LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ನಾಳೆ ಚಳ್ಳಕೆರೆಯ ಪ್ರಸಿದ್ಧ ಶ್ರೀ ವೀರಭದ್ರಸ್ವಾಮಿ ರಥೋತ್ಸವ

ಚಳ್ಳಕೆರೆ: ಚಳ್ಳಕೆರೆ ನಗರದ ಆರಾಧ್ಯ ದೈವ ಶ್ರೀ ವೀರ ಭದ್ರಸ್ವಾಮಿ ರಥೋ ತ್ಸವ ನಾಳೆ ನಡೆಯಲಿದೆ.ಮೇ18 ರಿಂದ ವೀರಭದ್ರ ಸ್ವಾಮಿಯ ಕಂಕಣ ಧಾರಣೆಯೊಂದಿ ಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಂಭ ವಾಗುವ ಜಾತ್ರೆಯು, 21ರಂದು ಸ್ವಾಮಿಯ ಅಗ್ನಿಕುಂಡ ಮಹೋತ್ಸ ವ, ಮೇ 22ಕ್ಕೆ ದೊಡ್ಡ ರಥೋತ್ಸವ ನಡೆಸಲಾಗುವುದು.

23ಕ್ಕೆ ಕಡುಬಿನ ಕಾಳಗ,ಹಾಗೂ 24ಕ್ಕೆ ಓಕಳಿ ಮಹೋತ್ಸವ, 25ಕ್ಕೆ ಕಂಕಣ ವಿಸರ್ಜನೆ ಕಾರ್ಯ ಕ್ರಮ ದೊಂದಿಗೆ, ಜಾತ್ರೆ ಮುಕ್ತಾಯವಾಗುವುದು.
ಈ ಜಾತ್ರೆಯು ಚಳ್ಳಕೆರೆ ಹಾಗೂ ಆಂಧ್ರ ಗಡಿಭಾಗದ ಮಡಕಸೀರಾ,ಪೆನುಗೊಂಡ,ಕಲ್ಯಾಣದುರ್ಗ,ರಾಯದುರ್ಗ ದಿಂದ ಸಾವಿರಾರು ಭಕ್ತರು ಭಾಗವಹಿಸಿ. ಸ್ವಾಮಿಯ ಕೃಪೆಗೆ ಪಾತ್ರರಾಗುವರು.

ಚಳ್ಳಕೆರೆಯ ಶ್ರೀ ವೀರಭದ್ರಸ್ವಾಮಿಗೆ ನೂರಾರು ವರ್ಷ ಗಳ ಇತಿಹಾಸವನ್ನು ನಾವು ನೋಡಿದಾಗ. ಈ ಸ್ವಾಮಿ ಯ ಮೂಲ ಪಾವಗಡ ಆಂಧ್ರ ಗಡಿಭಾಗದ, ನಾಗಲಮ ಡಿಕೆ ಗ್ರಾಮದಿಂದ ಬಂದು ಇಲ್ಲಿ ನೆಲೆಯಾಗಿದೆ ಎಂದು ಇಲ್ಲಿನ ದಾಖಲೆಗಳು ಹೇಳುತ್ತವೆ.ನಾಗಲಮಡಿಕೆ ಗ್ರಾಮದಲ್ಲಿ ಆರಾಧಿ ಸಲ್ಪಡುತ್ತಿದ್ದ.ಶ್ರೀ ವೀರಭದ್ರಸ್ವಾಮಿ.ಆ ಗ್ರಾಮದಲ್ಲಿ ತೀವ್ರ ಬರಗಾಲ ಬಂದ ಹಿನ್ನೆಲೆಯಲ್ಲಿ ಊರಿನ ಜನರು, ಅನ್ನ,ನೀರು ಆರಿಸಿ. ಕೂರನ್ನು ಬಿಟ್ಟು. ಗುಳೆಎದ್ದು ಬರುವಾಗ, ಮಾರ್ಗ ಮಧ್ಯದಲ್ಲಿ ಸಿಕ್ಕ, ಚಳ್ಳಕೆರೆ ಗ್ರಾಮದಲ್ಲಿ ಆ ರಾತ್ರಿ ಕಳೆಯಲು ವಾಸ್ತವ್ಯ ಹೂಡಿದರು.

ಬೆಳಗ್ಗೆ ಎದ್ದು, ಈ ಊರಿನಿಂದ ಮತ್ತೊಂದು ಊರಿಗೆ ಹೊರಡಲು ಜನರು ಸಿದ್ಧತೆ ನಡೆಸಿದಾಗ. ವೀರಭದ್ರಸ್ವಾ ಮಿ ವಿಗ್ರಹವನ್ನು ಇರಿಸಿದ ಬಂಡಿಯ ಎತ್ತುಗಳು ಮುಂದೆ ಸಾಗದೆ. ಕದಲದೇ ನಿಂತಿದ್ದವು. ಎಷ್ಟು ಪ್ರಯ ತ್ನಿಸಿದರು. ಕದಲದ ಸ್ವಾಮಿಯ ಬಂಡಿ, ಇದನ್ನು ನೋಡಿ ಕಂಗಾಲಾದ, ನಾಗಲಮಡಿಕೆ ಗ್ರಾಮಸ್ಥರು, ಚಿಂತೆಗೀಡಾ ದಾಗ. ಅಲ್ಲಿಗೆ ಬಂದ ಸಿದ್ದಪುರುಷರು, ನಾಗಲಮಡಿಕೆ ಹಾಗೂ ಚಳ್ಳಕೆರೆ ಗ್ರಾಮದ ಜನರನ್ನು ಉದ್ದೇಶಿಸಿ ಮಾತ ನಾಡಿ.ನೀವು ಎಷ್ಟೇ ಪ್ರಯತ್ನ ಪಟ್ಟರು.ಸ್ವಾಮಿಯು ಇಲ್ಲಿಂದ ಕದಲುವುದಿಲ್ಲ.

