ಬೆಂಗಳೂರು : ಬೆಳ್ಳಂದೂರು, ವೈಟ್ ಫೀಲ್ಡ್ ಮತ್ತು ಕೆ ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಪಘಾತ ಸಂಭವಿಸಿ ಮೂರು ಜನ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಜಾಪುರ ರಸ್ತೆ ಬಳಿ ಶೆಲ್ ಪೆಟ್ರೋಲ್ ಬಂಕ್ ಹತ್ತಿರ ಆಟೋ ರಿಕ್ಷಾ ಚಾಲಕ ಅತಿ ವೇಗವಾಗಿ ಆಟೋ ಚಲಾಯಿಸಿ ಆಟೋ ಪಲ್ಟಿ ಹೊಡೆದು ಸ್ವಾಮಿ ೫೮ ವರ್ಷದ ವ್ಯಕ್ತಿ ಮೃತ ಪಟ್ಟಿರುತ್ತಾರೆ ಇವರ ಮಡದಿ ತೀವ್ರತರವಾದ ಗಾಯ ಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.
ಕೆಆರ್ ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೇವಸಂದ್ರದ ಬಳಿ ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ವೆಂಕಟಸ್ವಾಮಿ ೬೫ ಮೃತಪಟ್ಟಿರುತ್ತಾರೆ.
ಬೆಳ್ಳಂದೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ಲೂರು ಜಂಕ್ಷನ್ ಬಳಿ ಮೋಟಾರ್ ಬೈಕ್ ಸವಾರ ಅತಿ ವೇಗವಾಗಿ ಗಾಡಿ ಚಲಾಯಿಸಿ ಸ್ಕಿಡ್ ಆಗಿ ನೆಲಕ್ಕೆ ಬಿದ್ದು ಸಚಿನ್ ವಾಹನೆ ೨೭ ವರ್ಷ ಮೃತಪಟ್ಟಿರುತ್ತಾನೆ.
ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತವೆ.



