NEET-UG ಪರೀಕ್ಷೆ ರದ್ದಾದ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವ್ಯವಸ್ಥೆಯಲ್ಲಿನ ವೈಫಲ್ಯದಿಂದ ದುಃಖಿತನಾಗಿದ್ದ ನನಗೆ ಭವಿಷ್ಯದಲ್ಲಿ ದೇಶವಾಸಿಗಳನ್ನು ಕಾಪಾಡಬೇಕಾದ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಮತ್ತು ಅವರುಗಳು ಮಾಡಿಕೊಂಡ ಆತ್ಮಹತ್ಯೆಯ ಸುದ್ದಿ ನನ್ನನ್ನು ಬೆಚ್ಚಿ ಬೀಳಿಸಿದೆ. ಇದರಿಂದಾಗಿ ದಿಗ್ಭ್ರಮೆಗೊಂಡಿದ್ದೇನೆ.ಆದರೂ, ಅವರೊಂದಿಗೆ ಸಂಭಾಷಣೆ ನಡೆಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಇದು ಅಂಕಣ ಎಂಬುದು ಗೊತ್ತಿದೆ. ಹಾಗಂತ ನನಗೆ ಉತ್ತರ ಸಿಗದಿರಬಹುದು. ಆದರೆ ಲೇಖನ ಓದುವವರಿಂದ ನಾನು ಪ್ರತಿಕ್ರಿಯೆ ಪಡೆಯುತ್ತೇನೆ. ಒಂದೊಮ್ಮೆ ಅವರಿಂದ ಅವರ ಪ್ರತಿಕ್ರಿಯೆಯಿಂದ ವ್ಯವಸ್ಥೆಯು ವಿಫಲಗೊಂಡಾಗ ಧೈರ್ಯ ಮತ್ತು ಆತ್ಮವಿಶ್ವಾಸದ ಬದಲು ಸ್ವಯಂ ವಿನಾಶವನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಯುವಜನರ ಪ್ರವೃತ್ತಿಯನ್ನು ತಡೆಯುವ ಉದ್ದೇಶವೂ ನನ್ನದಾಗಿದೆ.ಮೇ 3 ರಂದು ನಡೆಯಬೇಕಿದ್ದ ಮೂಲ ಪರೀಕ್ಷೆಯನ್ನು ಓಖಿಂ ಮೇ 12 ರಂದು ರದ್ದುಗೊಳಿಸಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪದ ಮೇಲೆ ಹಾಗೂ ಪ್ರಸಾರವಾದ ಊಹೆ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಯ ನಡುವಿನ ಅನುರೂಪತೆ ಗಮನಿಸಿದ ನಂತರ ಮರು ಪರೀಕ್ಷೆಯನ್ನು ಘೋಷಿಸಿತ್ತು.ಮೇ 3ರ ಪರೀಕ್ಷೆಯ ನಂತರ, ರಾಜಸ್ಥಾನದ ಸಿಕಾರ್ ತರಬೇತಿ ಕೇಂದ್ರಗಳಲ್ಲಿ ವಾಟ್ಸಾಪ್ ಮತ್ತು ಇತರೆ ಬಗೆಯ ಮಾಧ್ಯಮಗಳ ಮೂಲಕ ಹಂಚಿಕೊಳ್ಳಲಾದ ಊಹಾ ಪತ್ರಿಕೆಯು ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಅನೇಕ ಪ್ರಶ್ನೆಗಳಿಗೆ ಬಹುತೇಕ ಹೊಂದಿಕೆಯಾಗಲಿವೆ ಎಂಬ ಆರೋಪ ಎದ್ದಿದ್ದವು. ಸಿಕಾರ್ನ ರಸಾಯನಶಾಸ್ತ್ರ ಶಿಕ್ಷಕ ಶಶಿಕಾಂತ್ ಸುತಾರ್, ಅಧಿಕೃತ ಪರೀಕ್ಷಾ ಪತ್ರಿಕೆಯೊಂದಿಗೆ ಹೋಲಿಸಿದ ನಂತರ ಸೋರಿಕೆಯಾದ ಪ್ರಶ್ನೆಗಳ ಪ್ರಸರಣದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸುಮಾರು 140 ಪ್ರಶ್ನೆಗಳು ಅದ್ಹೇಗೆ ಹೊಂದಿಕೆಯಾಗುತ್ತವೆ ಎಂದು ಪ್ರಶ್ನಿಸಿದ್ದರು. ಮೊದಲಿಗೆ ರಾಜಸ್ಥಾನ ಪೊಲೀಸ್ ವಿಶೇಷ ಕಾರ್ಯಾಚರಣೆ ಗುಂಪು ತನಿಖೆಯನ್ನು ಪ್ರಾರಂಭಿಸಿತಾದರೂ, ಹಲವರನ್ನು ಬಂಧಿಸಿದ ನಂತರ ಪ್ರಕರಣವನ್ನು ಕೇಂದ್ರ ತನಿಖಾ ದಳ, ಸಿಬಿಐಗೆ ವಹಿಸಲಾಗಿದೆ.2026 ಮೇ 12 ರಂದು, ಎನ್.ಟಿ.ಎ ಪರೀಕ್ಷೆಯನ್ನು ಅಧಿಕೃತವಾಗಿ ರದ್ದುಗೊಳಿಸಿ ಮರು ಪರೀಕ್ಷೆ ನಡೆಸಲಾಗುವುದೆಂದು ಘೋಷಿ ಸಿತು. ಜೊತೆಗೆ ವಿದ್ಯಾರ್ಥಿಗಳು ಪಾವತಿಸಿರುವ ಶುಲ್ಕವನ್ನು ಹಿಂತಿರುಗಿಸಿ. ಹೊಸ ನೋಂದಣಿ ಅಥವಾ ಹೆಚ್ಚುವರಿ ಶುಲ್ಕಗಳನ್ನು ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.ಈಗ ನನಗಿರುವ ಕೋಪ ಸೋರಿಕೆಯಾದ ಪ್ರಶ್ನೆಪತ್ರಿಕೆಯ ಬಗ್ಗೆ ಅಲ್ಲ. ಬದಲಿಗೆ ನ್ಯಾಯ, ಅರ್ಹತೆ ಮತ್ತು ಸಮಾನ ಅವಕಾಶದ ಭರವಸೆ ನೀಡಿದ ಸಂಸ್ಥೆಗಳಿಂದ ಆಗಿರುವ ದ್ರೋಹದ ಬಗ್ಗೆ ಬೇಸರವಿದೆ. ಮುಖ್ಯವಾಗಿ, ದೆಹಲಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಗೂ ದುಃಖವಿದೆ.ಹೌದು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತೊಮ್ಮೆ ದೇಶವನ್ನು ಬೆಚ್ಚಿಬೀಳಿಸಿದೆ. ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಕೊಡಿಸುವ ಭರವಸೆ ಇಟ್ಟ ಪರೀಕ್ಷೆಯಲ್ಲಿ ರಾಜಿ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 2024ರಲ್ಲಿ ಮತ್ತು ಇದೀಗ 2026ರಲ್ಲಿ ಇದೇ ಬಗೆಯ ಘಟನೆ ಜರುಗಿದೆ.