ಇಲ್ಲಿಯ ನೆಲೆಸಲು, ಸ್ವಾಮಿಯ ಸಂಕಲ್ಪವಾಗಿದೆ. ಆದ್ದ ರಿಂದ ಶ್ರೀ ವೀರಭದ್ರ ಸ್ವಾಮಿಯನ್ನು ಇಲ್ಲಿಯೇ ಸ್ಥಾಪಿಸಿ. ವರ್ಷಕ್ಕೊಮ್ಮೆ ಸ್ವಾಮಿಗೆ ಜಾತ್ರೆಯ ನಡೆಯಲಿ. ರಥೋ ತ್ಸವ ಪ್ರಾರಂಭವಾಗುವ ಮುನ್ನ,ನಾಗಲ ಮಡಿಕೆ ಗ್ರಾಮ ದವರು ಬಂದಮೇಲೆ ಜಾತ್ರೆ ನಡೆಯಬೇಕು ಎಂದು ಹೇಳಿದರು.ಸಿದ್ದಪುರುಷರು ಹೇಳಿದ ಸಂಪ್ರದಾಯದಂತೆ ಊರಿನ ಆಯಗಾರರು,ಊರಿನ ಮುಖಂಡರು, ದೇವಾಲಯ ಧರ್ಮದರ್ಶಿ ಸಮಿತಿ,ದೊಣ್ಣೆ ಅಯ್ಯನೊರು,ಸೇರಿ ಪ್ರತಿ ವರ್ಷವೂ ಜಾತ್ರೆ ನೆಡೆಸುವರು.

ರಥೋತ್ಸವದ ವೇಳೆ ಒಬ್ಬರಾದರು, ನಾಗಲಮಡಿಕೆ ಗ್ರಾಮದ ವ್ಯಕ್ತಿ ಬಂದಿರು ತ್ತಾನೆ ಎಂದು, ಪ್ರತಿತಿಯಿದೆ.ಇಲ್ಲಿ ಇಂದು ಮುಸ್ಲಿಂ ಭಾವೈಕ್ಯತೆ ಪ್ರತೀತಿಯಾಗಿ. ಮುಸ್ಲಿಂ ತಹಸೀಲ್ದಾ ರೊಬ್ಬರು ತಮಗೆ ಮಕ್ಕಳ ಭಾಗ್ಯ ವಿಲ್ಲದಿದ್ದ ಸಂದರ್ಭದಲ್ಲಿ, ಇಲ್ಲಿನ ಸ್ಥಳೀ ಯರ ಸಲಹೆ ಯಂತೆ. ಶ್ರೀ ವೀರಭದ್ರ ದೇವರಿಗೆ ಮಕ್ಕಳು ಆಗಲೆಂದು ಹರಕೆ ಮಾಡಿಕೊಂಡಾಗ.ಅವರಿಗೆ ಗಂಡು ಮಗು ಜನಿಸಿ ದಾಗ ಸಂತಸಗೊಂಡ ತಹಶೀಲ್ದಾರ್ ರವರು ಸೂರಿಲ್ಲದೆ ಬೈಲಿನಲ್ಲಿದ್ದ.ಶ್ರೀ ವೀರಭದ್ರಸ್ವಾಮಿಗೆ ಗರ್ಭಗುಡಿಯ ನ್ನು ನಿರ್ಮಾಣ ಮಾಡಿಸಿದನು ಎಂದು ಹೇಳುತ್ತಾರೆ.

ಜಿಲ್ಲೆಯಲ್ಲಿ ಶ್ರೀ ವೀರಭಧ್ರಸ್ವಾಮಿ ದೇವಾಲಯಗಳಲ್ಲಿ ಯೇ ಅತ್ಯಂತ ದೊಡ್ಡ ರಾಜ ಗೋಪುರ ಹೊಂದಿರುವ. ದೊಡ್ಡ ದೇವಾಲಯ ಚಳ್ಳಕೆರೆ ದೇವಾಲಯವಾಗಿದೆ. ರಾಜ ಗೋಪುರ ಸುಮಾರು 40 ಅಡಿ ಎತ್ತರವಿದ್ದು. ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿದೆ. ಹೇ ಗೋಪುರ ದಲ್ಲಿ, ವೀರಭದ್ರ,ಕೇಶವ ನರಸಿಂಹ,ಅಚ್ಚುತ,ಕಮಲಜ, ಶಿವ ಪಾರ್ವತಿ, ಪೂರ್ವದಲ್ಲಿ ಗಜರೂಢಇಂದ್ರ,ಪುರಂದ ರ,ರಾಮ,ಸೀತೆ,ವಾಲಿ,ಸುಗ್ರೀವ,ಸುಬ್ರಮಣ್ಯ,ಗೋಪುರದ ತುದಿಯಲ್ಲಿ ಗುಹ, ಆರ್ಯ, ಕಾತ್ಯಾ ಯನಿ,ವಿಷ್ಣು, ಅಶ್ವಿನಿ ದೇವತೆಗಳು ಇದ್ದು. ಈ ರಾಜಗೋಪುರದಲ್ಲಿ ಸುಮಾರು 300ಕ್ಕು ಹೆಚ್ಚು ಬಣ್ಣ ಬಣ್ಣದ ಹುಬ್ಬ ಶಿಲ್ಪಗಳಿವೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು