ಬೆಂಗಳೂರು: ಕಳೆದ ವರ್ಷ ಡಿಸೆಂಬರ್ ೧೫ರಂದು ತಬಲಾ ವಿದ್ವಾನ್ ಝಾಕಿರ್ ಹುಸೇನ್ ಇಹಲೋಕ ತ್ಯಜಿಸಿದಾಗ ಇಡೀ ಸಂಗೀತದ ವಿಶ್ವವೇ ಮೌನದಲ್ಲಿ ದುಃಖ ಪಟ್ಟಿತು. ಗಡಿಗಳನ್ನು ಸಂಗೀತ ಪ್ರಕಾರಗಳನ್ನು ಮೀರಿ ಬೆಳೆದ ಹುಸೇನ್ ಅವರ ಸಂಗೀತವು ಭಾರತೀಯ ಸಂಗೀತದಿಂದ ಪಾಶ್ಚಿಮಾತ್ಯ ಶಾಸ್ತ್ರಿಯ ಸಂಗೀತ, ರಾಕ್, ಪಾಪ್, ಜಾಝ್, ವರ್ಲ್ಡ್ ಮ್ಯೂಸಿಕ್ ಮತ್ತದರ ಆಚೆಗೂ ವಿಸ್ತರಿಸಿತ್ತು. ಅವರೊಂದಿಗೆ ಎನ್.ಸಿ.ಪಿ.ಎ. ಸಹಯೋಗವು ಐತಿಹಾಸಿಕವಾದುದು, ಅವರು ತಮ್ಮ ತಂದೆ ಉಸ್ತಾದ್ ಅಲ್ಲಾರಖಾ ಅವರೊಂ
ದಿಗೆ ೧೯೬೯ರಲ್ಲಿ ಈ ಕೇಂದ್ರ ಸ್ಥಾಪನಾ ದಿನದಂದು ಪ್ರದರ್ಶನ ನೀಡಿದ್ದರು.
ಅಲ್ಲಿಂದ ಮುಂದುವರಿದ ೫೫ ವರ್ಷಗಳ ಸಹಯೋಗವುಅವರ ಮಹೋನ್ನತ ಸಂಗೀತ ಕಾರ್ಯ ಕ್ರಮಗಳು ಮತ್ತು ಸಿಂಫೊನಿ ಆರ್ಕೆಸ್ಟ್ರಾ ಆಫ್ ಇಂಡಿಯಾ (ಎಸ್.ಒ.ಐ.)ದೊಂದಿಗೆ ಅವರ ಸಹಯೋಗಗಳೊಂದಿಗೆ ಮುಂದುವರಿಯಿತು. ಎನ್.ಸಿ.ಪಿ.ಎ ಕೌನ್ಸಿಲ್ ಸದಸ್ಯರಾಗಿ ಅವರು ಇದ್ದುದು ಎನ್.ಸಿ.ಪಿ.ಎ.ಗೆ ಕೂಡಾ ಗೌರವವಾಗಿದೆ.ಒಂದು ವರ್ಷದ ನಂತರ ಎನ್.ಸಿ.ಪಿ.ಎ.ಯು ೫೦ ರಾಯ ಮತ್ತು ಅಂತಾರಾಷ್ಟ್ರೀಯ ಕಲಾವಿದರು, ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ಎರಡು ದಿನಗಳ `ಮೆಸ್ಟ್ರೋಫರೆವರ್’ ಎಂಬ ಅವರಿಗೆ ನೀಡಲಾಗುವ ಎರಡು ದಿನಗಳ ಜಾಗತಿಕ ಗೌರವಕ್ಕೆ ಒಗ್ಗೂಡಿದ್ದಾರೆ.
ಜಾನ್ ಮೆಕ್ ಲೌಗ್ಲಿನ್, ಲೂಯಿ ಬ್ಯಾಂಕ್ಸ್, ಡೇವ್ ಹಾಲೆಂಡ್, ಗಣೇಶ್ ರಾಜಗೋಪಾಲನ್, ರಂಜಿತ್ ಬರೋಟ್, ವಿ. ಸೆಲ್ವಗಣೇಸ್, ಶಂಕರ್ ಮಹಾದೇವನ್, ಕ್ರಿಸ್ ಪಾಟರ್, ಸಂಜಯ್ ದಿವೇಚಾ, ಗಿನೊ ಬ್ಯಾಂಕ್ಸ್, ಅಜೊಯ್ ಚಕ್ರವರ್ತಿ, ಅಮ್ಜದ್ ಅಲಿ ಖಾನ್ ಮತ್ತು ರಾಕೇಶ್ ಚೌರಾಸಿಯಾ ಮುಂತಾದ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ.
ಈ ಎರಡು ದಿನಗಳ ಕಾರ್ಯಕ್ರಮವು ಡಿಸೆಂಬರ್ ೧೪ ಮತ್ತು ೧೫ರಂದು ಬೆಳಿಗ್ಗೆ ೯ರಿಂದ ಸಂಜೆ ೯ರವರೆಗೆ ನಡೆಯಲಿದ್ದು ಹಲವು ಎನ್.ಸಿ.ಪಿ.ಎ. ತಾಣಗಳಲ್ಲಿ ನಡೆಯಲಿದೆ ಮತ್ತು ಸಂಗೀತ ಮತ್ತು ಅವರು ಸ್ಫೂರ್ತಿ ತುಂಬಿದ ಅಸಂಖ್ಯ ಜೀವಗಳಿಗೆ ಸಾಕ್ಷಿಯಾಗಿ ನಿಲ್ಲಲಿದೆ.



