LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಹೆಚ್.ಎಂ.ರೇವಣ್ಣ ಅವರಿಂದ ಪ್ರತಿಷ್ಠಾಪನೆ: ದೇವಿಗೆ ಮಡಲಕ್ಕಿ ಸೇವೆ

ಮಾಗಡಿ: ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ ಅವರು ಈ ಹಿಂದೆ 1993:94 ನೇ ಸಾಲಿನಲ್ಲಿ ಕೊಟ್ಟ ಮಾತಿನಂತೆ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಸಚಿವ ಸಂಪುಟದಲ್ಲಿ ನಾಲ್ಕು ಖಾತೆ ಸಚಿವರಾಗಿದ್ದ ಸಂದರ್ಭದಲ್ಲಿ ಹೊಸಪೇಟೆಯ ಶ್ರೀ ಬಿಸಿಲು ಮಾರಮ್ಮ ದೇವಾಲಯದ ಪ್ರತಿಷ್ಢಾಪನೆ ಮಾಡಲು ಸಂಪೂರ್ಣ ಸಹಕಾರ ನೀಡಿದ್ದರು.ಇಂದು ದೇವಿಗೆ ಹೊಸಪೇಟೆ ಗ್ರಾಮಸ್ಥರು ಸೇರಿದಂತೆ ಪಟ್ಟಣದಾದ್ಯಂತ ಸುಮಾರು 1200 ಕುಟುಂಬಗಳು ಪ್ರತಿ ಮನೆ ಮನೆಯಲ್ಲಿಯೂ ಮಾರಮ್ಮ ದೇವಿಗೆ ಮಡಲಕ್ಕಿ ತುಂಬಿಸಿ ಸೇವೆ ಸಲ್ಲಿಸುವ ಮೂಲಕ ಬಿಸಿಲಿ ದೇವಿಯ ಭಕ್ತಿಯ ಕೃಪೆಗೆ ಪಾತ್ರರಾಗಿದ್ದಾರೆ.

ಬಿಸಿಲು ಮಾರಮ್ಮ ದೇವಿಯು ಭಕ್ತರ ಸಮಸ್ತ ಇಷ್ಟಾರ್ಥಗಳನ್ನು ಈಡೇರಿಸುವ ದೇವತೆಯಾಗಿದ್ದು ತಮ್ಮ ಇಷ್ಢಾರ್ಥಗಳನ್ನು ಬಗೆಹರಿಸುವ ಶಕ್ತಿ ದೇವತೆ ಎಂಬುದು ಈ ಭಾಗದ ಭಕ್ತರ ಪರಮ ನಂಬಿಕೆಯಾಗಿದೆ.ದೇವಿಗೆ ಶನಿವಾರದಿಂದ ಪ್ರಾರಂಭವಾಗುವ ಈ ವಿಶೇಷ ಪೂಜೆಯು ಭಾನುವಾರ ವಿಶೇಷ ಪೂಜೆ,ಸೋಮವಾರ ಹೊಸಪೇಟೆ ಗ್ರಾಮದ ಪ್ರತಿ ಮನೆಯಲ್ಲಿಯೂ ಸ್ಪರ್ದಾತ್ಮಕವಾಗಿ ಆರತಿ ಸಲ್ಲಿಸುವ ವಾಡಿಕೆ ಕಾಲಾಂತರದಿಂದ ನಡೆದುಕೊಂಡು ಬಂದಿದೆ.

ಮಂಗಳವಾರ ಗ್ರಾಮಸ್ಥರ ನೆಂಟರಿಷ್ಟರು ಬಂಧು ಬಳಗದವರಿಗೆ ಬಾಡೂಡಕ್ಕೆ ಆಹ್ವಾನಿಸಿ ತಮ್ಮ ಶಕ್ತಾನುಸಾರವಾಗಿ ಊಟ ಉಣ ಬಡಿಸುವ ಸಾಂಪ್ರದಾಯಿಕವಾಗಿದೆ.ಹೊಸಪೇಟೆ ಗ್ರಾಮಸ್ಥರ ಮನವಿಯಂತೆ ಈ ಸಂದರ್ಭದಲ್ಲಿ ಮಾರಮ್ಮ ದೇವಿಯ ನೆಲೆಗುಡಿ ನಿರ್ಮಿಸಿಕೊಟ್ಟಿರುವ ಹೆಚ್.ಎಂ.ರೇವಣ್ಣರವರಿಗೆ ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸಿದ್ದಾರೆ.ಪುರಸಭಾ ಸದಸ್ಯರಾದ ಹೊಸಪೇಟೆ ಅಶ್ವಥ್, ಆಶಾಪ್ರವೀಣ್, ಅರ್ಚಕ ರುದ್ರೇಶ್, ನಾರಾಯಣಪ್ಪ,ಯಜಮಾನ್ ಸುರೇಶ್, ಕಾರ್ಪೆಂಟರ್ ಮುನಿರಾಜು, ಭೂ ಬ್ಯಾಂಕ್ ಮಾಜಿ ನಿರ್ದೇಶಕ ಗೋಪಾಲ್, ಕಾರುನರಸಿಂಹಣ್ಣ, ಗುರುಸಿದ್ದಪ್ಪ, ಪಾಟೀಲ್ ರಂಗನಾಥ್, ಶಿವಲಿಂಗಯ್ಯ,ನೇತ್ರವತಿ ಮತ್ತಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು