ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿರುವ `ಕನ್ನಡ ಮಹಿಳಾ ಜಾನಪದ ಸಮ್ಮೇಳನ'ವು ಮುಂದಿನ ಸೆಪ್ಟೆಂಬರ್ 18ರ ಶುಕ್ರವಾರದಂದು ಮೂಡಲಪಾಳ್ಯದ ಕಲ್ಯಾಣನಗರದಲ್ಲಿರುವ ಜ್ಞಾನಸೌಧ ಸಭಾಂಗಣದಲ್ಲಿ ಅತ್ಯಂತ ವೈಭವದಿಂದ ಜರುಗಲಿದೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ಆಯೋಜಿಸಿರುವ ಪ್ರಪಥಮ ಮಹಿಳಾ ಜಾನಪದ ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಪತ್ರಕರ್ತರಾದ ಡಾ. ಜಿ. ವೈ. ಪದ್ಮನಾಗರಾಜ್ ಅವರನ್ನು ಆಯ್ಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಧ್ಯಕ್ಷರಾದ ಡಾ ಜಾನಪದ ಎಸ್ ಬಾಲಾಜಿ ರವರು ಗೋವಿಂದರಾಜನಗರ ಘಟಕದ ಪದಾಧಿಕಾರಿಗಳ ಪೂರ್ವಾಭಾವಿ ಸಭೆಯನ್ನು ಸಮ್ಮೇಳನಾಧ್ಯಕ್ಷರಾದ ಡಾ. ಜಿ ವೈ ಪದ್ಮನಾಗರಾಜ್ ರವರ ಜೊತೆಯಲ್ಲಿ ಚರ್ಚೆ ನಡೆಸಿದರು.