರು.