LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ವಿಸ್ತರಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಹೆಚ್.ವಿ.ಹನುಮಂತುರಿಗೆ ಬೀಳ್ಕೊಡುಗೆ

ಮುಳಬಾಗಿಲು: ಜನರ ಸೇವೆಯೇ ಜನಾರ್ದನ ಸೇವೆ ಎಂಬಂತೆ ಹನುಮಂತು ಅವರು ತಮ್ಮ ಸೇವೆಯನ್ನು ಸಲ್ಲಿಸಿ ಸರ್ಕಾರಿ ವೃತ್ತಿಯಿಂದ ನಿವೃತ್ತಿ ಆಗುತ್ತಿರುವುದು ಅಪಾರ ನಷ್ಟವನ್ನು ಉಂಟು ಮಾಡಿದೆ. ಆದರೂ ಸಹ ನಿವೃತ್ತಿ ಎಂಬುವುದು ಇಲ್ಲಿ ಕಡ್ಡಾಯವಾಗಿದೆ. ಆದ್ದರಿಂದ ಅವರ ಮುಂದಿನ ಜೀವನ ಉತ್ತಮವಾಗಿರಲಿ ಎಂದು ರೇಷ್ಮೆ ಇಲಾಖೆಯ ಉಪನಿರ್ದೇಶಕ ಎಸ್.ಎನ್.ಶ್ರೀನಿವಾಸ್ ಹೇಳಿದರು.

ತಾಲೂಕಿನ ಕಾಂತರಾಜ ಸರ್ಕಲ್ ಬಳಿ ಇರುವ ರೇಷ್ಮೆ ಇಲಾಖೆ ಕಚೇರಿಯ ಆವರಣದಲ್ಲಿ ವಿಸ್ತರಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಹೆಚ್.ವಿ.ಹನುಮಂತು ಅವರ ನಿವೃತ್ತಿ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜನರ ಸೇವೆ ಮಾಡುವ ಕೆಲಸ ಸಿಗುವುದು ತುಂಬಾ ವಿರಳ ಅದರಲ್ಲೂ ಜನರ ಅಭಿಪ್ರಾಯವನ್ನು ಗಳಿಸುವುದು ಸುಲಭ ಅಲ್ಲ ಎಂದರು.

ಮರಳಿ ರೇಷ್ಮೆ ಬೆಳೆಯಿರಿ: ಸರ್ಕಾರದ ವತಿಯಿಂದ ರೇಷ್ಮೆ ಬೆಳೆಗಾರರಿಗೆ ಉತ್ತಮವಾದ ಅನುದಾನ, ಯೋಜನೆ ಹಾಗೂ ಸೌಲಭ್ಯಗಳು ದೊರೆಯುತ್ತಿದೆ. ಆದ್ದರಿಂದ ರೇಷ್ಮೆ ಬಿಟ್ಟು ಇತರೆ ವ್ಯವಸಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೈತರು ಮರಳಿ ರೇಷ್ಮೆಯನ್ನು ಬೆಳೆಯಲು ಮುಂದಾದರೆ ಆರ್ಥಿಕವಾಗಿ ಸದೃಢವಾಗಬಹುದು ಎಂದರು.

ರೇಷ್ಮೆ ಮೊಟ್ಟೆ ಚಾಕಿ ಕಟ್ಟಿಕೊಳ್ಳಲು ಒಂದು ಸಾವಿರ, ಬಿಳಿ ಗೂಡಿಗೆ ತಲಾ ಒಂದು ಕೆಜಿಗೆ 30 ರೂಪಾಯಿ  ಪ್ರೋತ್ಸಾಹ ಧನ ಹಾಗೂ ಮನೆ ನಿರ್ಮಾಣಕ್ಕೆ 5 ಲಕ್ಷ ಸೇರಿದಂತೆ ವಿವಿಧ ಬಗೆಯ ಅನುದಾನಗಳು ನೇರವಾಗಿ ರೈತರಿಗೆ ತಲುಪುತ್ತವೆ. ಆದ ಕಾರಣದಿಂದ ಹೆಚ್ಚಿನದಾಗಿ ರೈತರು ರೇಷ್ಮೆ ಬೆಳೆಯನ್ನು ಬೆಳೆಯಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಭಾವುಕರಾದ ರೈತರು: ಮುಳಬಾಗಿಲು ತಾಲ್ಲೂಕಿನಲ್ಲಿ ಸುಮಾರು 37 ವರ್ಷಗಳ ಕಾಲ ಹನುಮಂತು ಅವರ ಸೇವೆ ತುಂಬಾ ಅವಿಸ್ಮರಣೀಯ ಎಂದು ಸಾಕಷ್ಟು ಮಂದಿ ರೇಷ್ಮೆ ಬೆಳೆಗಾರರು ಭಾವುಕ ನುಡಿಗಳನ್ನು ನುಡಿದರು.ಹನುಮಂತು ಅವರಿಗೆ 500 ರೂಗಳು ವೇತನದಿಂದ ನಾವು ನೋಡಿದ್ದೇವೆ. ಅವರ ಸ್ವಭಾವ ತುಂಬಾ ಮೃದು. ರೇಷ್ಮೆ ಹುಳು ಹಾಗೂ ತೋಟಕ್ಕೆ ಇತರೆ ಯಾವುದೇ ರಾಸಾಯನಿಕ ವಸ್ತುಗಳು ಕೊಂಡುಕೊಳ್ಳಲು ನಮ್ಮ ಬಳಿ ಹಣ ಇಲ್ಲದಿದ್ದಾಗ ಹನುಮಂತು ಅವರು ನೀಡುತ್ತಿದ್ದರು. ಈ ಹಣವನ್ನು ತಿಂಗಳುಗಳ ನಂತರ ನಾವು ಹಿಂತುರಿಗಿಸುತ್ತಿದ್ದೇವು.

ಇಂತಹ ನಂಟನ್ನು ಹೊಂದಿದ ವ್ಯಕ್ತಿ ಈ ದಿನ ನಿವೃತ್ತಿ ಹೊಂದ್ದುತ್ತಿದ್ದಾರೆ. ಇಂತಹ ಜನಪರ ಕಾಳಜಿ ಹೊಂದಿರುವ ವ್ಯಕ್ತಿಗೆ ದೇವರು ಒಳ್ಳೆಯ ಆರೋಗ್ಯ ನೀಡಲೆಂದು ರೇಷ್ಮೆ ಬೆಳೆ ರೈತರು ಶುಭ ಆರೈಸಿದರು.ಕೇಂದ್ರ ರೇಷ್ಮೆ ವಿಜ್ಞಾನಿ ನರೇಂದ್ರ ಕುಮಾರ್ ಅವರು ದ್ವಿತಳಿ ರೇಷ್ಮೆ, ರೋಗ ನಿವಾರಣೆ, ಮುನ್ನೆಚ್ಚರಿಕೆಯ ಕ್ರಮಗಳು, ಹಿಪ್ಪನೇರಳೆ ಸೊಪ್ಪು ನಾಟಿ ಮಾಡುವ ವಿಧಾನ, ಕಟಾವು, ಅಂತರದ ಬಗ್ಗೆ ರೈತರಿಗೆ ಅರಿವು ಮೂಡಿಸಿದರು.

ನಿವೃತ್ತಿ ಹೊಂದಿದ ರೇಷ್ಮೆ ವಿಸ್ತರಣಾಧಿಕಾರಿ ಹೆಚ್.ವಿ.ಹನುಮಂತು ಅವರಿಗೆ ತಾಲ್ಲೂಕು ರೇಷ್ಮೆ ಇಲಾಖೆ ಸೇರಿದಂತೆ ರೇಷ್ಮೆ ಉತ್ಪಾದಕರ ಸಂಘ ಮತ್ತು ರೈತರಿಂದ ವಿಶೇಷವಾಗಿ ಸನ್ಮಾನ ಮಾಡಲಾಯಿತು.ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರ ಬಿ.ಸಿ.ವೆಂಕಟೇಶಪ್ಪ, ನಿವೃತ್ತ ಅಧಿಕಾರಿ ವೆಂಕಟೇಶಪ್ಪ, ನಿವೃತ್ತಿ ನಿರೀಕ್ಷಕ ಸುಭಾಶ್ ಗಣಪತಿ, ರೇಷ್ಮೆ ಉತ್ಪಾದನೆ ಸಂಘದ ಜಿಲ್ಲಾಧ್ಯಕ್ಷ ಟಿ.ಶಿವಣ್ಣ, ಉಪಾಧ್ಯಕ್ಷ ರವಿಕುಮಾರ್, ರೇಷ್ಮೆ ನಿರೀಕ್ಷಕ ಬಿ.ಜಿ.ಕಾರ್ತಿಕ್, ವಿಸ್ತರಣಾ ಕಾರ್ಯಕರ್ತರಾದ ಎನ್.ಜಾನಕಿರಾಮ್, ಬಿ.ಚಂದ್ರಶೇಖರ್, ರೈತರಾದ ರೇವಣ್ಣ, ಆಂಜಪ್ಪಶೆಟ್ಟಿ, ಕೆ.ಮುರಳಿ, ನಾರಾಯಣ ಸ್ವಾಮಿ ಮತ್ತಿತರರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು