ನೆಲಮಂಗಲ: ಆಂಜನೇಯ ಸ್ವಾಮಿದೇವಾಲಯದಲ್ಲಿ ಬಾಲಕ ಆಟವಾಡುವ ವೇಳೆ ದೇವಾಲಯದಗೇಟ್ ಬಿದ್ದು ಬಾಲಕನ ಕಾಲು ಮುರಿತವಾಗಿರುವಘಟನೆ ನಡೆದಿದೆ.
ಬೆಂಗಳೂರು ಹೊರವಲಯ ನೆಲಮಂಗಲ ಬಳಿಯ ಮಾಕಳಿಯ ಬೈಲಾಂಜನೇಯದೇವಾಲಯದಲ್ಲಿಘಟನೆ ನಡೆದಿದೆ. ಮುಜರಾಯಿಇಲಾಖೆಯ ಬೇಜವಾಬ್ದಾರಿತನಕ್ಕೆ ಲೋಹಿತ್ ನಾಯಕ್( ೧೧) ಎಂಬ ಬಾಲಕನ ಕಾಲು ಮುರಿದಿದೆ.
ದೇಸ್ಥಾನದ ಬಳಿ ಆಟವಾಡಲು ಹೋಗಿದ್ದಾಗಘಟನೆ ನಡೆದಿದ್ದು, ಗೇಟ್ತೊಡೆಯ ಮೇಲೆ ಬಿದ್ದುತೊಡೆಭಾಗದ ಮೂಳೆ ಮುರಿತ ಮುಜರಾಯಿಇಲಾಖೆಯ ನಿರ್ಲಕ್ಷ÷್ಯಕ್ಕೆಕಾರಣಎಂದು ಹೇಳಲಾಗಿದೆ.ಕುಮಾರ್ ನಾಯಕ್ ಹಾಗೂ ಭಾರತಿ ಬಾಯಿ ದಂಪತಿಯ ಮಗನಾಗಿರುವ ಲೋಹಿತ್ ನಾಯಕ್ ಅರಸೀಕೆರೆ ಮೂಲದವರು.ಕಳೆದ ೧೩ ವರ್ಷಗಳಿಂದ ಮಾಕಳಿಯಲ್ಲಿ ವಾಸವಾಗಿದ್ದರು.ಕ್ಯಾಬ್ಚಾಲಕನಾಗಿರುವ ಬಾಲಕನ ತಂದೆ ನಿನ್ನೆ ನೆಲಮಂಗಲ ಬಳಿಯ ಮಾಕಳಿ ಬೈಲಾಂಜನೇಯ ಸ್ವಾಮಿದೇವಸ್ಥಾನಕ್ಕೆ ಮಗನನ್ನಕರೆದುಕೊಂಡು ಹೋಗಿದ್ದರು.ಸದ್ಯ ಬಾಲಕ ಸ್ಥಳೀಯ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾನೆ.



