ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ಮತ್ತೆ ಸರ್ಜರಿ ನಡೆಯುವ ಸಾಧ್ಯತೆಯಿದೆ. ಓರ್ವ ಸಚಿವರ ಹುದ್ದೆ ಖಾಲಿಬಿಟ್ಟು ಉಳಿದಂತೆ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಿದ್ದರು. ಇದಾದ ನಂತರ ಸಚಿವ ಸ್ಥಾನದ ವಂಚಿತರು ತೀವ್ರ ಅಸಮಾಧಾನ ಹೊರ ಹಾಕಿರುವ ಬೆನ್ನಲ್ಲೇ ಮತ್ತೆ ಸಚಿವ ಸಂಪುಟಕ್ಕೆ ಹೊಸಬರನ್ನು ತೆಗೆದುಕೊಳ್ಳಲು ಚಿಂತಿಸಿರುವ ಎಐಸಿಸಿ ವರಿಷ್ಠರು ಹಾಲಿ ಸಂಪುಟದಲ್ಲಿರುವ ಹಲವರನ್ನು ಕೈಬಿಟ್ಟು ಹೊಸಬರನ್ನು ಸೇರ್ಪಡೆಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ವರಿಷ್ಠರು ಈ ತಿಂಗಳ 27ರಂದು ದೆಹಲಿಗೆ ಬರುವಂತೆ ತಿಳಿಸಿದ್ದಾರೆ.
ದೆಹಲಿಯಲ್ಲಿ ಹಾಲಿ ಸಚಿವ ಸ್ಥಾನ ಸಿಗದ ಅಸಮಾಧಾನ ಹೊಂದಿರುವ ಶಾಸಕರು ಹಾಗೂ ಸಚಿವರಾಗಿ ರುವವರ ಪಟ್ಟಿಯನ್ನು ಪರಿಶೀಲಿಸಿ ಸಂಪುಟದಿAದ ಕೆಲವರನ್ನು ಕೈಬಿಟ್ಟು ಹೊಸಬರನ್ನು ಸೇರ್ಪಡೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.