ಅರೆಹಳ್ಳಿ: ಪಟ್ಟಣವು ದಿನದಿಂದ ದಿನಕ್ಕೆ ಅಭಿವೃದ್ದಿ ಪಥದಲ್ಲಿ ಸಾಗುತ್ತಿದ್ದಂತೆ ಪಂಚಾಯಿತಿ ವ್ಯಾಪ್ತಿಯ ಪ್ರತಿ ಮನೆಗಳ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಗ್ರಾಮ ಪಂಚಾಯಿತಿಯು ಪಟ್ಟಣದ ಹೊರವಲಯ ಹೆಗ್ಗಡಿಹಳ್ಳಿ ರಸ್ತೆಯಲ್ಲಿ ಕೆಲ ವರ್ಷಗಳ ಹಿಂದೆಯೇ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿಯನ್ನು ಆರಂಭಿಸಿತ್ತಾದರು ನಾನ ಕಾರಣಗಳಿಂದ ಅಂತಿಮ ಹಂತ ತಲುಪುವಲ್ಲಿ ವಿಳಂಬವಾಗಿದೆ.
ಇಂತವುಗಳ ನಡುವೆ ಪಟ್ಟಣದ ಬಹುತೇಕ ಮನೆಗಳಲ್ಲಿ ಶೇಖರಿಸಿಟ್ಟ ತ್ಯಾಜ್ಯವನ್ನು ವಾಹನಗಳ ಮೂಲಕ ಸಂಗ್ರಹಿಸಿ ನಿಗದಿಪಡಿಸಿದ ಸ್ಥಳದಲ್ಲಿ ಪಂಚಾಯಿತಿಯವರು ವಿಲೇವಾರಿ ಮಾಡುತ್ತಿದ್ದರು ಸಹ ಕೆಲ ಬು*ದ್ಧಿಜೀವಿಗಳು ಪಟ್ಟಣದ ಹೊರವಲಯ ಲಿಂಗಾಪುರ ಗ್ರಾಮ ವ್ಯಾಪ್ತಿಯ ಸ್ಮಶಾನದ ಹತ್ತಿರ ಸೇರಿದಂತೆ ಇನ್ನಿತರ ವಿವಿದ ರಸ್ತೆಯ ಬದಿಗಳಲ್ಲಿ ತ್ಯಾಜ್ಯವನ್ನು ಬಿಸಾಡುತ್ತ ರಾಶಿ ಗುಡ್ಡೆಯಾಗುತ್ತಿರುವುದನ್ನು ಕಂಡು ಪ್ರಜ್ಞಾವಂತ ಸಾರ್ವಜನಿಕರು ಅವರ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ.
ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯಿತಿಯು ಪಟ್ಟಣದ ಸುಚಿತ್ವಕ್ಕೆ ಮಹತ್ವ ನೀಡುವ ಉದ್ದೇಶದಿಂದ ಈ ಹಿಂದೆ ಪ್ರತಿ ಮನೆಗಳಿಗೆ ತ್ಯಾಜ್ಯಗಳನ್ನು ಸಂಗ್ರಹ ಮಾಡಲು ಬಕೆಟ್ ಗಳನ್ನೂ ವಿತರಿಸಿ ಪಟ್ಟಣದಲ್ಲಿ ಪ್ರತಿನಿತ್ಯ ಹಾಗೂ ಹೊರ ವಲಯ ಗ್ರಾಮಗಳಲ್ಲಿ ವಾರಕ್ಕೆ ಎರಡು ಬಾರಿ ವಾಹನಗಳ ಮೂಲಕ ತ್ಯಾಜ್ಯವನ್ನು ಸಂಗ್ರಹಿಸಿ ಪಟ್ಟಣದ ಹೊರವಲಯ ನಿಗದಿಪಡಿಸಿದ ಸ್ಥಳದಲ್ಲಿ ವಿಲೇವಾರಿ ಮಾಡುತ್ತಿದ್ದಾದರು ಸಹಾ ಕೆಲವರು ರಸ್ತೆಯ ಬದಿಗಳಲ್ಲಿ ತಂದು ಬಿಸಾಡುತ್ತಿರುವುದು ಪಟ್ಟಣದ ಅಸುಚಿತ್ವಕ್ಕೆ ಕಾರಣವಾಗುತ್ತಿದೆ.
ಅಲ್ಲದೆ ರಸ್ತೆಯ ಬದಿಯಲ್ಲಿ ಇರುವ ತ್ಯಾಜ್ಯದ ರಾಸಿ ಗುಡ್ಡಗಳನ್ನು ಹಲವು ಬಾರಿ ಪಂಚಾಯಿತಿಯವರು ವಿಲೇವಾರಿ ಮಾಡಿ ಸೂಚನಾ ಪಲಕಗಳನ್ನು ಅಳವಡಿಸಿದ್ದಾದರು ಸಹಾ ಪುನರಾವರ್ತನೆ ಆಗುತ್ತಿರುವುದಕ್ಕೆ ನಿತ್ಯ ಸಂಚರಿಸುವ ನೂರಾರು ವಾಹನ ಸವಾರರ ಹಾಗೂ ಸಾರ್ವಜನಿಕರ ಅಸಮದಾನಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಈ ತಕ್ಷಣವೇ ಸಂಬAಧ ಪಟ್ಟ ಅಧಿಕಾರಿಗಳು ಕಡಿವಾಣ ಹಾಕಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಟ್ಟಣದ ವಿವಿದೆಡೆ ದೊಡ್ಡ ಮಟ್ಟದ ಹಲವಾರು ತ್ಯಾಜ್ಯದ ತಾಣ ಆಗುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.