ಬೆಂಗಳೂರು: ಇಂಡಿಯನ್ ಸಾಫ್ಟ್ ಬಾಲ್ ಕ್ರಿಕೆಟ್ ಲೀಗ್ (ಐಎಸ್ ಸಿಎಲ್) ತನ್ನ ಮುಂದಿನ ಹಂತದ ಬೆಳವಣಿಗೆಗಾಗಿ ಮಹತ್ವಾಕಾಂಕ್ಷೆಯ ಯೋಜನೆಯನ್ನು ಶನಿವಾರ ಪ್ರಕಟಿಸಿದ್ದು, ಭಾರತದಾದ್ಯಂತ ಸಾಫ್ಟ್ ಬಾಲ್ ಮತ್ತು ಟೆನಿಸ್-ಬಾಲ್ ಕ್ರಿಕೆಟಿಗರಿಗೆ ವ್ಯವಸ್ಥಿತ ಹಾಗೂ ವೃತ್ತಿಪರ ರಾಷ್ಟಿçÃಯ ವೇದಿಕೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರ ಬೆಂಬಲ ಹೊಂದಿರುವ 32 ತಂಡಗಳ ಲೀಗ್, ಭಾರತದಾದ್ಯಂತ ಗ್ರಾಸ್ರೂಟ್ಸ್ ಸಾಫ್ಟ್ಬಾಲ್ ಕ್ರಿಕೆಟ್ಗೆ ಹೊಸ ರೂಪ ನೀಡುವ ಗುರಿ ಹೊಂದಿದೆ.ಬೆಂಗಳೂರಿನ ಐಎಎಸ್ ಅಸೋಸಿ
ಯೇಷನ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಐಎಸ್ ಸಿಎಲ್ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಗಂಗಾಧರ್ ರಾಜು ಮತ್ತು ಲೀಗ್ನ ನಾಯಕತ್ವ ತಂಡವು, ಲೀಗ್ ಆರಂಭವಾದ ಬಳಿಕ ಸಾಧಿಸಿರುವ ಪ್ರಗತಿಯನ್ನು ವಿವರಿಸುವುದರ ಜತೆಗೆ, ಸೀಸನ್ 2ಕ್ಕೂ ಮುನ್ನ ಫ್ರಾಂಚೈಸಿ, ಆಟಗಾರರು, ಬ್ರಾ÷್ಯಂಡ್ ಮತ್ತು ವಾಣಿಜ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಯೋಜನೆಗಳನ್ನು ಪ್ರಕಟಿಸಿತು.ಭಾರತದ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರು ಐಎಸ್ ಸಿಎಲ್ನ ಬ್ರ್ಯಾಂ ಡ್ ಅಂಬಾಸಿಡರ್ಗಳಾಗಿ ಲೀಗ್ನೊಂದಿಗೆ ಕೈಜೋಡಿಸಿದ್ದಾರೆ. ಇದು ಲೀಗ್ಗೆ ಮಹತ್ವದ ಕ್ರಿಕೆಟ್ ಗೌರವವನ್ನು ನೀಡಿದೆ. ಗ್ರಾಸ್ರೂಟ್ಸ್ ಕ್ರಿಕೆಟಿಗರಿಗೆ ಅವಕಾಶಗಳನ್ನು ಸೃಷ್ಟಿಸುವ ಐಎಸ್ ಸಿಎಲ್ ನ ಸಾಮರ್ಥ್ಯದ ಕುರಿತು ಮಾತನಾಡಿದ ಮಾಜಿ ಭಾರತ ತಂಡದ ಆಫ್-ಸ್ಪಿನ್ನರ್ ಹಾಗೂ ಐಎಸ್ ಸಿಎಲ್ ಬ್ರ್ಯಾಂಡ್ ಅಂಬಾಸಿಡರ್ ಹರ್ಭಜನ್ ಸಿಂಗ್, ಭಾರತದಾದ್ಯಂತ, ವಿಶೇಷವಾಗಿ ಗ್ರಾಸ್ರೂಟ್ಸ್ ಮಟ್ಟದಲ್ಲಿ ಅಪಾರ ಕ್ರಿಕೆಟ್ ಪ್ರತಿಭೆ ಇದೆ. ಆದರೆ ಪ್ರತಿಯೊಬ್ಬ ಪ್ರತಿಭಾವಂತ ಆಟಗಾರನಿಗೂ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ಅಗತ್ಯವಾದ ವೇದಿಕೆ ಅಥವಾ ಅವಕಾಶ ಸಿಗುವುದಿಲ್ಲ. ಐಎಸ್ ಸಿಎಲ್ ಆ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು ಎಂದು ಹೇಳಿದರು.