ಬೆಂಗಳೂರು: ರಾಜ್ಯದಲ್ಲಿರುವ ನಡೆಯುದಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಂಬಂಧ ಇಂದು ಮತದಾನ ನಡೆದಿದೆ. ಬೆಳಿಗ್ಗೆನಿಂದಲೇ ಮತದಾನ ಎರಡು ಕಡೆ ಚುರುಕಾಗಿ ನಡೆಯುತ್ತಿದೆ. ದಾವಣಗೆರೆ ಕ್ಷೇತ್ರದ ಹಲವೆಡೆ ಮತದಾನಕ್ಕಾಗಿ ಮತದಾರರು ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರೆ, ಕೆಲ ಕಡೆ ನೀರಸ ಮತದಾನ ನಡೆದಿದೆ.
ಇತ್ತ ಬಾಗಲಕೋಟೆ ಕ್ಷೇತ್ರದ ಹಲವೆಡೆ ಮತದಾನ ರಂಗೇರಿದ್ದು, ಕೆಲ ಕಡೆ ಮತಕೇಂದ್ರಗಳಲ್ಲಿ ಮತದಾರರ ಸಂಖ್ಯೆ ವಿರಳವಾಗಿತ್ತು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಅವರು ತಮ್ಮ ಸ್ವಗ್ರಾಮ ತಿಮ್ಮಲಾಪುರದಲ್ಲಿ ಮತ ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿ ಮಠ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಮತಗಟ್ಟೆ 166ಕ್ಕೆ ಬಂದು ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಮತದಾರರು ಬಂದು ತಮ್ಮ ಚಲಾಯಿಸುವಂತೆ ಮನವಿ ಮಾಡಿದರು. ಮೇಟಿಗೆ ನಿಮ್ಮ ಅಮೂಲ್ಯ ಮತ ನೀಡಿ ದಿವಂಗತ ಹೆಚ್.ವೈ ಮೇಟಿ ಅವರ ಬಾಗಲಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ನನಸಾಗಿಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ನಿಮ್ಮ ಅಮೂಲ್ಯ ಮತ ನೀಡಿ, ಸರ್ಕಾರಕ್ಕೆ ಶಕ್ತಿ ನೀಡಿ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಅಭಿವೃದ್ಧಿಯ ನಾಡಿಗಾಗಿ, ನಿಮ್ಮ ಮತ ಚಲಾಯಿಸಿ!
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣದ ಪ್ರತಿಯೊಂದು ಕುಟುಂಬಕ್ಕೆ ನನ್ನದೊಂದು ಮನವಿ, ಕ್ಷೇತ್ರದ ಸರ್ವತೋಮುಖ ಏಳಿಗೆಗಾಗಿ ಇಂದು ತಪ್ಪದೆ ಮತ ಚಲಾಯಿಸಿ. ನಿಮ್ಮ ಒಂದು ಮತ ಕೇವಲ ಗುರುತಲ್ಲ, ಅದು ಕ್ಷೇತ್ರದ ಸುಂದರ ಭವಿಷ್ಯವನ್ನು ರೂಪಿಸುವ ಶಕ್ತಿಶಾಲಿ ಅಸ್ತ್ರ.
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ಮತದಾನ ಚುರುಕು ಬಾಗಲಕೋಟೆ, ದಾವಣಗೆರೆಯಲ್ಲಿ ಸಾಲುಗಟ್ಟಿ ನಿಂತ ಮತದಾರರು



