ತಿ.ನರಸೀಪುರ: ಯುವಕನ ಕಿರುಕುಳಕ್ಕೆ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿನ್ನೆಲೆಯಲ್ಲಿ ವರುಣ ವಿಧಾನಸಭಾ ಕ್ಷೇತ್ರದ ತಾಲ್ಲೂಕಿನ ಕೆಂಪಯ್ಯನಹುಂಡಿ ಗ್ರಾಮಕ್ಕೆ ಭಾನುವಾರ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಮೃತ ಶಿವಣ್ಣನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಕುಟುಂಬಕ್ಕೆ 5 ಲಕ್ಷ ರೂಗಳ ವೈಯುಕ್ತಿಕ ಸಹಾಯ ಧನದ ಚೆಕ್ ಅನ್ನು ವಿತರಿಸಿದರು.ಕೆಂಪಯ್ಯನಹುಂಡಿ ಗ್ರಾಮಕ್ಕೆ ಶಿವಣ್ಣ ಅವರ ನಿವೇಶದಲ್ಲಿ ತಾಯಿ ಹಾಗೂ ಮಗಳಿಗೆ ಧೈರ್ಯ ತುಂಬಿದ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಕರಣವನ್ನು ಸಮಗ್ರ ತನಿಖೆ ನಡೆಸಿ, ಆರೋಪಿಗೆ ಕಾನೂನಿನಡಿ ಶಿಕ್ಷೆಯನ್ನು ಕೊಡಿಸಬೇಕು. ನಿವೇಶನದ ದಾಖಲೆಗಳನ್ನು ಮಾಡಿಕೊಡಬೇಕೆಂದು ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಧು ಮಗಳು ಹಾಗೂ ಪತ್ನಿಯೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಶಿವಣ್ಣ ಅವರ ಕುಟುಂಬದ ದುರಂತ ರಾಜ್ಯ ಮಟ್ಟದ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಕ್ಕೆ ಬೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದ ಕೇಂದ್ರ ಸಚಿವರು ಘಟನೆಯ ಬಗ್ಗೆ ಸ್ಥಳೀಯ ಮುಖಂಡ ಆರ್ ಬಸವರಾಜು ಅವರಿಂದ ಮಾಹಿತಿ ಪಡೆದು 5 ಲಕ್ಷ ರೂಗಳ ಚೆಕ್ಕನ್ನು ನೀಡಿದರು. ಮೃತ ಶಿವಣ್ಣನ ಹಿರಿಯ ಪುತ್ರಿಗೆ ಕೆಲಸ ಕೊಡಿಸುವ ಭರವಸೆಯನ್ನೂ ನೀಡಿದರು.ಮಾಜಿ ಸಚಿವ ಸಾ.ರಾ.ಮಹೇಶ್, ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ ಮಾಜಿ ಶಾಸಕ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಅಶ್ವಿನ್ ಕುಮಾರ್, ಮಾಜಿ ಶಾಸಕ ಕೆ.ಮಹದೇವ್, ಕೊಳ್ಳೇಗಾಲ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಬಿ.ಪುಟ್ಟಸ್ವಾಮಿ, ವರುಣ ಕ್ಷೇತ್ರದ ಆಕಾಂಕ್ಷಿ ಅಭಿಷೇಕ್ ಮಣಿಗಾರ್, ಕೆಂಪಯ್ಯನಹುAಡಿ ಬಾಲಕೃಷ್ಣ, ಉಪ್ಪಾರ ಸಮುದಾಯದ ಮುಖಂಡ ಹೊಸ ಕೆಂಪಯ್ಯನಹುಂಡಿ ಆರ್.ಬಸವರಾಜು, ಎಂ.ಶಿವಪ್ರಸಾದ್, ಚೆನ್ನೇಗೌಡ, ಗುತ್ತಿಗೆದಾರ ಶ್ರೀ ರಂಗರಾಜಪುರ ಎಂ. ಸಿದ್ದರಾಜು, ಮರಿದೇವೇಗೌಡ ಹಾಗೂ ಇನ್ನಿತರರು ಇದ್ದರು.
ಎಚ್ಡಿಕೆಯಿಂದ ಸಾಂತ್ವನ, ನೆರವು



