ಬೆಂಗಳೂರು: ಚಾಮರಾಜಪೇಟೆ ಕೋಟೆ ಹೈಸ್ಕೂಲ್ ಮೈದಾನದಲ್ಲಿ ಮಾರ್ಚ್ ೨೭ ರಿಂದ ಏಪ್ರಿಲ್ ೨೨ರ ತನಕ ೮೮ನೇ ಶ್ರೀರಾಮನವಮಿ ಉತ್ಸವ ನಡೆಯಲಿದೆ. ಪ್ರತಿದಿನ ಸಂಜೆ ಸಂಗೀತ ಕಾರ್ಯಕ್ರಮಗಳು ಬೆಳಿಗ್ಗೆ ಧಾರ್ಮಿಕ ಉಪನ್ಯಾಸಗಳು ನಡೆಯಲಿದೆ. ಶುಕ್ರವಾರ ಚಪ್ಪರ ಮುಹೂರ್ತ ನಡೆದಿದ್ದು ಐ ಎ ಎಸ್ ಅಧಿಕಾರಿ ಸಿ ಎಸ್ ಕೇದಾರ್ ( ನಿವೃತ್ತ )ಐ ಪಿ ಎಸ್ ಅಧಿಕಾರಿಗೋಪಾಲ್ ಹೊಸೂರು ( ನಿವೃತ್ತ ) ಸುಬ್ಬ ನರಸಿಂಹ ಮುಂತಾದ ಗಣ್ಯರು ಪಾಲ್ಗೊಂಡರು. ಶ್ರೀ ರಾಮ ಸೇವಾ ಮಂಡಳಿಯ ಮುಖ್ಯಸ್ಥರಾದ ಎಸ್.ಎನ್.ವರದರಾಜ್ ಹಾಗೂ ಎಸ್. ವಿ. ಅಭಿಜಿತ್ ಇದ್ದಾರೆ.



