ತಿ. ನರಸೀಪುರ: ಡಾ.ಹೆಚ್. ಸಿ.ಮಹದೇವಪ್ಪ ರವರಿಗೆ ಉಪಮುಖ್ಯಮಂತ್ರಿ ಮತ್ತು ಉನ್ನತ ಸಚಿವ ಸ್ಥಾನವನ್ನು ನೀಡಬೇಕೆಂದು ಒತ್ತಾಯಿಸಿ ದಿನಾಂಕ 1- 6-2026 ಇಂದು ಮೈಸೂರಿನ ಟೌನ್ ಹಾಲ್ನ ಬಳಿ ಇರುವ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಮಾಜಿ ತಾಪಂ ಸದಸ್ಯ ಕುಕ್ಕೂರು ಗಣೇಶ್ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಎಚ್ಸಿ ಮಹದೇವಪ್ಪ ರವರ ಅಭಿಮಾನಿಗಳ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ನಿಯೋಜಿತ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರು ದಿನಾಂಕ 03-06-2026 ರಂದು ಮುಖ್ಯಮಂತ್ರಿಯಾಗಿ ಪದಗ್ರಹಣ ಸ್ವೀಕರಿಸುವ, ವೇದಿಕೆಯಲ್ಲಿ ರಾಜ್ಯದ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಡಾ.ಹೆಚ್.ಸಿ ಮಹದೇವಪ್ಪ ರವರಿಗೆ. ಉಪಮುಖ್ಯಮಂತ್ರಿ ಹಾಗೂ ಉನ್ನತ ಸಚಿವ ಸ್ಥಾನವನ್ನು ನೀಡಿ ಪ್ರಮಾಣ ವಚನ ಸ್ವೀಕಾರ ಮಾಡಲು ಅವಕಾಶ ಮಾಡಿಕೊಡಬೇಕೆಂದರು.
ಟಿ ನರಸೀಪುರ ವಿಧಾನಸಭಾ ಕ್ಷೇತ್ರ ಹಾಗೂ ಮೈಸೂರು ಜಿಲ್ಲೆಯ ಡಾ.ಹೆಚ್. ಸಿ.ಮಹದೇವಪ್ಪನವರ ಅಭಿಮಾನಿಗಳು ಹಾಗೂ ಕಾರ್ಯಕರ್ತರ ವತಿಯಿಂದ ಮೈಸೂರು ಟೌನ್ ಹಾಲ್ ಬಳಿ ಇಂದು11:30ಕ್ಕೆ ಬಾರಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಸಚಿವ ಹೆಚ್.ಸಿ ಮಹ ದೇವಪ್ಪ ರವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಾಗಿದ್ದು. ಪಕ್ಷದ ಸಂಘಟನೆಗೆ ಸಿದ್ದರಾಮಯ್ಯನವರ ಜೊತೆಗೂಡಿ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಕಟ್ಟಲು ಶ್ರಮಿಸಿದ್ದಾರೆ ಆದ್ದರಿಂದ ಇವರಿಗೆ ಮೊದಲನೇ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹಾಗೂ ಉನ್ನತ ಸಚಿವ ಸ್ಥಾನವನ್ನು ನೀಡಬೇಕೆಂದು ಒತ್ತಾಯಿಸಿದರು.
ಸಾಮಾಜಿಕ ನ್ಯಾಯದ ಹರಿಕಾರರಾದ ಸಿದ್ದರಾಮಯ್ಯನವರು ಮಹದೇವಪ್ಪನವರಿಗೆ ಸಚಿವ ಸ್ಥಾನವನ್ನು ನೀಡುವಂತೆ ಹೈಕಮಾಂಡ್ ಗೆ ಒತ್ತಡ ಹಾಕಿ ಉನ್ನತ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಬೇಕು ಎಂದರು .
ಒಂದು ವೇಳೆ ಇವರಿಗೆ ಸಚಿವ ಸ್ಥಾನ ಕೈ ತಪ್ಪಿದಲ್ಲಿ ಮುಂದಿನ ಚುನಾವಣೆಗಳಲ್ಲಿ ಪಕ್ಷಕ್ಕೆ ಬಾರಿ ಹಿನ್ನಡೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಕಾಂಗ್ರೆಸ್ ಮುಖಂಡ ಸೋಸಲೆ ಪರಶಿವಮೂರ್ತಿ, ಮಾತನಾಡಿದರು. ಈ ಸಂದರ್ಭ ಸೋಸಲೆ ಮಹದೇವಸ್ವಾಮಿ, ಜಿಲ್ಲಾ ಪಂಚಾಯತಿ ಮಾಜಿ ಹೊನ್ನನಾಯ್ಕ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ, ರಾಮಲಿಂಗಯ್ಯ, ಹಿರಿಯೂರು ನವೀನ, ನರಸಿಂಹಮಾದ ನಾಯ್ಕ, ಚನ್ನಕೇಶವ, ಮುನ್ನವರ್ ಪಾಷಾ , ಕನ್ನಳ್ಳಿ ಲಕ್ಷ್ಮಣ, ಬಸವರಾಜು, ಶಿವಕುಮಾರ್, ಚಿದರವಳ್ಳಿ ಮಹೇಶ, ಅತ್ತಳ್ಳಿ ಮಹೇಶ, ಕೊಳ್ತೂರು ಸೋಮಣ್ಣ, ಕುಮಾರ್, ಸೋಸಲೆ ಮಂಜು, ಕುಕ್ಕೂರ್ ಪ್ರಸನ್ನ, ಸ್ವಾಮಿಗೌಡ,ಟೌನ್ ಅಂದಾನಿಗೌಡ, ಅನೂಪ, ನಂಜುAಡಸ್ವಾಮಿ, ಪುಟ್ಟಸ್ವಾಮಿ, ರಂಗಸ್ವಾಮಿ, ತಲಕಾಡು ನಾಗರಾಜ್ ಮೂರ್ತಿ,ಕೋಣಗಳ್ಳಿ ನಾಗರಾಜ್, ಕಲಿಯೂರು ಶಿವಣ್ಣ, ಶಿವಮ್ಮ, ವಾಟಾಳ್ ನಾಗೇಶ, ಹೆಮ್ಮಿಗೆ ಸೋಮಣ್ಣ, ಸಾಗರ್, ಮಲ್ಲಯ್ಯ ಪ್ರಸಾದ್, ಸೋಮಣ್ಣ, ಮಾದೇಗೌಡ, ಹೇಳಿದಂತೆ ಇತರರು ಇದ್ದರು.
ಡಾ.ಹೆಚ್.ಸಿ.ಮಹದೇವಪ್ಪರಿಗೆ ಸಚಿವ ಸ್ಥಾನ ನೀಡಲು ಆಗ್ರಹ



